<p>ಮಗನ ಕನಸನ್ನು ಈಡೇರಿಸುತ್ತಿರುವ ಸಂಭ್ರಮದಲ್ಲಿದ್ದರು ನಟ ಜಗ್ಗೇಶ್. ಚಿತ್ರರಂಗದಲ್ಲಿ ಮಗನಿಗೊಂದು ಬ್ರೇಕ್ ಸಿಗುವಂತಾಗಬೇಕು ಎಂಬುದು ಜಗ್ಗೇಶ್ ಹೆಬ್ಬಯಕೆ ಕೂಡ. ಅದಕ್ಕಾಗಿಯೇ ಅವರು ನಿರ್ದೇಶನದ ಕ್ಯಾಪ್ ತೊಡಲು ಸಿದ್ಧರಾಗಿದ್ದು. <br /> <br /> ತಮ್ಮ ಚೊಚ್ಚಿಲ ನಿರ್ದೇಶನದ ಚಿತ್ರ `ಗುರು~ವಿನ ಮುಹೂರ್ತವನ್ನು ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದರು ಜಗ್ಗೇಶ್. ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಜೊತೆಗೆ ಅಲ್ಲಿ ಗೃಹ ಸಚಿವ ಅಶೋಕ್ ಸೇರಿದಂತೆ ಶಿವರಾಜ್ಕುಮಾರ್, ಗಣೇಶ್, ಶ್ರೀನಗರ ಕಿಟ್ಟಿ, ಯಶ್, ತಾರಾ, ಸುಧಾರಾಣಿ ಮುಂತಾದ ತಾರೆಯರ ದಂಡೂ ನೆರೆದಿತ್ತು.<br /> <br /> ಸುದ್ದಿಗೋಷ್ಠಿಯಲ್ಲಿ ಮಾತಿಗಿಳಿದ ಜಗ್ಗೇಶ್ ತಮ್ಮ 30 ವರ್ಷದ ಬಣ್ಣದ ಲೋಕದ ಬದುಕಿನ ಕ್ಷಣಗಳನ್ನು ಕೆದಕತೊಡಗಿದರು. ಆರಂಭದ ದಿನಗಳಲ್ಲಿ ಅವರು ಅನುಭವಿಸಿದ ನೋವು, ಅವಮಾನ, ಹತಾಶೆಗಳ ನೆನಪು ಅವರ ಕಣ್ಣುಗಳನ್ನು ತೇವಗೊಳಿಸಿತು. <br /> <br /> ಸಹಾಯಕ ನಿರ್ದೇಶಕನಾಗಿ ಬದುಕು ಕಂಡುಕೊಳ್ಳುವ ಬಯಕೆಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ತಾವು ಕೆಲಸಕ್ಕಾಗಿ ಹುಡುಕಾಡಿದ ದಿನಗಳನ್ನು ನೆನೆದು ಭಾವುಕರಾದರು. ಇಷ್ಟೆಲ್ಲಾ ಸಂಕಟಗಳನ್ನು ಅನುಭವಿಸಿದ್ದರೂ 10 ರೂಪಾಯಿಗಾಗಿ ಅಕ್ಕನ ಬಳಿ ಕೈಚಾಚಬೇಕಾಗಿತ್ತು ಎನ್ನುತ್ತಿದ್ದಂತೆ ಅವರ ಕಣ್ಣ ಹನಿ ಕೆನ್ನೆ ಮೇಲೆ ಜಾರಿತು. <br /> <br /> ಮಾತು ಮುಂದುವರಿಸಲಾಗದೆ ಮೈಕನ್ನು ನಟ ಸುದರ್ಶನ್ ಕೈಗೆ ಹಸ್ತಾಂತರಿಸಿದರು.<br /> `ನಾನು ಸಂಕಷ್ಟದಲ್ಲಿದ್ದ ಹಲವು ಬಾರಿ ನೆರವಾಗಿದ್ದು ಜಗ್ಗೇಶ್~ ಎಂದು ಸ್ಮರಿಸಿಕೊಂಡರು ಸುದರ್ಶನ್. ಅವರು ಸಹಾನುಭೂತಿ ಮತ್ತು ಸಹಾಯ ನೀಡುವ ಉದಾರ ವ್ಯಕ್ತಿ ಎಂದು ಜಗ್ಗೇಶ್ ಬಗ್ಗೆ ಹೊಗಳಿಕೆ ಮಳೆ ಸುರಿಸಿದರು. ಚಿತ್ರದಲ್ಲಿ ಅವರು `ಗುರು~ವಿಗೆ ತಂದೆಯಾಗಿ ನಟಿಸುತ್ತಿದ್ದಾರೆ. ನಿಜ ಬದುಕಿನಲ್ಲಿ ನಾನು ಜಗ್ಗೇಶ್ಗೆ ತಂದೆಯಿದ್ದಂತೆ ಎಂದರು.<br /> <br /> `ಗುರು~ ಆ್ಯಕ್ಷನ್ ಕಥೆಯುಳ್ಳ ಚಿತ್ರವಾದ್ದರಿಂದ ನಾಯಕ ನಟ ಗುರುರಾಜ್ ಅದಕ್ಕೆ ತಕ್ಕಂತೆ ದೇಹಾಕಾರ ಹೊಂದಲು ಬ್ಯಾಂಕಾಕ್ ಮತ್ತು ಥಾಯ್ಲೆಂಡ್ಗಳಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಅಲ್ಲಿ ಅವರು ಮಾರ್ಷಿಯಲ್ ಆರ್ಟ್ಸ್ ಅನ್ನೂ ಕಲಿತಿದ್ದಾರಂತೆ. ತಂದೆ ತಾಯಿಯ ನಿರೀಕ್ಷೆಗಳನ್ನು ಪೂರೈಸುವ ಭರವಸೆ ಅವರದು.<br /> <br /> ನಾಯಕಿ ರಶ್ಮಿಗೌತಮ್ ತೆಲುಗು ಮೂಲದವರು. ತೆಲುಗು ಧಾರಾವಾಹಿಗಳು ಮತ್ತು ತಮಿಳಿನ ಒಂದು ಸಿನಿಮಾದಲ್ಲಿ ನಟಿಸಿರುವ ಅವರಿಗಿದು ಕನ್ನಡದಲ್ಲಿ ಮೊದಲ ಚಿತ್ರ. <br /> ಮಗನ ಮೊದಲ ಚಿತ್ರವನ್ನು ತಮ್ಮ ಬ್ಯಾನರ್ನಲ್ಲಿಯೇ ನಿರ್ಮಿಸಬೇಕು ಎಂದುಕೊಂಡಿದ್ದ ಚಿತ್ರದ ನಿರ್ಮಾಪಕಿ ಪರಿಮಳಾ ಜಗ್ಗೇಶ್ ಪತಿಯ ಮೊದಲ ನಿರ್ದೇಶನದ ಚಿತ್ರವನ್ನು ನಿರ್ಮಿಸುತ್ತಿರುವ ಖುಷಿಯಲ್ಲಿದ್ದರು.<br /> <br /> ನಟ ಅಭಿಜಿತ್, ಶೈಲಶ್ರೀ, ಛಾಯಾಗ್ರಾಹಕ ರಮೇಶ್ ಬಾಬು, ಸಂಗೀತ ನಿರ್ದೇಶಕ ವಿನಯ ಚಂದ್ರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಗನ ಕನಸನ್ನು ಈಡೇರಿಸುತ್ತಿರುವ ಸಂಭ್ರಮದಲ್ಲಿದ್ದರು ನಟ ಜಗ್ಗೇಶ್. ಚಿತ್ರರಂಗದಲ್ಲಿ ಮಗನಿಗೊಂದು ಬ್ರೇಕ್ ಸಿಗುವಂತಾಗಬೇಕು ಎಂಬುದು ಜಗ್ಗೇಶ್ ಹೆಬ್ಬಯಕೆ ಕೂಡ. ಅದಕ್ಕಾಗಿಯೇ ಅವರು ನಿರ್ದೇಶನದ ಕ್ಯಾಪ್ ತೊಡಲು ಸಿದ್ಧರಾಗಿದ್ದು. <br /> <br /> ತಮ್ಮ ಚೊಚ್ಚಿಲ ನಿರ್ದೇಶನದ ಚಿತ್ರ `ಗುರು~ವಿನ ಮುಹೂರ್ತವನ್ನು ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದರು ಜಗ್ಗೇಶ್. ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಜೊತೆಗೆ ಅಲ್ಲಿ ಗೃಹ ಸಚಿವ ಅಶೋಕ್ ಸೇರಿದಂತೆ ಶಿವರಾಜ್ಕುಮಾರ್, ಗಣೇಶ್, ಶ್ರೀನಗರ ಕಿಟ್ಟಿ, ಯಶ್, ತಾರಾ, ಸುಧಾರಾಣಿ ಮುಂತಾದ ತಾರೆಯರ ದಂಡೂ ನೆರೆದಿತ್ತು.<br /> <br /> ಸುದ್ದಿಗೋಷ್ಠಿಯಲ್ಲಿ ಮಾತಿಗಿಳಿದ ಜಗ್ಗೇಶ್ ತಮ್ಮ 30 ವರ್ಷದ ಬಣ್ಣದ ಲೋಕದ ಬದುಕಿನ ಕ್ಷಣಗಳನ್ನು ಕೆದಕತೊಡಗಿದರು. ಆರಂಭದ ದಿನಗಳಲ್ಲಿ ಅವರು ಅನುಭವಿಸಿದ ನೋವು, ಅವಮಾನ, ಹತಾಶೆಗಳ ನೆನಪು ಅವರ ಕಣ್ಣುಗಳನ್ನು ತೇವಗೊಳಿಸಿತು. <br /> <br /> ಸಹಾಯಕ ನಿರ್ದೇಶಕನಾಗಿ ಬದುಕು ಕಂಡುಕೊಳ್ಳುವ ಬಯಕೆಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ತಾವು ಕೆಲಸಕ್ಕಾಗಿ ಹುಡುಕಾಡಿದ ದಿನಗಳನ್ನು ನೆನೆದು ಭಾವುಕರಾದರು. ಇಷ್ಟೆಲ್ಲಾ ಸಂಕಟಗಳನ್ನು ಅನುಭವಿಸಿದ್ದರೂ 10 ರೂಪಾಯಿಗಾಗಿ ಅಕ್ಕನ ಬಳಿ ಕೈಚಾಚಬೇಕಾಗಿತ್ತು ಎನ್ನುತ್ತಿದ್ದಂತೆ ಅವರ ಕಣ್ಣ ಹನಿ ಕೆನ್ನೆ ಮೇಲೆ ಜಾರಿತು. <br /> <br /> ಮಾತು ಮುಂದುವರಿಸಲಾಗದೆ ಮೈಕನ್ನು ನಟ ಸುದರ್ಶನ್ ಕೈಗೆ ಹಸ್ತಾಂತರಿಸಿದರು.<br /> `ನಾನು ಸಂಕಷ್ಟದಲ್ಲಿದ್ದ ಹಲವು ಬಾರಿ ನೆರವಾಗಿದ್ದು ಜಗ್ಗೇಶ್~ ಎಂದು ಸ್ಮರಿಸಿಕೊಂಡರು ಸುದರ್ಶನ್. ಅವರು ಸಹಾನುಭೂತಿ ಮತ್ತು ಸಹಾಯ ನೀಡುವ ಉದಾರ ವ್ಯಕ್ತಿ ಎಂದು ಜಗ್ಗೇಶ್ ಬಗ್ಗೆ ಹೊಗಳಿಕೆ ಮಳೆ ಸುರಿಸಿದರು. ಚಿತ್ರದಲ್ಲಿ ಅವರು `ಗುರು~ವಿಗೆ ತಂದೆಯಾಗಿ ನಟಿಸುತ್ತಿದ್ದಾರೆ. ನಿಜ ಬದುಕಿನಲ್ಲಿ ನಾನು ಜಗ್ಗೇಶ್ಗೆ ತಂದೆಯಿದ್ದಂತೆ ಎಂದರು.<br /> <br /> `ಗುರು~ ಆ್ಯಕ್ಷನ್ ಕಥೆಯುಳ್ಳ ಚಿತ್ರವಾದ್ದರಿಂದ ನಾಯಕ ನಟ ಗುರುರಾಜ್ ಅದಕ್ಕೆ ತಕ್ಕಂತೆ ದೇಹಾಕಾರ ಹೊಂದಲು ಬ್ಯಾಂಕಾಕ್ ಮತ್ತು ಥಾಯ್ಲೆಂಡ್ಗಳಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಅಲ್ಲಿ ಅವರು ಮಾರ್ಷಿಯಲ್ ಆರ್ಟ್ಸ್ ಅನ್ನೂ ಕಲಿತಿದ್ದಾರಂತೆ. ತಂದೆ ತಾಯಿಯ ನಿರೀಕ್ಷೆಗಳನ್ನು ಪೂರೈಸುವ ಭರವಸೆ ಅವರದು.<br /> <br /> ನಾಯಕಿ ರಶ್ಮಿಗೌತಮ್ ತೆಲುಗು ಮೂಲದವರು. ತೆಲುಗು ಧಾರಾವಾಹಿಗಳು ಮತ್ತು ತಮಿಳಿನ ಒಂದು ಸಿನಿಮಾದಲ್ಲಿ ನಟಿಸಿರುವ ಅವರಿಗಿದು ಕನ್ನಡದಲ್ಲಿ ಮೊದಲ ಚಿತ್ರ. <br /> ಮಗನ ಮೊದಲ ಚಿತ್ರವನ್ನು ತಮ್ಮ ಬ್ಯಾನರ್ನಲ್ಲಿಯೇ ನಿರ್ಮಿಸಬೇಕು ಎಂದುಕೊಂಡಿದ್ದ ಚಿತ್ರದ ನಿರ್ಮಾಪಕಿ ಪರಿಮಳಾ ಜಗ್ಗೇಶ್ ಪತಿಯ ಮೊದಲ ನಿರ್ದೇಶನದ ಚಿತ್ರವನ್ನು ನಿರ್ಮಿಸುತ್ತಿರುವ ಖುಷಿಯಲ್ಲಿದ್ದರು.<br /> <br /> ನಟ ಅಭಿಜಿತ್, ಶೈಲಶ್ರೀ, ಛಾಯಾಗ್ರಾಹಕ ರಮೇಶ್ ಬಾಬು, ಸಂಗೀತ ನಿರ್ದೇಶಕ ವಿನಯ ಚಂದ್ರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>