ಲಾಕ್ಡೌನ್ ಕಾರಣದಿಂದಾಗಿ ಬೆಳೆದ ಬೆಳೆಯನ್ನು ಮಾರಲಾಗದೆ ಸಂಕಷ್ಟಕ್ಕೀಡಾಗಿರುವ ರೈತರ ನೆರವಿಗೂ ಉಪೇಂದ್ರ ಧಾವಿಸಿದ್ದು, ರಾಜ್ಯದ ಹಲವೆಡೆಯಿಂದ ರೈತರಿಂದ ನೇರವಾಗಿ ತರಕಾಗಿಗಳನ್ನು ಖರೀದಿಸಿ, ಅದರ ಸಾರಿಗೆ ವೆಚ್ಚವನ್ನೂ ನೀಡಿ ದಿನಸಿ ಕಿಟ್ ಜೊತೆಯಲ್ಲಿ ನೀಡುತ್ತಿದ್ದಾರೆ. ಚಿತ್ರೀಕರಣವೆಲ್ಲ ಸ್ತಬ್ಧವಾಗಿರುವ ಕಾರಣ ಸಂಕಷ್ಟದಲ್ಲಿರುವ ಹಿರಿಯ ಕಲಾವಿದರ ನೆರವಿಗೂ ಉಪೇಂದ್ರ ಧಾವಿಸಿದ್ದು, ಅವರಿಗೆ 25 ಕೆ.ಜಿ. ಅಕ್ಕಿ, ಗೋಧಿ ಚೀಲ, ತರಕಾರಿ, ಹಣ್ಣಿನ ಕಿಟ್ ನೀಡುತ್ತಿದ್ದಾರೆ.