<p>ಕಲ್ಯಾಣ್ ಕೃಷ್ಣ ಅವರ ಬಹುನಿರೀಕ್ಷಿತ ‘ಬಂಗಾರ್ರಾಜು’ ಚಿತ್ರದಲ್ಲಿ ನಟಿ ಸಮಂತಾ ಅಕ್ಕಿನೇನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಅವರ ಪತಿ ನಾಗಚೈತನ್ಯ ನಟಿಸುತ್ತಿರುವುದು ವಿಶೇಷ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ನಾಗಾರ್ಜುನ ಅಕ್ಕಿನೇನಿ.</p>.<p>ನಾಗಾರ್ಜುನ, ನಾಗಚೈತನ್ಯ ಹಾಗೂ ಸಮಂತಾ ಈ ಮೂವರೂ ಈ ಸಿನಿಮಾದ ಭಾಗವಾಗಿರುವುದರಿಂದ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಸಮಂತಾ ಅವರದ್ದೇ ಪ್ರಮುಖ ಪಾತ್ರ. ಆದರೆ ಯಾವ ರೀತಿಯ ಪಾತ್ರ ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಅಕ್ಕಿನೇನಿ ನಾಗಾರ್ಜುನ ಚಿತ್ರದ ಕೆಲಸಗಳ ಬಗ್ಗೆ ಈಗಾಗಲೇ ಕಲ್ಯಾಣ್ ಕೃಷ್ಣ ಜೊತೆ ಮಾತನಾಡಿದ್ದಾರೆ. ಇದು 2016ರಲ್ಲಿ ಬಿಡುಗಡೆಯಾದ ‘ಸೋಗ್ಗಾಡೆ ಚಿನ್ನಿನಾಯನಾ’ ಚಿತ್ರದ ಸೀಕ್ವೆಲ್.</p>.<p>‘ಸೋಗ್ಗಾಡೆ ಚಿನ್ನಿನಾಯನಾ’ ಚಿತ್ರವನ್ನು ಕಲ್ಯಾಣ್ ಕೃಷ್ಣ ಅವರೇ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ತನ್ನ ಸಂಬಂಧಿಕರಿಂದಲೇ ಕೊಲೆಯಾಗುವ ವ್ಯಕ್ತಿ ಬಂಗಾರ್ರಾಜು, ಯಮನ ಒಪ್ಪಿಗೆ ಪಡೆದು ಭೂಮಿಗೆ ವಾಪಸ್ ಬಂದು ತನ್ನ ಸಾವಿನ ಹಿಂದಿನ ಕಾರಣವನ್ನು ಪತ್ತೆ ಹಚ್ಚುವುದು ಸಿನಿಮಾದ ಕತೆ. ಇದು ಸೂಪರ್ಹಿಟ್ ಆಗಿತ್ತು. ಇದರಲ್ಲಿ ಅಕ್ಕಿನೇನಿ ನಾಗಾರ್ಜುನ, ರಮ್ಯಕೃಷ್ಣ, ಲಾವಣ್ಯ ತ್ರಿಪಾಠಿ ನಟಿಸಿದ್ದರು. ಈ ಸಿನಿಮಾವು ಕನ್ನಡದಲ್ಲಿ ‘ಉಪೇಂದ್ರ ಮತ್ತೆ ಬಾ’ ಎಂದು ರಿಮೇಕ್ ಆಗಿತ್ತು. ಇದರಲ್ಲಿ ಉಪೇಂದ್ರ, ಪ್ರೇಮಾ ಹಾಗೂ ಶ್ರುತಿ ಹರಿಹರನ್ ನಟಿಸಿದ್ದರು.</p>.<p>ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾಕ್ಕೆ ‘ಬಂಗಾರ್ರಾಜು’ ಎಂದೇ ಹೆಸರಿಟ್ಟಿದ್ದಾರೆ .</p>.<p>ಸಮಂತಾ ಹಾಗೂ ನಾಗಚೈತನ್ಯ ಜೋಡಿಯಾಗಿ ನಟಿಸಲಿದ್ದಾರೆ. ಇದು ಇವರಿಬ್ಬರು ಜೋಡಿಯಾಗಿ ನಟಿಸುತ್ತಿರುವ ಐದನೇ ಚಿತ್ರವಾಗಿದೆ. ಈ ಹಿಂದೆ ‘ಏ ಮಾಯ ಚೇಸಾವೆ’, ‘ಮನಂ’,<br />‘ಆಟೋನಗರ್ ಸೂರ್ಯ’ ಹಾಗೂ ‘ಮಜಿಲಿ’ಯಲ್ಲಿ ಜೊತೆಯಾಗಿ ನಟಿಸಿದ್ದರು.</p>.<p>ನಾಗಾರ್ಜುನ ತಮ್ಮ ಅನ್ನಪೂರ್ಣ ಸ್ಟುಡಿಯೊ ಬ್ಯಾನರ್ನಡಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲ್ಯಾಣ್ ಕೃಷ್ಣ ಅವರ ಬಹುನಿರೀಕ್ಷಿತ ‘ಬಂಗಾರ್ರಾಜು’ ಚಿತ್ರದಲ್ಲಿ ನಟಿ ಸಮಂತಾ ಅಕ್ಕಿನೇನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಅವರ ಪತಿ ನಾಗಚೈತನ್ಯ ನಟಿಸುತ್ತಿರುವುದು ವಿಶೇಷ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ನಾಗಾರ್ಜುನ ಅಕ್ಕಿನೇನಿ.</p>.<p>ನಾಗಾರ್ಜುನ, ನಾಗಚೈತನ್ಯ ಹಾಗೂ ಸಮಂತಾ ಈ ಮೂವರೂ ಈ ಸಿನಿಮಾದ ಭಾಗವಾಗಿರುವುದರಿಂದ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಸಮಂತಾ ಅವರದ್ದೇ ಪ್ರಮುಖ ಪಾತ್ರ. ಆದರೆ ಯಾವ ರೀತಿಯ ಪಾತ್ರ ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಅಕ್ಕಿನೇನಿ ನಾಗಾರ್ಜುನ ಚಿತ್ರದ ಕೆಲಸಗಳ ಬಗ್ಗೆ ಈಗಾಗಲೇ ಕಲ್ಯಾಣ್ ಕೃಷ್ಣ ಜೊತೆ ಮಾತನಾಡಿದ್ದಾರೆ. ಇದು 2016ರಲ್ಲಿ ಬಿಡುಗಡೆಯಾದ ‘ಸೋಗ್ಗಾಡೆ ಚಿನ್ನಿನಾಯನಾ’ ಚಿತ್ರದ ಸೀಕ್ವೆಲ್.</p>.<p>‘ಸೋಗ್ಗಾಡೆ ಚಿನ್ನಿನಾಯನಾ’ ಚಿತ್ರವನ್ನು ಕಲ್ಯಾಣ್ ಕೃಷ್ಣ ಅವರೇ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ತನ್ನ ಸಂಬಂಧಿಕರಿಂದಲೇ ಕೊಲೆಯಾಗುವ ವ್ಯಕ್ತಿ ಬಂಗಾರ್ರಾಜು, ಯಮನ ಒಪ್ಪಿಗೆ ಪಡೆದು ಭೂಮಿಗೆ ವಾಪಸ್ ಬಂದು ತನ್ನ ಸಾವಿನ ಹಿಂದಿನ ಕಾರಣವನ್ನು ಪತ್ತೆ ಹಚ್ಚುವುದು ಸಿನಿಮಾದ ಕತೆ. ಇದು ಸೂಪರ್ಹಿಟ್ ಆಗಿತ್ತು. ಇದರಲ್ಲಿ ಅಕ್ಕಿನೇನಿ ನಾಗಾರ್ಜುನ, ರಮ್ಯಕೃಷ್ಣ, ಲಾವಣ್ಯ ತ್ರಿಪಾಠಿ ನಟಿಸಿದ್ದರು. ಈ ಸಿನಿಮಾವು ಕನ್ನಡದಲ್ಲಿ ‘ಉಪೇಂದ್ರ ಮತ್ತೆ ಬಾ’ ಎಂದು ರಿಮೇಕ್ ಆಗಿತ್ತು. ಇದರಲ್ಲಿ ಉಪೇಂದ್ರ, ಪ್ರೇಮಾ ಹಾಗೂ ಶ್ರುತಿ ಹರಿಹರನ್ ನಟಿಸಿದ್ದರು.</p>.<p>ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾಕ್ಕೆ ‘ಬಂಗಾರ್ರಾಜು’ ಎಂದೇ ಹೆಸರಿಟ್ಟಿದ್ದಾರೆ .</p>.<p>ಸಮಂತಾ ಹಾಗೂ ನಾಗಚೈತನ್ಯ ಜೋಡಿಯಾಗಿ ನಟಿಸಲಿದ್ದಾರೆ. ಇದು ಇವರಿಬ್ಬರು ಜೋಡಿಯಾಗಿ ನಟಿಸುತ್ತಿರುವ ಐದನೇ ಚಿತ್ರವಾಗಿದೆ. ಈ ಹಿಂದೆ ‘ಏ ಮಾಯ ಚೇಸಾವೆ’, ‘ಮನಂ’,<br />‘ಆಟೋನಗರ್ ಸೂರ್ಯ’ ಹಾಗೂ ‘ಮಜಿಲಿ’ಯಲ್ಲಿ ಜೊತೆಯಾಗಿ ನಟಿಸಿದ್ದರು.</p>.<p>ನಾಗಾರ್ಜುನ ತಮ್ಮ ಅನ್ನಪೂರ್ಣ ಸ್ಟುಡಿಯೊ ಬ್ಯಾನರ್ನಡಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>