ಚಿತ್ರದ ನಾಯಕ ರಾಮ್ ಚೇತನ್ ಮಾತನಾಡಿ, ಈ ಮೊದಲು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದೆ. ಮೊದಲ ಚಿತ್ರದಲ್ಲೇ ಅಭಿನಯಕ್ಕೆ ಸಾಕಷ್ಟು ಅವಕಾಶವಿತ್ತು. ನಮ್ಮ ಚಿತ್ರಕ್ಕೆ ಸುಚೇಂದ್ರಪ್ರಸಾದ್, ರಂಗಾಯಣ ರಘು, ತಬಲಾನಾಣಿ ಇವರೆಲ್ಲ ಆಧಾರ ಸ್ತಂಭಗಳು ಎಂದರು. ಈ ಚಿತ್ರಕ್ಕೆ ಟ್ರಾವೆಲ್ ಕಂಪನಿ ನಡೆಸುತ್ತಿರುವ ವೆಂಕಟಾಚಲಯ್ಯ(ವೆಂಕಟೇಶ್) ಹಾಗೂ ಶ್ರೀಮತಿ ಭಾರತಿ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.