<p>ನವದಂಪತಿ ಹೊಸ ಮನೆಗೆ ಹೋದಾಗ ಎಂತಹ ಭಯಾನಕ ಸನ್ನಿವೇಶಗಳು ಸೃಷ್ಟಿಯಾಗುತ್ತವೆ ಎನ್ನುವುದನ್ನು ಹೇಳಲು ಹೊರಟಿದೆ ಟೆಡ್ಡಿಬೇರ್ ಚಿತ್ರ. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ನಡೆಯಿತು.</p>.<p>ಭರತ್ ಕುಮಾರ್ ರೆಡ್ಡಿ ಮತ್ತು ನವೀನ್ ರೆಗಟ್ಟಿ ಜಂಟಿಯಾಗಿ ಆದ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.</p>.<p>ಹಾಡುಗಳ ಬಿಡುಗಡೆ ಮಾಡಿ ಮಾತನಾಡಿದ ಚಿತ್ರ ಸಾಹಿತಿ ಡಾ.ನಾಗೇಂದ್ರ ಪ್ರಸಾದ್, ‘ಕೆಲಕಾಲದ ಅಂತರದ ಬಳಿಕ ಚಿತ್ರ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ನಿರ್ಮಾಪಕರು ತಾಳ್ಮೆಯಿಂದ ಹೆಜ್ಜೆ ಇಡುವುದು ಉತ್ತಮ’ ಎಂದು ಸಲಹೆ ಮಾಡಿದರು. ಬಾ.ಮ.ಹರೀಶ್, ಉಮೇಶ್ ಬಣಕಾರ್ ಸಮಾರಂಭದಲ್ಲಿ ಇದ್ದರು.</p>.<p>ಮೂರು ಹಾಡುಗಳಿಗೆ ಸಂಗೀತ, ಸಾಹಿತ್ಯ ಆರೋನ್ ಕಾರ್ತಿಕ್ ಅವರದ್ದು. ಲೋಕೇಶ್ ಬಿ. ಅವರ ಕಥೆ ಹಾಗೂ ನಿರ್ದೇಶನ ಇದೆ. ಬೆಂಗಳೂರು, ಮಂಗಳೂರು ಮತ್ತು ಕುಶಾಲನಗರದಲ್ಲಿ ಚಿತ್ರೀಕರಣ ನಡೆದಿದೆ. ನಾಯಕ, ಮನಃಶಾಸ್ತ್ರಜ್ಞನಾಗಿ ಭಾರ್ಗವ್, ಕ್ರೈಂ ಪತ್ರಕರ್ತೆಯಾಗಿ ಲಿಖಿತಾ, ನಾಯಕನ ಪತ್ನಿಯಾಗಿ ಶೈಲಜಾ ಇದ್ದಾರೆ.</p>.<p>ನಿಖಿಲ್, ವಿಘ್ನೇಶ್, ನವೀನ್ಪಾಟೀಲ್, ಅಂಜಲಿ, ಅರವಿಂದ್ ತಾರಾಗಣದಲ್ಲಿದ್ದಾರೆ. ಕೃಷ್ಣಸಾರಥಿ-ನಿಖಿಲ್ ಅವರ ಛಾಯಾಗ್ರಹಣ ಇದೆ. ಸಂಕಲನ ಕುಮಾರ್– ನಾಗರಾಜ್ ಅವರದ್ದು. ಸಾಹಸ ಅಲ್ಟಿಮೇಟ್ ಶಿವು, ಚಿತ್ರಕಥೆ ನಿಖಿಲ್ ಮಂಜುಕಿರಣ್ ಬರೆದಿದ್ದಾರೆ. ಸಿರಿ ಮ್ಯೂಸಿಕ್ ಸಂಸ್ಥೆ ಈ ಆಡಿಯೋ ಹೊರತಂದಿದೆ.</p>.<p>ಹಾಡು ಕೇಳಲು ಲಿಂಕ್: https://www.youtube.com/watch?v=Iz-1im62ThI</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದಂಪತಿ ಹೊಸ ಮನೆಗೆ ಹೋದಾಗ ಎಂತಹ ಭಯಾನಕ ಸನ್ನಿವೇಶಗಳು ಸೃಷ್ಟಿಯಾಗುತ್ತವೆ ಎನ್ನುವುದನ್ನು ಹೇಳಲು ಹೊರಟಿದೆ ಟೆಡ್ಡಿಬೇರ್ ಚಿತ್ರ. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ನಡೆಯಿತು.</p>.<p>ಭರತ್ ಕುಮಾರ್ ರೆಡ್ಡಿ ಮತ್ತು ನವೀನ್ ರೆಗಟ್ಟಿ ಜಂಟಿಯಾಗಿ ಆದ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.</p>.<p>ಹಾಡುಗಳ ಬಿಡುಗಡೆ ಮಾಡಿ ಮಾತನಾಡಿದ ಚಿತ್ರ ಸಾಹಿತಿ ಡಾ.ನಾಗೇಂದ್ರ ಪ್ರಸಾದ್, ‘ಕೆಲಕಾಲದ ಅಂತರದ ಬಳಿಕ ಚಿತ್ರ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ನಿರ್ಮಾಪಕರು ತಾಳ್ಮೆಯಿಂದ ಹೆಜ್ಜೆ ಇಡುವುದು ಉತ್ತಮ’ ಎಂದು ಸಲಹೆ ಮಾಡಿದರು. ಬಾ.ಮ.ಹರೀಶ್, ಉಮೇಶ್ ಬಣಕಾರ್ ಸಮಾರಂಭದಲ್ಲಿ ಇದ್ದರು.</p>.<p>ಮೂರು ಹಾಡುಗಳಿಗೆ ಸಂಗೀತ, ಸಾಹಿತ್ಯ ಆರೋನ್ ಕಾರ್ತಿಕ್ ಅವರದ್ದು. ಲೋಕೇಶ್ ಬಿ. ಅವರ ಕಥೆ ಹಾಗೂ ನಿರ್ದೇಶನ ಇದೆ. ಬೆಂಗಳೂರು, ಮಂಗಳೂರು ಮತ್ತು ಕುಶಾಲನಗರದಲ್ಲಿ ಚಿತ್ರೀಕರಣ ನಡೆದಿದೆ. ನಾಯಕ, ಮನಃಶಾಸ್ತ್ರಜ್ಞನಾಗಿ ಭಾರ್ಗವ್, ಕ್ರೈಂ ಪತ್ರಕರ್ತೆಯಾಗಿ ಲಿಖಿತಾ, ನಾಯಕನ ಪತ್ನಿಯಾಗಿ ಶೈಲಜಾ ಇದ್ದಾರೆ.</p>.<p>ನಿಖಿಲ್, ವಿಘ್ನೇಶ್, ನವೀನ್ಪಾಟೀಲ್, ಅಂಜಲಿ, ಅರವಿಂದ್ ತಾರಾಗಣದಲ್ಲಿದ್ದಾರೆ. ಕೃಷ್ಣಸಾರಥಿ-ನಿಖಿಲ್ ಅವರ ಛಾಯಾಗ್ರಹಣ ಇದೆ. ಸಂಕಲನ ಕುಮಾರ್– ನಾಗರಾಜ್ ಅವರದ್ದು. ಸಾಹಸ ಅಲ್ಟಿಮೇಟ್ ಶಿವು, ಚಿತ್ರಕಥೆ ನಿಖಿಲ್ ಮಂಜುಕಿರಣ್ ಬರೆದಿದ್ದಾರೆ. ಸಿರಿ ಮ್ಯೂಸಿಕ್ ಸಂಸ್ಥೆ ಈ ಆಡಿಯೋ ಹೊರತಂದಿದೆ.</p>.<p>ಹಾಡು ಕೇಳಲು ಲಿಂಕ್: https://www.youtube.com/watch?v=Iz-1im62ThI</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>