<p>ನಿರ್ದೇಶಕ ಸಿಂಪಲ್ ಸುನಿ ಅವರು, ಶರಣ್ ನಟನೆಯ ‘ಅವತಾರ ಪುರುಷ’ ಮತ್ತು ಗಣೇಶ್ ನಟನೆಯ ‘ಸಖತ್’ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೊರೊನಾ ಲಾಕ್ಡೌನ್ ಕಾರಣಕ್ಕೆ ಈ ಚಿತ್ರಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದೆ.</p>.<p>ಆದರೆ, ಅವರು ಮನೆಯಲ್ಲಿಸುಮ್ಮನೆ ಕುಳಿತಿಲ್ಲ. ಅವರೊಳಗಿನ ಕಥೆಗಾರ, ನಿರ್ದೇಶಕ ಲಾಕ್ಡೌನ್ನಲ್ಲಿ ಹೆಚ್ಚು ಕ್ರಿಯಾಶೀಲನಾಗಿದ್ದಾನಂತೆ. ಒಂದು ಸಿಂಪಲ್ಲಾದ ಚಿತ್ರಕಥೆ ರಚಿಸಿದ್ದಾರೆ. ಇದೊಂದು ಪ್ರಯೋಗಾತ್ಮಕ ಚಿತ್ರ. ಹಲವು ಆಯಾಮದ ಕಥೆಗಳು ಒಂದು ಬಿಂದುವಿನಲ್ಲಿ ಬಂದು ಕೂಡುವಂತಹ ವಿಭಿನ್ನ ಕಥೆ ಇದಾಗಿದೆ.</p>.<p>‘ಮೈಂಡ್ ಟಾಕ್ ಕಥೆ ಇದು. ಅಂದರೆ, ಪಾತ್ರಗಳ ತುಟಿಯ ಚಲನೆ ಕಡಿಮೆ ಇರುತ್ತದೆ. ಹೆಚ್ಚಿನ ಸಂಭಾಷಣೆಗಳು ಮನಸಿನಲ್ಲೇ ಮಾತನಾಡುವಂತಹು. ಇದೊಂಥರ ಹೊಸ ಪ್ರಯೋಗ. ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್ ಹೀಗೆ ಎಲ್ಲಾ ಜಾನರ್ಗಳ ಸಮ್ಮಿಶ್ರಣವಿದೆ. ಈ ಕಥೆ ಹೊಳೆದಿದ್ದು ಲಾಕ್ಡೌನ್ ಅವಧಿಯಲ್ಲಿಯೇ. ಈಗ ಚಿತ್ರಕಥೆಯ ಮುಖ್ಯ ಭಾಗವನ್ನು ಬರೆದು ಮುಗಿಸಿದ್ದೇನೆ. ಸ್ಕ್ರಿಪ್ಟ್ನಲ್ಲಿ ಒಂದಿಷ್ಟು ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿಯಿವೆ’ ಎನ್ನುತ್ತಾರೆ ಸುನಿ.</p>.<p>ಯಾವ ಕಲಾವಿದರನ್ನು ಗಮನದಲ್ಲಿಟ್ಟುಕೊಂಡು ಈ ಸ್ಕ್ರಿಪ್ಟ್ ಸಿದ್ಧಪಡಿಸಿದ್ದೀರಿ ಎನ್ನುವ ಪ್ರಶ್ನೆಗೆ; ‘ಇಂಥವರೇ ಆಗಬಹುದೆಂದು ಪೂರ್ವ ನಿರ್ಧಾರ ಮಾಡಿಕೊಂಡು ಸ್ಕ್ರಿಪ್ಟ್ ಬರೆದಿಲ್ಲ. ಆದರೆ, ಹೊಸ ಮುಖಗಳನ್ನು ಪರಿಚಯಿಸುವ ಉದ್ದೇಶವಿದೆ’ ಎಂದರು.</p>.<p>‘ಶರಣ್ ಮತ್ತು ಆಶಿಕಾ ರಂಗನಾಥ್ ನಟನೆಯ ‘ಅವತಾರ ಪುರುಷ’ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಗಣೇಶ್ ನಟನೆಯ ‘ಸಖತ್’ ಚಿತ್ರದ ಚಿತ್ರೀಕರಣ 25 ದಿನಗಳ ಕಾಲ ನಡೆದಿದೆ. ಇನ್ನು 40 ದಿನಗಳ ಚಿತ್ರೀಕರಣ ಬಾಕಿಯಿದೆ. ಈ ಎರಡು ಚಿತ್ರದ ಹಾಡುಗಳ ಕಂಪೋಸಿಂಗ್ ಕೆಲಸ ನಡೆಯುತ್ತಿದೆ. ಲಾಕ್ಡೌನ್ನಿಂದಾಗಿ ಎಲ್ಲಾ ಯೋಜನೆಗಳು ಮುಂದಕ್ಕೆ ಹೋಗಿವೆ. ವಿದೇಶಕ್ಕೆ ಶೂಟಿಂಗ್ ಹೋಗು ಯೋಜನೆಯನ್ನು ಕೈಬಿಡಲಾಗಿದೆ. ರಾಜ್ಯದೊಳಗೆಯೇ ಶೂಟಿಂಗ್ ನಡೆಸಲು ಸ್ಕ್ರಿಪ್ಟ್ನಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಿರ್ದೇಶಕ ಸಿಂಪಲ್ ಸುನಿ ಅವರು, ಶರಣ್ ನಟನೆಯ ‘ಅವತಾರ ಪುರುಷ’ ಮತ್ತು ಗಣೇಶ್ ನಟನೆಯ ‘ಸಖತ್’ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೊರೊನಾ ಲಾಕ್ಡೌನ್ ಕಾರಣಕ್ಕೆ ಈ ಚಿತ್ರಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದೆ.</p>.<p>ಆದರೆ, ಅವರು ಮನೆಯಲ್ಲಿಸುಮ್ಮನೆ ಕುಳಿತಿಲ್ಲ. ಅವರೊಳಗಿನ ಕಥೆಗಾರ, ನಿರ್ದೇಶಕ ಲಾಕ್ಡೌನ್ನಲ್ಲಿ ಹೆಚ್ಚು ಕ್ರಿಯಾಶೀಲನಾಗಿದ್ದಾನಂತೆ. ಒಂದು ಸಿಂಪಲ್ಲಾದ ಚಿತ್ರಕಥೆ ರಚಿಸಿದ್ದಾರೆ. ಇದೊಂದು ಪ್ರಯೋಗಾತ್ಮಕ ಚಿತ್ರ. ಹಲವು ಆಯಾಮದ ಕಥೆಗಳು ಒಂದು ಬಿಂದುವಿನಲ್ಲಿ ಬಂದು ಕೂಡುವಂತಹ ವಿಭಿನ್ನ ಕಥೆ ಇದಾಗಿದೆ.</p>.<p>‘ಮೈಂಡ್ ಟಾಕ್ ಕಥೆ ಇದು. ಅಂದರೆ, ಪಾತ್ರಗಳ ತುಟಿಯ ಚಲನೆ ಕಡಿಮೆ ಇರುತ್ತದೆ. ಹೆಚ್ಚಿನ ಸಂಭಾಷಣೆಗಳು ಮನಸಿನಲ್ಲೇ ಮಾತನಾಡುವಂತಹು. ಇದೊಂಥರ ಹೊಸ ಪ್ರಯೋಗ. ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್ ಹೀಗೆ ಎಲ್ಲಾ ಜಾನರ್ಗಳ ಸಮ್ಮಿಶ್ರಣವಿದೆ. ಈ ಕಥೆ ಹೊಳೆದಿದ್ದು ಲಾಕ್ಡೌನ್ ಅವಧಿಯಲ್ಲಿಯೇ. ಈಗ ಚಿತ್ರಕಥೆಯ ಮುಖ್ಯ ಭಾಗವನ್ನು ಬರೆದು ಮುಗಿಸಿದ್ದೇನೆ. ಸ್ಕ್ರಿಪ್ಟ್ನಲ್ಲಿ ಒಂದಿಷ್ಟು ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿಯಿವೆ’ ಎನ್ನುತ್ತಾರೆ ಸುನಿ.</p>.<p>ಯಾವ ಕಲಾವಿದರನ್ನು ಗಮನದಲ್ಲಿಟ್ಟುಕೊಂಡು ಈ ಸ್ಕ್ರಿಪ್ಟ್ ಸಿದ್ಧಪಡಿಸಿದ್ದೀರಿ ಎನ್ನುವ ಪ್ರಶ್ನೆಗೆ; ‘ಇಂಥವರೇ ಆಗಬಹುದೆಂದು ಪೂರ್ವ ನಿರ್ಧಾರ ಮಾಡಿಕೊಂಡು ಸ್ಕ್ರಿಪ್ಟ್ ಬರೆದಿಲ್ಲ. ಆದರೆ, ಹೊಸ ಮುಖಗಳನ್ನು ಪರಿಚಯಿಸುವ ಉದ್ದೇಶವಿದೆ’ ಎಂದರು.</p>.<p>‘ಶರಣ್ ಮತ್ತು ಆಶಿಕಾ ರಂಗನಾಥ್ ನಟನೆಯ ‘ಅವತಾರ ಪುರುಷ’ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಗಣೇಶ್ ನಟನೆಯ ‘ಸಖತ್’ ಚಿತ್ರದ ಚಿತ್ರೀಕರಣ 25 ದಿನಗಳ ಕಾಲ ನಡೆದಿದೆ. ಇನ್ನು 40 ದಿನಗಳ ಚಿತ್ರೀಕರಣ ಬಾಕಿಯಿದೆ. ಈ ಎರಡು ಚಿತ್ರದ ಹಾಡುಗಳ ಕಂಪೋಸಿಂಗ್ ಕೆಲಸ ನಡೆಯುತ್ತಿದೆ. ಲಾಕ್ಡೌನ್ನಿಂದಾಗಿ ಎಲ್ಲಾ ಯೋಜನೆಗಳು ಮುಂದಕ್ಕೆ ಹೋಗಿವೆ. ವಿದೇಶಕ್ಕೆ ಶೂಟಿಂಗ್ ಹೋಗು ಯೋಜನೆಯನ್ನು ಕೈಬಿಡಲಾಗಿದೆ. ರಾಜ್ಯದೊಳಗೆಯೇ ಶೂಟಿಂಗ್ ನಡೆಸಲು ಸ್ಕ್ರಿಪ್ಟ್ನಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>