<p><strong>ಬೆಂಗಳೂರು</strong>: ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.</p><p>ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಊರ್ವಶಿ, ‘ಉತ್ತರಾಖಂಡದ ಬದ್ರಿನಾಥ್ ಬಳಿ ನನ್ನ ಹೆಸರಿನ ದೇವಾಲಯ ಇದೆ’ ಎಂದು ಹೇಳಿದ್ದರು.</p><p>ಅವರು ಹೀಗೆ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹರಿದಾಡಿದೆ. ಇದು ಉತ್ತರಾಖಂಡದ ಕೆಲ ಜನರನ್ನು ಕೆರಳುವಂತೆ ಮಾಡಿದೆ.</p><p>ಇದಕ್ಕೆ ಕಾರಣ ಬದ್ರಿನಾಥ್ ಬಳಿ ‘ಮಾತಾ ಊರ್ವಶಿ’ ದೇವಾಲಯವಿದೆ. ಹೀಗಾಗಿ ಕೋಪಗೊಂಡಿರುವ ಊರ್ವಶಿ ದೇವಾಲಯದ ಪುರೋಹಿತರು, ಸ್ಥಳೀಯರು ಕೆಲ ಉತ್ತರಾಖಂಡದ ಜನ ಊರ್ವಶಿ ವಿರುದ್ಧ ಕಿಡಿಕಾರಿದ್ದಾರೆ.</p><p>ಊರ್ವಶಿ ಅವರು ನಮ್ಮ ಭಾವನೆಗಳಿಗೆ ದಕ್ಕೆ ತಂದಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.</p><p>ಕಡೆಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಊರ್ವಶಿ ರೌಟೆಲಾ ತಂಡದವರು. ‘ನಮ್ಮ ಮೇಡಂ ಹೇಳಿದ್ದು ಉತ್ತರಾಖಂಡದಲ್ಲಿ ನನ್ನ ಹೆಸರಿನ (ಊರ್ವಶಿ) ದೇವಾಲಯವಿದೆ ಎಂದು, ಅವರು ಊರ್ವಶಿ ರೌಟೇಲಾ ದೇವಾಲಯವಿದೆ ಎಂದು ಹೇಳಿಲ್ಲ. ನೀವು ತಪ್ಪಾಗಿ ತಿಳಿದುಕೊಂಡರೇ ನಾವೇನು ಮಾಡುವುದಕ್ಕೆ ಆಗುತ್ತದೆ’ ಎಂದು ತೇಪೆ ಹಚ್ಚಿದ್ದಾರೆ.</p><p>ಪುರೋಹಿತರಿಂದ ದೂರು ಸ್ವೀಕರಿಸಿರುವ ಉತ್ತರಾಖಂಡ ಪೊಲೀಸರು ಊರ್ವಶಿ ಅವರ ಮೇಲೆ ಕೇಸ್ ದಾಖಲಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.</p>.ಟೆಕ್ ದೈತ್ಯ ಇಂಟೆಲ್ ಕಂಪನಿ CTO, AI ಹೆಡ್ ಆಗಿ ಬೆಳಗಾವಿ ಮೂಲದ ಸಚಿನ್ ಕತ್ತಿ ನೇಮಕ.ಉಜ್ಜಯಿನಿ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಟ ಯಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.</p><p>ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಊರ್ವಶಿ, ‘ಉತ್ತರಾಖಂಡದ ಬದ್ರಿನಾಥ್ ಬಳಿ ನನ್ನ ಹೆಸರಿನ ದೇವಾಲಯ ಇದೆ’ ಎಂದು ಹೇಳಿದ್ದರು.</p><p>ಅವರು ಹೀಗೆ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹರಿದಾಡಿದೆ. ಇದು ಉತ್ತರಾಖಂಡದ ಕೆಲ ಜನರನ್ನು ಕೆರಳುವಂತೆ ಮಾಡಿದೆ.</p><p>ಇದಕ್ಕೆ ಕಾರಣ ಬದ್ರಿನಾಥ್ ಬಳಿ ‘ಮಾತಾ ಊರ್ವಶಿ’ ದೇವಾಲಯವಿದೆ. ಹೀಗಾಗಿ ಕೋಪಗೊಂಡಿರುವ ಊರ್ವಶಿ ದೇವಾಲಯದ ಪುರೋಹಿತರು, ಸ್ಥಳೀಯರು ಕೆಲ ಉತ್ತರಾಖಂಡದ ಜನ ಊರ್ವಶಿ ವಿರುದ್ಧ ಕಿಡಿಕಾರಿದ್ದಾರೆ.</p><p>ಊರ್ವಶಿ ಅವರು ನಮ್ಮ ಭಾವನೆಗಳಿಗೆ ದಕ್ಕೆ ತಂದಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.</p><p>ಕಡೆಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಊರ್ವಶಿ ರೌಟೆಲಾ ತಂಡದವರು. ‘ನಮ್ಮ ಮೇಡಂ ಹೇಳಿದ್ದು ಉತ್ತರಾಖಂಡದಲ್ಲಿ ನನ್ನ ಹೆಸರಿನ (ಊರ್ವಶಿ) ದೇವಾಲಯವಿದೆ ಎಂದು, ಅವರು ಊರ್ವಶಿ ರೌಟೇಲಾ ದೇವಾಲಯವಿದೆ ಎಂದು ಹೇಳಿಲ್ಲ. ನೀವು ತಪ್ಪಾಗಿ ತಿಳಿದುಕೊಂಡರೇ ನಾವೇನು ಮಾಡುವುದಕ್ಕೆ ಆಗುತ್ತದೆ’ ಎಂದು ತೇಪೆ ಹಚ್ಚಿದ್ದಾರೆ.</p><p>ಪುರೋಹಿತರಿಂದ ದೂರು ಸ್ವೀಕರಿಸಿರುವ ಉತ್ತರಾಖಂಡ ಪೊಲೀಸರು ಊರ್ವಶಿ ಅವರ ಮೇಲೆ ಕೇಸ್ ದಾಖಲಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.</p>.ಟೆಕ್ ದೈತ್ಯ ಇಂಟೆಲ್ ಕಂಪನಿ CTO, AI ಹೆಡ್ ಆಗಿ ಬೆಳಗಾವಿ ಮೂಲದ ಸಚಿನ್ ಕತ್ತಿ ನೇಮಕ.ಉಜ್ಜಯಿನಿ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಟ ಯಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>