<p>ಪತ್ರಿಕೆ ಹಂಚುವ ಹುಡುಗ ಪತ್ರಿಕೋದ್ಯಮದಲ್ಲೇ ಬೆಳೆದುಬಂದರೆ ಹೇಗಿರುತ್ತದೆ? ಅಂಥದ್ದೊಂದು ಕತೆ ಹೇಳಿದೆ ‘ವೃತ್ತಪತ್ರಿಕೆ’. ಈ ಕಿರುಚಿತ್ರ ಕರ್ನಾಟಕ ಸೊಗಡಿನದ್ದು.</p>.<p>ಆ ಹುಡುಗನ ಕನಸಿನ ದಾರಿ, ಎದುರಾಗುವ ಕಷ್ಟ, ದುಃಖ, ಹತಾಶೆ, ಅವಮಾನ, ಪ್ರೀತಿ, ಖುಷಿ... ಹೀಗೆ ಎಲ್ಲವುಗಳ ಮನಮುಟ್ಟುವ ಸರಳ ನಿರೂಪಣೆ ಈ ಕಿರುಚಿತ್ರದಲ್ಲಿದೆ. </p>.<p>ರಂಗಭೂಮಿ ಪ್ರತಿಭೆ ಐಶ್ವರ್ಯಾ ಸಿದ್ಧಾರ್ಥ್ ತಾಂಬೆ ಈ ಚಿತ್ರದ ನಿರ್ದೇಶಕಿ. ನೀನಾಸಂ ಪದವೀಧರೆ. ಮಕ್ಕಳ ರಂಗಭೂಮಿಯಲ್ಲಿ ಸಕ್ರಿಯರು. </p>.<p>ಈ ಕಿರು ಚಿತ್ರಕ್ಕೆ ಕ್ಯಾಮೆರಾ ಹಿಡಿದವರು ಶ್ರೀಕಾಂತ್ಗೌಡ ಮತ್ತು ಶಶಾಂಕ್ ಮಲ್ಲಿಕಾರ್ಜುನ್. ಸಂಕಲನ ಶ್ರೀಹರ್ಷ ಗೋಭಟ್, ಸಂಗೀತ ನವನೀತ್ ಆಚಾರ್ ಹಾಗೂ ನಿರ್ಮಾಪಕರು ಪ್ರಿಯಾಂಕ ಸಿದ್ಧಾರ್ಥ್.</p>.<p>ಮುಖ್ಯಪಾತ್ರದಲ್ಲಿ ಅರುಣ್ ಜಾವೂರ್, ಜಯಂತ್ ಜಯ್, ಐಶ್ವರ್ಯ ತಾಂಬೆ, ರಂಗಕರ್ಮಿ ರವಿ ಕುಲಕರ್ಣಿ, ರಂಗ ಕಲಾವಿದೆ ಗಾಯಿತ್ರಿ ಹಡಪದ್, ಶಿವಮೊಗ್ಗದ ರಂಗನಾಥ್ ನೀನಾಸಂ ಹಾಗು ವಿಶೇಷ ಪಾತ್ರದಲ್ಲಿ ಖ್ಯಾತ ನಾಟಕಕಾರ ಡಾ. ಡಿ.ಎಸ್ ಚೌಗಲೆಯವರು ನಟಿಸಿದ್ದಾರೆ. ಈ ಕಿರುಚಿತ್ರವು ಹುಬ್ಬಳ್ಳಿಯ ಸುತ್ತಮುತ್ತಲೂ ಚಿತ್ರೀಕರಣಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪತ್ರಿಕೆ ಹಂಚುವ ಹುಡುಗ ಪತ್ರಿಕೋದ್ಯಮದಲ್ಲೇ ಬೆಳೆದುಬಂದರೆ ಹೇಗಿರುತ್ತದೆ? ಅಂಥದ್ದೊಂದು ಕತೆ ಹೇಳಿದೆ ‘ವೃತ್ತಪತ್ರಿಕೆ’. ಈ ಕಿರುಚಿತ್ರ ಕರ್ನಾಟಕ ಸೊಗಡಿನದ್ದು.</p>.<p>ಆ ಹುಡುಗನ ಕನಸಿನ ದಾರಿ, ಎದುರಾಗುವ ಕಷ್ಟ, ದುಃಖ, ಹತಾಶೆ, ಅವಮಾನ, ಪ್ರೀತಿ, ಖುಷಿ... ಹೀಗೆ ಎಲ್ಲವುಗಳ ಮನಮುಟ್ಟುವ ಸರಳ ನಿರೂಪಣೆ ಈ ಕಿರುಚಿತ್ರದಲ್ಲಿದೆ. </p>.<p>ರಂಗಭೂಮಿ ಪ್ರತಿಭೆ ಐಶ್ವರ್ಯಾ ಸಿದ್ಧಾರ್ಥ್ ತಾಂಬೆ ಈ ಚಿತ್ರದ ನಿರ್ದೇಶಕಿ. ನೀನಾಸಂ ಪದವೀಧರೆ. ಮಕ್ಕಳ ರಂಗಭೂಮಿಯಲ್ಲಿ ಸಕ್ರಿಯರು. </p>.<p>ಈ ಕಿರು ಚಿತ್ರಕ್ಕೆ ಕ್ಯಾಮೆರಾ ಹಿಡಿದವರು ಶ್ರೀಕಾಂತ್ಗೌಡ ಮತ್ತು ಶಶಾಂಕ್ ಮಲ್ಲಿಕಾರ್ಜುನ್. ಸಂಕಲನ ಶ್ರೀಹರ್ಷ ಗೋಭಟ್, ಸಂಗೀತ ನವನೀತ್ ಆಚಾರ್ ಹಾಗೂ ನಿರ್ಮಾಪಕರು ಪ್ರಿಯಾಂಕ ಸಿದ್ಧಾರ್ಥ್.</p>.<p>ಮುಖ್ಯಪಾತ್ರದಲ್ಲಿ ಅರುಣ್ ಜಾವೂರ್, ಜಯಂತ್ ಜಯ್, ಐಶ್ವರ್ಯ ತಾಂಬೆ, ರಂಗಕರ್ಮಿ ರವಿ ಕುಲಕರ್ಣಿ, ರಂಗ ಕಲಾವಿದೆ ಗಾಯಿತ್ರಿ ಹಡಪದ್, ಶಿವಮೊಗ್ಗದ ರಂಗನಾಥ್ ನೀನಾಸಂ ಹಾಗು ವಿಶೇಷ ಪಾತ್ರದಲ್ಲಿ ಖ್ಯಾತ ನಾಟಕಕಾರ ಡಾ. ಡಿ.ಎಸ್ ಚೌಗಲೆಯವರು ನಟಿಸಿದ್ದಾರೆ. ಈ ಕಿರುಚಿತ್ರವು ಹುಬ್ಬಳ್ಳಿಯ ಸುತ್ತಮುತ್ತಲೂ ಚಿತ್ರೀಕರಣಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>