<p>ಬಹುತೇಕ ಹೊಸಬರಿಂದ ಕೂಡಿರುವ ‘ವೃಷಭ’ ಚಿತ್ರ ಚಿತ್ರೀಕರಣ ಮುಗಿಸಿ ಬಿಡುಗಡೆ ಹಂತದಲ್ಲಿದೆ. ಆದರೆ ಮೋಹನ್ ಲಾಲ್ ಅಭಿನಯದ ತೆಲುಗು ಚಿತ್ರ ‘ವೃಷಭ’ ಕೂಡ ಬಿಡುಗಡೆ ಘೋಷಿಸಿದ್ದು ಕನ್ನಡದ ಚಿತ್ರಕ್ಕೆ ಶೀರ್ಷಿಕೆ ಸಂಕಷ್ಟ ಎದುರಾಗಿದೆ.</p>.<p>ಉಮೇಶ್ ಹೆಬ್ಬಾಳ ನಟಿಸಿ, ನಿರ್ದೇಶಿಸಿರುವ ಚಿತ್ರವಿದು. ‘ಕನ್ನಡದಲ್ಲಿ ‘ವೃಷಭ’ ಶೀರ್ಷಿಕೆ ಮೂರು ವರ್ಷಗಳಿಂದ ನಮ್ಮ ಬಳಿಯೇ ಇದೆ. ಆದರೆ ಈಗ ತೆಲುಗು, ಮಲಯಾಳದ ‘ವೃಷಭ’ ಚಿತ್ರದ ಪೋಸ್ಟರ್ ಕನ್ನಡದಲ್ಲಿಯೂ ಬಿಡುಗಡೆಗೊಂಡಿದೆ. ಆ ಚಿತ್ರ ಘೋಷಣೆಯಾದಾಗಲೇ ಶೀರ್ಷಿಕೆ ನಮ್ಮ ಬಳಿ ಇದೆ ಎಂದು ನಿರ್ಮಾಣ ಸಂಸ್ಥೆಗೆ, ನಿರ್ದೇಶಕರಾದ ನಂದಕಿಶೋರ್ ಅವರಿಗೆ ತಿಳಿಸಿದ್ದೆವು. ಕನ್ನಡದಲ್ಲಿ ಈ ಚಿತ್ರ ಬಿಡುಗಡೆಯಾವುದಿಲ್ಲ ಎಂಬ ಭರವಸೆ ನಿರ್ದೇಶಕರಿಂದ ಸಿಕ್ಕಿತ್ತು. ಆದರೆ ಈಗ ಕನ್ನಡದಲ್ಲಿಯೂ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ನಮ್ಮ ಇಡೀ ಚಿತ್ರ ಈ ಶೀರ್ಷಿಕೆ ಮೇಲೆಯೇ ಇದೆ’ ಎಂದು ಉಮೇಶ್ ಹೆಬ್ಬಾಳ ಆತಂಕ ವ್ಯಕ್ತಪಡಿಸಿದರು.</p>.<p>‘ಈ ಶೀರ್ಷಿಕೆಯ ಮೇಲೆಯೇ ಶೀರ್ಷಿಕೆ ಗೀತೆ ಮಾಡಿದ್ದೇವೆ. ಇಡೀ ಕಥೆ ನಿಂತಿದೆ. ಈಗ ಅದೇ ಹೆಸರಿನ ಚಿತ್ರ ಕನ್ನಡದಲ್ಲಿಯೂ ತೆರೆ ಕಂಡರೆ ನಮಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದೇವೆ. ನ್ಯಾಯಾಲಯಕ್ಕೂ ಹೋಗುತ್ತೇವೆ. ನಮ್ಮ ಚಿತ್ರ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಗೂಳಿ ಥರದ ವ್ಯಕ್ತಿತ್ವವಿರುವ ರೈತನೊಬ್ಬನ ಕಥೆ ನಮ್ಮ ಚಿತ್ರದಲ್ಲಿದೆ’ ಎಂದು ಅವರು ಹೇಳಿದರು.</p>.<p>ರಾಯ ಬಡಿಗೇರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಪ್ರಶಾಂತ್ ಸಾಗರ್ ಚಿತ್ರ ಛಾಯಾಚಿತ್ರಗ್ರಹಣ, ಪ್ರಣವ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಹುತೇಕ ಹೊಸಬರಿಂದ ಕೂಡಿರುವ ‘ವೃಷಭ’ ಚಿತ್ರ ಚಿತ್ರೀಕರಣ ಮುಗಿಸಿ ಬಿಡುಗಡೆ ಹಂತದಲ್ಲಿದೆ. ಆದರೆ ಮೋಹನ್ ಲಾಲ್ ಅಭಿನಯದ ತೆಲುಗು ಚಿತ್ರ ‘ವೃಷಭ’ ಕೂಡ ಬಿಡುಗಡೆ ಘೋಷಿಸಿದ್ದು ಕನ್ನಡದ ಚಿತ್ರಕ್ಕೆ ಶೀರ್ಷಿಕೆ ಸಂಕಷ್ಟ ಎದುರಾಗಿದೆ.</p>.<p>ಉಮೇಶ್ ಹೆಬ್ಬಾಳ ನಟಿಸಿ, ನಿರ್ದೇಶಿಸಿರುವ ಚಿತ್ರವಿದು. ‘ಕನ್ನಡದಲ್ಲಿ ‘ವೃಷಭ’ ಶೀರ್ಷಿಕೆ ಮೂರು ವರ್ಷಗಳಿಂದ ನಮ್ಮ ಬಳಿಯೇ ಇದೆ. ಆದರೆ ಈಗ ತೆಲುಗು, ಮಲಯಾಳದ ‘ವೃಷಭ’ ಚಿತ್ರದ ಪೋಸ್ಟರ್ ಕನ್ನಡದಲ್ಲಿಯೂ ಬಿಡುಗಡೆಗೊಂಡಿದೆ. ಆ ಚಿತ್ರ ಘೋಷಣೆಯಾದಾಗಲೇ ಶೀರ್ಷಿಕೆ ನಮ್ಮ ಬಳಿ ಇದೆ ಎಂದು ನಿರ್ಮಾಣ ಸಂಸ್ಥೆಗೆ, ನಿರ್ದೇಶಕರಾದ ನಂದಕಿಶೋರ್ ಅವರಿಗೆ ತಿಳಿಸಿದ್ದೆವು. ಕನ್ನಡದಲ್ಲಿ ಈ ಚಿತ್ರ ಬಿಡುಗಡೆಯಾವುದಿಲ್ಲ ಎಂಬ ಭರವಸೆ ನಿರ್ದೇಶಕರಿಂದ ಸಿಕ್ಕಿತ್ತು. ಆದರೆ ಈಗ ಕನ್ನಡದಲ್ಲಿಯೂ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ನಮ್ಮ ಇಡೀ ಚಿತ್ರ ಈ ಶೀರ್ಷಿಕೆ ಮೇಲೆಯೇ ಇದೆ’ ಎಂದು ಉಮೇಶ್ ಹೆಬ್ಬಾಳ ಆತಂಕ ವ್ಯಕ್ತಪಡಿಸಿದರು.</p>.<p>‘ಈ ಶೀರ್ಷಿಕೆಯ ಮೇಲೆಯೇ ಶೀರ್ಷಿಕೆ ಗೀತೆ ಮಾಡಿದ್ದೇವೆ. ಇಡೀ ಕಥೆ ನಿಂತಿದೆ. ಈಗ ಅದೇ ಹೆಸರಿನ ಚಿತ್ರ ಕನ್ನಡದಲ್ಲಿಯೂ ತೆರೆ ಕಂಡರೆ ನಮಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದೇವೆ. ನ್ಯಾಯಾಲಯಕ್ಕೂ ಹೋಗುತ್ತೇವೆ. ನಮ್ಮ ಚಿತ್ರ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಗೂಳಿ ಥರದ ವ್ಯಕ್ತಿತ್ವವಿರುವ ರೈತನೊಬ್ಬನ ಕಥೆ ನಮ್ಮ ಚಿತ್ರದಲ್ಲಿದೆ’ ಎಂದು ಅವರು ಹೇಳಿದರು.</p>.<p>ರಾಯ ಬಡಿಗೇರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಪ್ರಶಾಂತ್ ಸಾಗರ್ ಚಿತ್ರ ಛಾಯಾಚಿತ್ರಗ್ರಹಣ, ಪ್ರಣವ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>