ಗಿರೀಶ್ ಶಿವಣ್ಣ, ಕೀರ್ತಿ ಭಾನು, ರವಿ ಭಟ್ ಮತ್ತು ಮನು ಹೆಗಡೆ ನಟಿಸಿದ್ದ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಅಲಂಕಾರ್ ಪಾಂಡಿಯನ್. ರಾಗಿಣಿ ಇದರಲ್ಲಿ ರೇಷ್ಮಾ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ತನ್ನ ತಂಗಿಯ ಅಪಹರಣದ ಬೆನ್ನಟ್ಟಿದ ರೇಷ್ಮಾ ಟೆರರಿಸ್ಟ್ಗಳ ಚಕ್ರವ್ಯೂಹದಲ್ಲಿ ಸಿಲುಕುತ್ತಾಳೆ. ಅದರಿಂದ ಹೊರಬರಲು ಏನೆಲ್ಲ ಕಸರತ್ತು ನಡೆಸುತ್ತಾಳೆ ಎಂಬುದೇ ಈ ಚಿತ್ರದ ಹೂರಣ. ಈ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ರಾಗಿಣಿಯ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು.