ಮೇ ತಿಂಗಳಲ್ಲಿ ‘ಸಾಲ’

ಸ್ವಸಹಾಯ ಸಂಘಗಳಲ್ಲಿ ಸಾಲ ಪಡೆದವರ ಫಜೀತಿ ಹೇಗಿರುತ್ತದೆ? ಅದು ಮಹಿಳೆಯರ ವೈಯಕ್ತಿಕ ಬದುಕಿನ ಮೇಲೆ ಮಾಡುವ ಪರಿಣಾಮ ಏನು ಎಂಬುದನ್ನು ಹೇಳಲಿದೆ ‘ಸಾಲ’.
ಅಂದಹಾಗೆ ಈ ಕಥೆ 2018ರ ಪ್ರಜಾವಾಣಿ ‘ದೀಪಾವಳಿ’ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿತ್ತು. ಮೂಲಕಥೆ ‘ಸಣ್ಣ ಸಾಲ’. ದುಡ್ಡನಹಳ್ಳಿ ಮಂಜುನಾಥ್ ಅವರು ಈ ಕಥೆ ಬರೆದವರು. ಈ ಚಿತ್ರ ಮೇಯಲ್ಲಿ ತೆರೆ ಕಾಣಲಿದೆ.
ಎಂ.ಆರ್.ನಟೇಶ್ಕುಮಾರ್ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಮಹಿಳಾ ಪ್ರಧಾನ ಹಾಗೂ ಸಮಾಜಮುಖಿ ಸಿನಿಮಾ ಆಗಿದ್ದು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಲ್ಲಿ ಮತ್ತು ಇತರ ಕಡೆ ಕಡಿಮೆ ಬಡ್ಡಿಗಾಗಿ ಸಾಲ ಪಡೆಯುವುದರಿಂದ ಹೆಣ್ಣಿನ ವೈಯಕ್ತಿಕ ಜೀವನದಲ್ಲಿ ಆಗುವ ಅನಾಹುತಗಳನ್ನು ಹಾಸ್ಯ, ಸೆಂಟಿಮೆಂಟ್ ಮೂಲಕ ತೋರಿಸಲಾಗಿದೆ. ಬಡ, ಮಧ್ಯಮ ವರ್ಗದದವರ ಜೀವನದ ವಾಸ್ತವಿಕತೆಗೆ ಬಹಳ ಹತ್ತಿರವಾಗಿದೆ ಎಂದಿದೆ ಚಿತ್ರ ತಂಡ.
ವೇತನಕ್ಕಾಗಿ 6 ತಿಂಗಳು ಅಲೆದಿದ್ದೆ: ಸಿನಿಪಯಣದ ಆರಂಭದ ದಿನಗಳನ್ನು ನೆನೆದ ಸಿದ್ದಿಕಿ
ತಾರಾಗಣದಲ್ಲಿ ಸಿಂಚನಾಗೌಡ, ಭೈರವಿ ಬೀರೂರು, ಸುನಿಲ್ ಕುಮಾರ್, ಸುಹಾಸ ಆರಾಧ್ಯ, ಸತೀಶ್ಗೌಡ, ಮೈತ್ರಿ, ಮಂಜು ನಂಜನಗೂಡು, ಮುನಿ, ದೇವಿಪ್ರಸಾದ್, ಧನುಷ್ ಇದ್ದಾರೆ. ವಿನುಮನಸು ಸಂಗೀತ, ಕೃಷ್ಣಸಾರಥಿ ಛಾಯಾಗ್ರಹಣ, ವಿನಯ್ಕುಮಾರ್ ಕೂರ್ಗ್ ಸಂಕಲನವಿದೆ. ಕುಣಿಗಲ್, ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಿರಿ ಮ್ಯೂಸಿಕ್ ಹೊರತಂದಿರುವ ಮೂರು ಹಾಡುಗಳ ಪೈಕಿ ಎರಡು ಗೀತೆಗಳಿಗೆ ಮಾನಸಹೊಳ್ಳ ಧ್ವನಿಯಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.