‘ಕೊರೊನಾ ಲಾಕ್ಡೌನ್ ಕಾರಣಕ್ಕೆ ಕಾರ್ಮಿಕರು ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಪರಿತಪಿಸುತ್ತಿದ್ದಾರೆ. ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಯುತ್ತಿರುವ ಕಾರಣಕ್ಕೆ ಅನ್ಯ ರಾಜ್ಯದ ಕಾರ್ಮಿಕರಿಗೆ ಕೆಲಸ ನೀಡಿ, ನಮ್ಮವರಿಗೆ ಕೆಲಸ ಇಲ್ಲದಂತೆ ಮಾಡಬಾರದೆಂದುಕರ್ನಾಟಕ ರಾಜ್ಯ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳೂ ಮನವಿ ಮಾಡಿದ್ದರು. ಸುದೀಪ್ ಅವರ ಒತ್ತಾಸೆಯಂತೆರಾಜ್ಯದಿಂದ ಸುಮಾರು 250 ಮಂದಿ ಸಿನಿಮಾ ಕಾರ್ಮಿಕರನ್ನು ಹೈದರಾಬಾದ್ಗೆ ಕರೆತಂದಿದ್ದೇವೆ. ಲೈಟ್ಸ್ನಿಂದ ಹಿಡಿದು ಪ್ರತಿಯೊಂದನ್ನು ಬೆಂಗಳೂರಿನಿಂದಲೇ ಕೊಂಡೊಯ್ದಿದ್ದೇವೆ’ ಎಂದು ಅವರು ಹೇಳಿದ್ದಾರೆ.