ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗಿನ ಖ್ಯಾತ ಸಿನಿಮಾ ನಿರ್ಮಾಪಕ, ವಿತರಕ ವಿ. ದೊರೆಸ್ವಾಮಿ ರಾಜು ನಿಧನ

Last Updated 18 ಜನವರಿ 2021, 10:21 IST
ಅಕ್ಷರ ಗಾತ್ರ

ತೆಲುಗಿನ ಖ್ಯಾತ ಸಿನಿಮಾ ನಿರ್ಮಾಪಕ ಹಾಗೂ ವಿತರಕ ವಿ. ದೊರೆಸ್ವಾಮಿ ರಾಜು ಇಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಅಕ್ಕಿನೇನಿ ನಾಗೇಶ್ವರ ರಾಮ್‌, ನಾಗಾರ್ಜುನ ಅಕ್ಕಿನೇನಿ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ರಂತಹ ಖ್ಯಾತ ನಟರ ಹಿಟ್ ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದರು.

ಇವರ ಸಾವಿಗೆ ತೆಲುಗು ಸಿನಿಮಾರಂಗದ ಖ್ಯಾತ ನಟರು, ನಿರ್ಮಾಪಕರು ಹಾಗೂ ನಿರ್ದೇಶಕರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ನಿರ್ಮಾಪಕ ನಾಗವಂಶಿ, ನಿರ್ದೇಶಕ ಕೆ. ರಾಘವೇಂದ್ರ ರಾವ್‌, ದಿಲ್‌ರಾಜು, ಎಸ್‌.ಎಸ್‌.ರಾಜಮೌಳಿ, ನಟರಾದ ಜೂನಿಯರ್ ಎನ್‌ಟಿಆರ್‌, ನಾನಿ ಮೊದಲಾದವರು ಇವರ ಸಾವಿಗೆ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.

ವಿಎಂಸಿ ಆರ್ಗನೈಜೇಷನ್‌ ಸಂಸ್ಥೆಯ ಸ್ಥಾಪಕರಾಗಿರುವ ದೊರೆಸ್ವಾಮಿ ವಿಜಯ ಮಾರುತಿ ಕ್ರಿಯೆಷನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ವಿಎಂಸಿ ಸಿನಿಮಾ ವಿತರಣಾ ಸಂಸ್ಥೆಯನ್ನು ಹೊಂದಿದ್ದಾರೆ.

ಸುಮಾರು 700ಕ್ಕೂ ಅಧಿಕ ಚಿತ್ರಗಳಿಗೆ ಅವರು ಸಿನಿಮಾ ವಿತರಕರಾಗಿದ್ದರು. ಸೀತಾರಾಮ ಗಾರಿ ಮನವರಾಲು, ಅಣ್ಣಮ್ಮಯ್ಯ, ಸಿಂಹಾದ್ರಿ, ಪ್ರೆಸಿಡೆಂಟ್ ಗಾರಿ ಪೆಲ್ಲಂ ಸೇರಿದಂತೆ ಇನ್ನೂ ಅನೇಕ ಹಿಟ್ ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT