‘ತಂದೆ–ತಾಯಿಯ ಕಾಳಜಿ ಬಗ್ಗೆ ನನಗೆ ಅರಿವಿತ್ತು. ಅದರೊಟ್ಟಿಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವೂ ಇತ್ತು. ಹೀಗಾಗಿ, ಮುಂಬೈಗೆ ಬಂದೆ. ಆ ಸಮಯದಲ್ಲಿ ನನ್ನ ತಂದೆ–ತಾಯಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ ಎಂಬುದು ಗೊತ್ತು.ನಾನು ಎಲ್ಲಿರಬೇಕು ಅಂತಾ ನನಗೆ ತಿಳಿದಿತ್ತು. ಭವಿಷ್ಯದ ಬಗ್ಗೆ ಹಾಗೂ ನಾನು ಕಂಡ ಸಾಧನೆ ಬಗ್ಗೆ ಅಚಲ ನಿರ್ಧಾರ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ’ ಎಂದು ಹೇಳಿದ್ದಾರೆ.