‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಪುನೀತ್ ನಟನೆಯ ‘ಯುವರತ್ನ’ ಚಿತ್ರದ ಅಪ್ಡೇಟ್ ನಿರೀಕ್ಷೆಯಲ್ಲಿದ್ದ ಸಿನಿರಸಿಕರಿಗೆ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ‘ಬಿಗ್ ಅನೌನ್ಸ್ಮೆಂಟ್’ವೊಂದನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಭಿಮಾನಿಗಳಿಗೆ ನೀಡುವುದಾಗಿ ಹೇಳಿದ್ದರು. ಮೊದಲೇ ಹೇಳಿದಂತೆ ‘ಯುವರತ್ನ’ದ ಫಸ್ಟ್ ಪವರ್ ಫುಲ್ ಸಾಂಗ್ ‘ಪವರ್ ಆಫ್ ಯೂತ್’ ಡಿಸೆಂಬರ್ 2ರಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದರ ಪುನೀತ್ ಅಭಿಮಾನಿಗಳಿಗೆ ಅದರಲ್ಲೂ ಟಾಲಿವುಡ್ ಸಿನಿರಸಿಕರಿಗೂ ಖುಷಿ ಸುದ್ದಿಯನ್ನು ಚಿತ್ರತಂಡ ನೀಡಿದೆ.
ಯುವರತ್ನನ ಆರ್ಭಟ ಆರಂಭವಾಯ್ತು.
— Hombale Films (@hombalefilms) November 23, 2020
Power-packed lyrics penned by @SanthoshAnand15, The most awaited @PuneethRajkumar's #YuvarathnaaFirstSingle, #PowerOfYouth by South sensation @MusicThaman from Dec 2nd.
Stay Tuned to @hombalefilms - https://t.co/QxtFZcv8dy pic.twitter.com/IcSjoPAnDP
‘ಯುವರತ್ನ ಚಿತ್ರ ತೆಲುಗಿನಲ್ಲೂ ಬಿಡುಗಡೆಯಾಗಲಿದೆ, ನಿಮ್ಮ ಬೆಂಬಲ ಮತ್ತು ಹಾರೈಕೆ ಇರಲಿ’ ಎಂದು ನಟ ಪುನೀತ್ ರಾಜ್ಕುಮಾರ್ ಕೂಡ ಟ್ವೀಟ್ ಮಾಡಿದ್ದಾರೆ.
We are happy to announce #Yuvarathnaa will be released in Telugu also. Need all your support and wishes.@hombalefilms @VKiragandur @SanthoshAnand15 @MusicThaman @sayyeshaa @Dhananjayaka @ramjowrites @Karthik1423 @KRG_Connects @SillyMonks #NakashAziz pic.twitter.com/44RFyrTTbi
— Puneeth Rajkumar (@PuneethRajkumar) November 23, 2020
ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ‘ಪವರ್ ಆಫ್ ಯೂತ್’ ಹಾಡಿನ ಸಾಹಿತ್ಯ ರಾಮ್ಜೋಗಯ್ಯ ಶಾಸ್ತ್ರಿ ಅವರದು. ಈ ಹಾಡನ್ನು ನಕಾಶ್ ಅಜೀಜ್ ಹಾಡಿದ್ದಾರೆ.
Presenting our #Yuvarathnaa to the Telugu Audience with Love & passion..Need all your wishes & Support .. I assure you all that This Film will entertain you with a Youth centric narrative ..@PuneethRajkumar @hombalefilms @VKiragandur @MusicThaman @sayyeshaa @ramjowrites pic.twitter.com/c4AOWgJQwS
— Santhosh Ananddram (@SanthoshAnand15) November 23, 2020
ಈ ಚಿತ್ರದ ಚಿತ್ರೀಕರಣಈಗಾಗಲೇ ಪೂರ್ಣಗೊಂಡಿದೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ಗೆ ಜೋಡಿಯಾಗಿ ಕಾಲಿವುಡ್ ಬೆಡಗಿ ಶಯೇಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಪುನೀತ್ ನಟನೆಯ ಸಿನಿಮಾ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ತೆರೆ ಕಾಣಲಿದೆ. ಪುನೀತ್ ‘ಯುವರತ್ನ’ ಮೂಲಕ ಟಾಲಿವುಡ್ಗೂ ಪದಾರ್ಪಣೆ ಮಾಡಲಿದ್ದಾರೆ. ಟಾಲಿವುಡ್ನಲ್ಲೂ ‘ಯುವರತ್ನ’ಗೆ ಅದ್ಧೂರಿ ಸ್ವಾಗತ ನೀಡುತ್ತಿದ್ದಾರೆ ಟಾಲಿವುಡ್ ಮಂದಿ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಡಿ ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಎಸ್. ತಮನ್ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣವಿದೆ. ಪ್ರಕಾಶ್ ರಾಜ್, ವಸಿಷ್ಠ ಸಿಂಹ, ದಿಗಂತ್, ಸೋನು ಗೌಡ ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.