ಈ ಕುರಿತು ಶಿವಸೇನೆಯ ಯುವ ವಿಭಾಗದ ನಾಯಕ ರಾಹುಲ್ ಕನಾಲ್ ಮಾಹಿತಿ ನೀಡಿ, ‘ನಾವು ಯುವಕನಿಗೆ ಪಡಿತರ ಮತ್ತು ಶೈಕ್ಷಣಿಕ ಪರಿಕರ ಒದಗಿಸಿದ್ದೇವೆ. ನಾವು ಅವನ ಜೊತೆಗಿದ್ದೇವೆ. ಮುಂದೆಯೂ ಅವರ ಬದುಕಿಗೆ ಅಗತ್ಯ ನೆರವು ನೀಡುತ್ತೇವೆ. ಸಲ್ಮಾನ್ ಅವರ ಅಭಿಮಾನಿಗಳ ಕುಟುಂಬದವರೂ ನಮಗೆ ಈ ರೀತಿ ಸಹಾಯ ಮಾಡಲು ಸಹಕರಿಸುತ್ತಿದ್ದಾರೆ. ಅಗತ್ಯ ಉಳ್ಳ ಪ್ರತಿಯೊಬ್ಬ ಮನುಷ್ಯನಿಗೂ ನೆರವಾಗಬೇಕು ಎಂದು ಸಲ್ಮಾನ್ ನಮಗೆ ಹೇಳಿದ್ದಾರೆ. ಅವರ ಮೂಲಕ ಸಹಾಯ ಕೇಳಿ ಬರುವ ಪ್ರತಿಯೊಬ್ಬರಿಗೂ ನೆರವಾಗಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.