ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸುಮಲತಾ, ‘ಅಂಬರೀಷ್ ಅವರ ಅನೇಕ ಕೊಡುಗೆ, ಕೆಲಸಗಳು ಸಾಮಾನ್ಯವಾಗಿ ಯಾರಿಗೂ ತಿಳಿದಿಲ್ಲ. ಅದಕ್ಕೆ ಕಾರಣ, ಅವರು ಇದನ್ನೆಲ್ಲ ಪ್ರಚಾರಕ್ಕೆ ಬಯಸದೆ ಮಾಡಿರುವುದಾಗಿದೆ. ಹಾಗಾಗಿ ಈ ರೀತಿಯ ಮಾಹಿತಿಯನ್ನು ಅನಿರೀಕ್ಷಿತವಾಗಿ ಓದಿದಾಗ ಅಥವಾ ಕೇಳಿದಾಗ ಸ್ವತಃ ನನಗೂ ಅಚ್ಚರಿಯಾಗುತ್ತದೆ. ಈ ಕಾರಣಕ್ಕಾಗಿಯೇ ಜನರು ಪ್ರೀತಿಯಿಂದ ಅವರನ್ನು ‘ದಾನ ಶೂರ ಕರ್ಣ’ ಅಂತ ಕರೆಯುವುದು’ ಎಂದು ಬರೆದುಕೊಂಡಿದ್ದಾರೆ.