<p>ಶೂಟಿಂಗ್ ವೇಳೆಯ ದುರಂತ ಘಟನೆಗಳು ಚಿತ್ರರಂಗವನ್ನು ಆಗಾಗ ಕಾಡುತ್ತಲೇ ಇವೆ. ದುರಂತಗಳು ನಡೆದಾಗ ಒಂದಿಷ್ಟು ಚರ್ಚೆಗಳು ನಡೆಯುವುದು, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವುದು ನಡೆದೇ ಇದೆ.</p>.<p>ಇಂಥ ಘಟನೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬಲಿಯಾಗುವುದು ಸಾಹಸ ಕಲಾವಿದರು, ತಂತ್ರಜ್ಞರು ಮತ್ತು ಕೆಳಹಂತದ ಕಾರ್ಮಿಕರು. ಆರ್ಥಿಕ ಮತ್ತು ಮಾನಸಿಕ ಒತ್ತಡ ಬೀಳುವುದು ನಿರ್ಮಾಪಕರ ಮೇಲೆ. ನಿರ್ಮಾಪಕನ ಬದುಕಿನಲ್ಲಿ ಅಂಥ ಘಟನೆ ಕಪ್ಪುಚುಕ್ಕೆಯಾಗಿ ಉಳಿದುಬಿಡುತ್ತದೆ.</p>.<p>ಇಂತಹ ಘಟನೆಗಳನ್ನು ತಡೆಯಲು ಏನೇನು ಮಾಡಬಹುದು ಎಂಬ ಚರ್ಚೆ ಮತ್ತು ಅದಕ್ಕೆ ಸಂಬಂಧಿಸಿದ ಸಿದ್ಧತೆ ನಿರ್ಮಾಪಕರ ಮಟ್ಟದಲ್ಲಿ ನಡೆದಿದೆ. ಅಲ್ಲಿ ನಡೆದ ಚರ್ಚೆಯ ಅಂಶಗಳನ್ನು ನಿರ್ಮಾಪಕ ಕೆ. ಮಂಜು ‘ಸಿನಿಮಾ ಪುರವಣಿ’ಗೆ ವಿವರಿಸಿದರು.</p>.<p>ವಿಮೆ ಕಡ್ಡಾಯಗೊಳ್ಳಲಿ: ಚಿಕ್ಕ ರೋಪ್ನಿಂದ ಹಿಡಿದು ಒಂದೊಂದು ಪುಟ್ಟ ಪುಟ್ಟ ಸಾಮಗ್ರಿಗಳಿಗೂ ದುಬಾರಿ ಬಿಲ್ ಮಾಡುವ ಸ್ಟಂಟ್ ಮಾಸ್ಟರ್ಗಳು ತಾವು ಹಾಗೂ ಕಲಾವಿದರಿಗೆ ವಿಮೆ ಮಾಡಿಸಿರುವುದಿಲ್ಲ. ಇದು ಕಡ್ಡಾಯಗೊಳ್ಳಬೇಕು.</p>.<p><strong>ಇದನ್ನೂ ಓದಿ: </strong><a href="https://www.prajavani.net/district/ramanagara/fighter-ravi-death-while-rachhu-i-love-you-kannada-movie-shooting-in-bidadi-856146.html">ರಚಿತಾ ರಾಮ್-ಅಜಯ್ ರಾವ್ ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಸ್ಪರ್ಶ; ಫೈಟರ್ ಸಾವು </a></p>.<p>ಫೈಟ್ ಮಾಸ್ಟರ್ಗಳಾಗಿ ತುಂಬಾ ವಯಸ್ಸಾದವರು, ಸಾಹಸ ತಂತ್ರ ಗೊತ್ತಿಲ್ಲದವರು, ಅನುಭವ ಇಲ್ಲದವರು ಬರುತ್ತಿದ್ದಾರೆ. ಇದು ತಪ್ಪಬೇಕು.</p>.<p>ನಿರ್ಮಾಪಕರಿಗೆ ಸ್ವಾತಂತ್ರ್ಯ ಬೇಕು: ಈಗ ಚಿತ್ರ ಚಟುವಟಿಕೆಗೆ ಯಾರೇ ಬೇಕಾದರೂ ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ನೋಂದಣಿಯಾದವರನ್ನೇ ತೆಗೆದುಕೊಳ್ಳಬೇಕು ಎಂಬ ನಿಯಮ ಇದೆ. ಅಲ್ಲಿ ಎಲ್ಲರೂ ಅರ್ಹರೇ ಇರುತ್ತಾರೆ ಎಂಬ ಖಾತ್ರಿ ಇರುವುದಿಲ್ಲ. ಇದು ಬದಲಾಗಬೇಕು.</p>.<p>ವೈದ್ಯರು, ಪ್ರಥಮ ಚಿಕಿತ್ಸೆ ವ್ಯವಸ್ಥೆ ಬೇಕು: ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಅಲ್ಲಿ ವೈದ್ಯರು, ಅಂಬುಲೆನ್ಸ್, ಪ್ರಥಮ ಚಿಕಿತ್ಸೆ ಸೌಲಭ್ಯ ಇರಲೇಬೇಕು.</p>.<p><strong>ಅವರವರೇ ಜವಾಬ್ದಾರಿ: </strong>ಚಿತ್ರ ನಿರ್ಮಾಣದ ವಿವಿಧ ವಿಭಾಗಗಳಲ್ಲಿ ಏನೇ ಆದರೂ ಆಯಾ ವಿಭಾಗದ ಮುಖ್ಯಸ್ಥರಿಗೇ ಹೊಣೆಗಾರಿಕೆ ವಹಿಸಬೇಕು. ಸಾಹಸ ಚಿತ್ರೀಕರಣದಲ್ಲಿ ಏನಾದರೂ ಲೋಪವಾದರೆ ಫೈಟ್ ಮಾಸ್ಟರೇ ಹೊಣೆಗಾರರಾಗಬೇಕು. ಎಲ್ಲ ಸರ್ಕಾರಗಳು ಚಿತ್ರನಗರಿ ಎಂದು ಹೇಳುತ್ತಲೇ ಬಂದಿವೆ. ಅದು ಯಾವಾಗ ಅನುಷ್ಠಾನವಾಗುತ್ತೋ ಗೊತ್ತಿಲ್ಲ.</p>.<p><strong>ಏಕಗವಾಕ್ಷಿ ವ್ಯವಸ್ಥೆ ಬೇಕು: </strong>ಈಗ ಹೆಸರಿಗೊಂದು ಏಕಗವಾಕ್ಷಿ ವ್ಯವಸ್ಥೆಯೇನೋ ಇದೆ. ಆದರೆ, ಶೂಟಿಂಗ್ಗೆ ಹೋದಾಗ ಸ್ಥಳೀಯಮಟ್ಟದಲ್ಲಿ ಪೊಲೀಸರ, ಅಧಿಕಾರಿಗಳ, ಆಡಳಿತದ ಸಹಕಾರ ಸಿಗುವುದಿಲ್ಲ. ಇದು ಬದಲಾಗಬೇಕು. </p>.<p>‘ಈಗ ಚಿತ್ರತಂಡಗಳು ತಮ್ಮ ನಿರ್ಲಕ್ಷ್ಯಕ್ಕೆ ಬೆಲೆತೆರಬೇಕಾಗಿ ಬಂದಿದೆ. ಜೀವ ಪಣಕ್ಕಿಟ್ಟು ಸಾಹಸ ಪ್ರದರ್ಶಿಸಿ ಆಗಬೇಕಾದದ್ದು ಏನು ಹೇಳಿ’ ಎಂದು ಬೇಸರದಿಂದ ಪ್ರಶ್ನಿಸುತ್ತಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶೂಟಿಂಗ್ ವೇಳೆಯ ದುರಂತ ಘಟನೆಗಳು ಚಿತ್ರರಂಗವನ್ನು ಆಗಾಗ ಕಾಡುತ್ತಲೇ ಇವೆ. ದುರಂತಗಳು ನಡೆದಾಗ ಒಂದಿಷ್ಟು ಚರ್ಚೆಗಳು ನಡೆಯುವುದು, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವುದು ನಡೆದೇ ಇದೆ.</p>.<p>ಇಂಥ ಘಟನೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬಲಿಯಾಗುವುದು ಸಾಹಸ ಕಲಾವಿದರು, ತಂತ್ರಜ್ಞರು ಮತ್ತು ಕೆಳಹಂತದ ಕಾರ್ಮಿಕರು. ಆರ್ಥಿಕ ಮತ್ತು ಮಾನಸಿಕ ಒತ್ತಡ ಬೀಳುವುದು ನಿರ್ಮಾಪಕರ ಮೇಲೆ. ನಿರ್ಮಾಪಕನ ಬದುಕಿನಲ್ಲಿ ಅಂಥ ಘಟನೆ ಕಪ್ಪುಚುಕ್ಕೆಯಾಗಿ ಉಳಿದುಬಿಡುತ್ತದೆ.</p>.<p>ಇಂತಹ ಘಟನೆಗಳನ್ನು ತಡೆಯಲು ಏನೇನು ಮಾಡಬಹುದು ಎಂಬ ಚರ್ಚೆ ಮತ್ತು ಅದಕ್ಕೆ ಸಂಬಂಧಿಸಿದ ಸಿದ್ಧತೆ ನಿರ್ಮಾಪಕರ ಮಟ್ಟದಲ್ಲಿ ನಡೆದಿದೆ. ಅಲ್ಲಿ ನಡೆದ ಚರ್ಚೆಯ ಅಂಶಗಳನ್ನು ನಿರ್ಮಾಪಕ ಕೆ. ಮಂಜು ‘ಸಿನಿಮಾ ಪುರವಣಿ’ಗೆ ವಿವರಿಸಿದರು.</p>.<p>ವಿಮೆ ಕಡ್ಡಾಯಗೊಳ್ಳಲಿ: ಚಿಕ್ಕ ರೋಪ್ನಿಂದ ಹಿಡಿದು ಒಂದೊಂದು ಪುಟ್ಟ ಪುಟ್ಟ ಸಾಮಗ್ರಿಗಳಿಗೂ ದುಬಾರಿ ಬಿಲ್ ಮಾಡುವ ಸ್ಟಂಟ್ ಮಾಸ್ಟರ್ಗಳು ತಾವು ಹಾಗೂ ಕಲಾವಿದರಿಗೆ ವಿಮೆ ಮಾಡಿಸಿರುವುದಿಲ್ಲ. ಇದು ಕಡ್ಡಾಯಗೊಳ್ಳಬೇಕು.</p>.<p><strong>ಇದನ್ನೂ ಓದಿ: </strong><a href="https://www.prajavani.net/district/ramanagara/fighter-ravi-death-while-rachhu-i-love-you-kannada-movie-shooting-in-bidadi-856146.html">ರಚಿತಾ ರಾಮ್-ಅಜಯ್ ರಾವ್ ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಸ್ಪರ್ಶ; ಫೈಟರ್ ಸಾವು </a></p>.<p>ಫೈಟ್ ಮಾಸ್ಟರ್ಗಳಾಗಿ ತುಂಬಾ ವಯಸ್ಸಾದವರು, ಸಾಹಸ ತಂತ್ರ ಗೊತ್ತಿಲ್ಲದವರು, ಅನುಭವ ಇಲ್ಲದವರು ಬರುತ್ತಿದ್ದಾರೆ. ಇದು ತಪ್ಪಬೇಕು.</p>.<p>ನಿರ್ಮಾಪಕರಿಗೆ ಸ್ವಾತಂತ್ರ್ಯ ಬೇಕು: ಈಗ ಚಿತ್ರ ಚಟುವಟಿಕೆಗೆ ಯಾರೇ ಬೇಕಾದರೂ ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ನೋಂದಣಿಯಾದವರನ್ನೇ ತೆಗೆದುಕೊಳ್ಳಬೇಕು ಎಂಬ ನಿಯಮ ಇದೆ. ಅಲ್ಲಿ ಎಲ್ಲರೂ ಅರ್ಹರೇ ಇರುತ್ತಾರೆ ಎಂಬ ಖಾತ್ರಿ ಇರುವುದಿಲ್ಲ. ಇದು ಬದಲಾಗಬೇಕು.</p>.<p>ವೈದ್ಯರು, ಪ್ರಥಮ ಚಿಕಿತ್ಸೆ ವ್ಯವಸ್ಥೆ ಬೇಕು: ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಅಲ್ಲಿ ವೈದ್ಯರು, ಅಂಬುಲೆನ್ಸ್, ಪ್ರಥಮ ಚಿಕಿತ್ಸೆ ಸೌಲಭ್ಯ ಇರಲೇಬೇಕು.</p>.<p><strong>ಅವರವರೇ ಜವಾಬ್ದಾರಿ: </strong>ಚಿತ್ರ ನಿರ್ಮಾಣದ ವಿವಿಧ ವಿಭಾಗಗಳಲ್ಲಿ ಏನೇ ಆದರೂ ಆಯಾ ವಿಭಾಗದ ಮುಖ್ಯಸ್ಥರಿಗೇ ಹೊಣೆಗಾರಿಕೆ ವಹಿಸಬೇಕು. ಸಾಹಸ ಚಿತ್ರೀಕರಣದಲ್ಲಿ ಏನಾದರೂ ಲೋಪವಾದರೆ ಫೈಟ್ ಮಾಸ್ಟರೇ ಹೊಣೆಗಾರರಾಗಬೇಕು. ಎಲ್ಲ ಸರ್ಕಾರಗಳು ಚಿತ್ರನಗರಿ ಎಂದು ಹೇಳುತ್ತಲೇ ಬಂದಿವೆ. ಅದು ಯಾವಾಗ ಅನುಷ್ಠಾನವಾಗುತ್ತೋ ಗೊತ್ತಿಲ್ಲ.</p>.<p><strong>ಏಕಗವಾಕ್ಷಿ ವ್ಯವಸ್ಥೆ ಬೇಕು: </strong>ಈಗ ಹೆಸರಿಗೊಂದು ಏಕಗವಾಕ್ಷಿ ವ್ಯವಸ್ಥೆಯೇನೋ ಇದೆ. ಆದರೆ, ಶೂಟಿಂಗ್ಗೆ ಹೋದಾಗ ಸ್ಥಳೀಯಮಟ್ಟದಲ್ಲಿ ಪೊಲೀಸರ, ಅಧಿಕಾರಿಗಳ, ಆಡಳಿತದ ಸಹಕಾರ ಸಿಗುವುದಿಲ್ಲ. ಇದು ಬದಲಾಗಬೇಕು. </p>.<p>‘ಈಗ ಚಿತ್ರತಂಡಗಳು ತಮ್ಮ ನಿರ್ಲಕ್ಷ್ಯಕ್ಕೆ ಬೆಲೆತೆರಬೇಕಾಗಿ ಬಂದಿದೆ. ಜೀವ ಪಣಕ್ಕಿಟ್ಟು ಸಾಹಸ ಪ್ರದರ್ಶಿಸಿ ಆಗಬೇಕಾದದ್ದು ಏನು ಹೇಳಿ’ ಎಂದು ಬೇಸರದಿಂದ ಪ್ರಶ್ನಿಸುತ್ತಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>