<p><strong>ಕೊಚ್ಚಿ(ಕೇರಳ)</strong>: ಕೊಚ್ಚಿ ಹಿನ್ನೀರಿಗೆ ಕಸದ ಚೀಲ ಎಸೆದ ಆರೋಪದ ಮೇಲೆ ಖ್ಯಾತ ಹಿನ್ನೆಲೆ ಗಾಯಕ ಎಂ. ಜಿ. ಶ್ರೀಕುಮಾರ್ ಅವರಿಗೆ ಇಲ್ಲಿನ ಸ್ಥಳೀಯ ಸಂಸ್ಥೆ ₹25 ಸಾವಿರ ದಂಡ ವಿಧಿಸಿದೆ.</p><p>ಈ ಸಂಬಂಧ ಗಾಯಕನಿಗೆ ನೋಟಿಸ್ ಜಾರಿ ಮಾಡಿರುವ ಮುಳವುಕಾಡ್ ಗ್ರಾಮ ಪಂಚಾಯತ್, 15 ದಿನಗಳಲ್ಲಿ ದಂಡವನ್ನು ಪಾವತಿಸುವಂತೆ ಸೂಚಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.</p><p>ಶ್ರೀಕುಮಾರ್ ಅವರ ಮನೆಯ ಕೆಲಸದವರು ಕೊಚ್ಚಿ ಹಿನ್ನೀರಿಗೆ ಕಸದ ಚೀಲವನ್ನು ಎಸೆಯುತ್ತಿರುವದನ್ನು ಪ್ರವಾಸಿಗೊಬ್ಬರು ತಮ್ಮ ಮೊಬೈಲ್ ಫೋನ್ನಲ್ಲಿ ವಿಡಿಯೊ ಮಾಡಿಕೊಂಡಿದ್ದು, ಅದನ್ನು ಸಚಿವ ಎಂ.ಬಿ.ರಾಜೇಶ್ ಅವರನ್ನು ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.</p><p>ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಚಿವರು, ಕಸ ಎಸೆದಿರುವ ಬಗ್ಗೆ ದೂರನ್ನು ಸಾಕ್ಷಿ ಸಮೇತ ಸರ್ಕಾರಿ ವಾಟ್ಸಾಪ್ ಸಂಖ್ಯೆಗೆ ಸಲ್ಲಿಸುವಂತೆ ಸೂಚಿಸಿದ್ದರು.</p><p>ದೂರು ಸ್ವೀಕರಿಸಿದ ನಿಯಂತ್ರಣ ಕೊಠಡಿಯು, ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ನಂತರ ದಂಡ ಪಾವತಿಸುವಂತೆ ಗಾಯಕನಿಗೆ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ(ಕೇರಳ)</strong>: ಕೊಚ್ಚಿ ಹಿನ್ನೀರಿಗೆ ಕಸದ ಚೀಲ ಎಸೆದ ಆರೋಪದ ಮೇಲೆ ಖ್ಯಾತ ಹಿನ್ನೆಲೆ ಗಾಯಕ ಎಂ. ಜಿ. ಶ್ರೀಕುಮಾರ್ ಅವರಿಗೆ ಇಲ್ಲಿನ ಸ್ಥಳೀಯ ಸಂಸ್ಥೆ ₹25 ಸಾವಿರ ದಂಡ ವಿಧಿಸಿದೆ.</p><p>ಈ ಸಂಬಂಧ ಗಾಯಕನಿಗೆ ನೋಟಿಸ್ ಜಾರಿ ಮಾಡಿರುವ ಮುಳವುಕಾಡ್ ಗ್ರಾಮ ಪಂಚಾಯತ್, 15 ದಿನಗಳಲ್ಲಿ ದಂಡವನ್ನು ಪಾವತಿಸುವಂತೆ ಸೂಚಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.</p><p>ಶ್ರೀಕುಮಾರ್ ಅವರ ಮನೆಯ ಕೆಲಸದವರು ಕೊಚ್ಚಿ ಹಿನ್ನೀರಿಗೆ ಕಸದ ಚೀಲವನ್ನು ಎಸೆಯುತ್ತಿರುವದನ್ನು ಪ್ರವಾಸಿಗೊಬ್ಬರು ತಮ್ಮ ಮೊಬೈಲ್ ಫೋನ್ನಲ್ಲಿ ವಿಡಿಯೊ ಮಾಡಿಕೊಂಡಿದ್ದು, ಅದನ್ನು ಸಚಿವ ಎಂ.ಬಿ.ರಾಜೇಶ್ ಅವರನ್ನು ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.</p><p>ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಚಿವರು, ಕಸ ಎಸೆದಿರುವ ಬಗ್ಗೆ ದೂರನ್ನು ಸಾಕ್ಷಿ ಸಮೇತ ಸರ್ಕಾರಿ ವಾಟ್ಸಾಪ್ ಸಂಖ್ಯೆಗೆ ಸಲ್ಲಿಸುವಂತೆ ಸೂಚಿಸಿದ್ದರು.</p><p>ದೂರು ಸ್ವೀಕರಿಸಿದ ನಿಯಂತ್ರಣ ಕೊಠಡಿಯು, ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ನಂತರ ದಂಡ ಪಾವತಿಸುವಂತೆ ಗಾಯಕನಿಗೆ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>