<p>‘ಆಪ್ತಮಿತ್ರ’ ಮತ್ತು ‘ಆಪ್ತರಕ್ಷಕ’ ಚಿತ್ರಗಳನ್ನು ಕನ್ನಡ ಸಿನಿಪ್ರಿಯರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ‘ಆಪ್ತಮಿತ್ರ’ ಚಿತ್ರವಂತೂಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ. ವರ್ಷಗಳ ಕಾಲ ತೆರೆ ಮೇಲೆ ಮಿಂಚಿದ್ದ ಈ ಸಿನಿಮಾ ನಟ ವಿಷ್ಣುವರ್ಧನ್ ಅವರ ವೃತ್ತಿ ಬದುಕಿನಲ್ಲಿ ಅಸಾಧಾರಣ ಚಿತ್ರವೂ ಎನಿಸಿದೆ. ‘ಆಪ್ತಮಿತ್ರ’ ನಂತರ 'ಆಪ್ತರಕ್ಷಕ' ಸಿನಿಮಾ ಕೂಡ ತೆರೆಕಂಡಿತ್ತು.</p>.<p>ನಾಗವಲ್ಲಿ ಪಾತ್ರ ಕೇಂದ್ರವಾಗಿಟ್ಟುಕೊಂಡು ಆಪ್ತಮಿತ್ರ ಭಾಗ –3 ಚಿತ್ರ ಮಾಡಲು ಮುಂದಾಗಿದ್ದಹೊಸಬರ ತಂಡವೊಂದು, ನಂತರ ಶೀರ್ಷಿಕೆ ಬದಲಿಸಿಕೊಂಡು ಚಿತ್ರವನ್ನು ಪೂರ್ಣಗೊಳಿಸಿದೆ.ಮಾದೇಶ್ ಎಂಟರ್ಪ್ರೈಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ‘ಮಿತ್ರರಕ್ಷಕ’ ಶೀರ್ಷಿಕೆ ಇಡಲಾಗಿದೆ. ಇದೇ 15ರಂದು ಮೈ ಎಟಿಎಂ ಮೊಬೈಲ್ ಆ್ಯಪ್ ಒಟಿಟಿ ಮೂಲಕ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.</p>.<p>ಓಂಪ್ರಕಾಶ್ ನಾಯಕ್, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜತೆಗೆ ನಾಗವಲ್ಲಿ ಪಾತ್ರದಲ್ಲಿ ಅವರು ನಟಿಸಿದ್ದಾರೆ.</p>.<p>ಸ್ನೇಹಿತರ ತಂಡದಟ್ಟ ಕಾಡಿಗೆ ಹೋದಾಗ ತಂಡದಲ್ಲಿದ್ದವರಲ್ಲಿ ಒಬ್ಬರ ಕೊಲೆ ನಡೆಯುತ್ತದೆ. ಆ ಕೊಲೆಯನ್ನು ನಾಗವಲ್ಲಿಯೇ ಮಾಡಿದೆ ಎಂದೂ ತಂಡದಲ್ಲಿದ್ದಕೆಲವರು ಭಾವಿಸುತ್ತಾರೆ. ಆದರೆ ನಿಜವಾದ ಕೊಲೆಗಾರ ಯಾರು, ಹೇಗೆ ಮತ್ತು ಏಕೆ ಕೊಲೆ ನಡೆಯುತ್ತದೆ ಎನ್ನುವ ರಹಸ್ಯವೇ ಈ ಚಿತ್ರದ ಕಥಾಹಂದರ.ಶೃಂಗೇರಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.</p>.<p>ಕಿರಣ್ ಛಾಯಾಗ್ರಹಣ, ನವೀನ್ ಸಹನಿರ್ದೇಶನ, ಓಂಪ್ರಕಾಶ್ ಸಂಕಲನ, ದೇವದಾಸ್ ಸಂಗೀತವಿದೆ. ಶ್ರೀಧರ್, ಸ್ಮೈಲ್ ಶಿವು, ಸ್ವಪ್ನ, ಕಾವ್ಯ, ಅವಿನಾಶ್ ಭಾರದ್ವಾಜ್, ಪ್ರಸನ್ನ, ರುದ್ರೇಶ್, ಶಂಕರ್ ಬಾಬು, ಅನಿತಾ ಹೆಗ್ಗರ್, ನೆಲಮಂಗಲ ಬಾಬು ಅವರ ತಾರಾಗಣವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಆಪ್ತಮಿತ್ರ’ ಮತ್ತು ‘ಆಪ್ತರಕ್ಷಕ’ ಚಿತ್ರಗಳನ್ನು ಕನ್ನಡ ಸಿನಿಪ್ರಿಯರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ‘ಆಪ್ತಮಿತ್ರ’ ಚಿತ್ರವಂತೂಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ. ವರ್ಷಗಳ ಕಾಲ ತೆರೆ ಮೇಲೆ ಮಿಂಚಿದ್ದ ಈ ಸಿನಿಮಾ ನಟ ವಿಷ್ಣುವರ್ಧನ್ ಅವರ ವೃತ್ತಿ ಬದುಕಿನಲ್ಲಿ ಅಸಾಧಾರಣ ಚಿತ್ರವೂ ಎನಿಸಿದೆ. ‘ಆಪ್ತಮಿತ್ರ’ ನಂತರ 'ಆಪ್ತರಕ್ಷಕ' ಸಿನಿಮಾ ಕೂಡ ತೆರೆಕಂಡಿತ್ತು.</p>.<p>ನಾಗವಲ್ಲಿ ಪಾತ್ರ ಕೇಂದ್ರವಾಗಿಟ್ಟುಕೊಂಡು ಆಪ್ತಮಿತ್ರ ಭಾಗ –3 ಚಿತ್ರ ಮಾಡಲು ಮುಂದಾಗಿದ್ದಹೊಸಬರ ತಂಡವೊಂದು, ನಂತರ ಶೀರ್ಷಿಕೆ ಬದಲಿಸಿಕೊಂಡು ಚಿತ್ರವನ್ನು ಪೂರ್ಣಗೊಳಿಸಿದೆ.ಮಾದೇಶ್ ಎಂಟರ್ಪ್ರೈಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ‘ಮಿತ್ರರಕ್ಷಕ’ ಶೀರ್ಷಿಕೆ ಇಡಲಾಗಿದೆ. ಇದೇ 15ರಂದು ಮೈ ಎಟಿಎಂ ಮೊಬೈಲ್ ಆ್ಯಪ್ ಒಟಿಟಿ ಮೂಲಕ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.</p>.<p>ಓಂಪ್ರಕಾಶ್ ನಾಯಕ್, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜತೆಗೆ ನಾಗವಲ್ಲಿ ಪಾತ್ರದಲ್ಲಿ ಅವರು ನಟಿಸಿದ್ದಾರೆ.</p>.<p>ಸ್ನೇಹಿತರ ತಂಡದಟ್ಟ ಕಾಡಿಗೆ ಹೋದಾಗ ತಂಡದಲ್ಲಿದ್ದವರಲ್ಲಿ ಒಬ್ಬರ ಕೊಲೆ ನಡೆಯುತ್ತದೆ. ಆ ಕೊಲೆಯನ್ನು ನಾಗವಲ್ಲಿಯೇ ಮಾಡಿದೆ ಎಂದೂ ತಂಡದಲ್ಲಿದ್ದಕೆಲವರು ಭಾವಿಸುತ್ತಾರೆ. ಆದರೆ ನಿಜವಾದ ಕೊಲೆಗಾರ ಯಾರು, ಹೇಗೆ ಮತ್ತು ಏಕೆ ಕೊಲೆ ನಡೆಯುತ್ತದೆ ಎನ್ನುವ ರಹಸ್ಯವೇ ಈ ಚಿತ್ರದ ಕಥಾಹಂದರ.ಶೃಂಗೇರಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.</p>.<p>ಕಿರಣ್ ಛಾಯಾಗ್ರಹಣ, ನವೀನ್ ಸಹನಿರ್ದೇಶನ, ಓಂಪ್ರಕಾಶ್ ಸಂಕಲನ, ದೇವದಾಸ್ ಸಂಗೀತವಿದೆ. ಶ್ರೀಧರ್, ಸ್ಮೈಲ್ ಶಿವು, ಸ್ವಪ್ನ, ಕಾವ್ಯ, ಅವಿನಾಶ್ ಭಾರದ್ವಾಜ್, ಪ್ರಸನ್ನ, ರುದ್ರೇಶ್, ಶಂಕರ್ ಬಾಬು, ಅನಿತಾ ಹೆಗ್ಗರ್, ನೆಲಮಂಗಲ ಬಾಬು ಅವರ ತಾರಾಗಣವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>