<p><strong>ಚಿತ್ರ:</strong> ದಿಲ್ ಬೇಚಾರಾ (ಹಿಂದಿ)<br /><strong>ನಿರ್ಮಾಣ:</strong> ಫಾಕ್ಸ್ ಸ್ಟಾರ್ ಸ್ಟುಡಿಯೋಸ್<br /><strong>ನಿರ್ದೇಶನ:</strong> ಮುಖೇಶ್ ಛಾಬ್ರಾ<br /><strong>ತಾರಾಗಣ:</strong> ಸುಶಾಂತ್ ಸಿಂಗ್ ರಜಪೂತ್, ಸಂಜನಾ ಸಂಘಿ, ಸಾಹಿಲ್, ಸ್ವಸ್ತಿಕಾ ಮುಖರ್ಜಿ, ಸುಬ್ಬಲಕ್ಷ್ಮಿ.</p>.<p>ಸಾವಿನ ನೆರಳಲ್ಲಿ ಬದುಕಿನ ಗಂಧ ಆಘ್ರಾಣಿಸುವ ಘನಮನಗಳ ಸಿನಿಮಾ ಭಾವುಕತೆಯದ್ದು. ‘ದಿಲ್ ಬೇಚಾರಾ’ ಈ ಕಾರಣಕ್ಕಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಅಗಲಿದ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಕೊನೆಯ ಹಿಂದಿ ಸಿನಿನೆನಪಾಗಿಯೂ ಭಾವುಕವಾದುದೇ.<br />ಎರಡೂ ತುಟಿಗಳನ್ನು ಹೊಲೆದಂತೆ ಮಾಡಿಕೊಂಡು, ಕಂಗಳಲ್ಲಿ ಆಡದೇ ಇರುವ ಮಾತುಗಳನ್ನು ಮಡಚಿಟ್ಟುಕೊಂಡಂತೆ ನಿಲ್ಲುವ ಸುಶಾಂತ್. ಎ.ಆರ್. ರೆಹಮಾನ್ ಲಯಸಂಗೀತಕ್ಕೆ ಲೀಲಾಜಾಲವಾಗಿ ಹೆಜ್ಜೆ ಹಾಕುವ ಸುಶಾಂತ್. ಆತ್ಮಹತ್ಯೆಯ ಕುರಿತ ಸಂಭಾಷಣೆಯೊಂದು ಹೊಮ್ಮುವಾಗ ಬಿಟ್ಟೂಬಿಡದೇ ಕಾಡುವ ಸುಶಾಂತ್... ಹೀಗೆ ಇಡೀ ಸಿನಿಮಾ ಒಂದು ಬಗೆಯಲ್ಲಿ ಈ ನಟನ ಸ್ಮರಣಾ ಕೃತಿಯ ಚೌಕಟ್ಟನ್ನು ಪಡೆದುಕೊಂಡುಬಿಡುತ್ತದೆ.</p>.<p>ಜಾನ್ ಗ್ರೀನ್ ಬರೆದ ‘ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ಕಾದಂಬರಿಯು ಅದೇ ಹೆಸರಿನಲ್ಲಿ ಇಂಗ್ಲಿಷ್ ಸಿನಿಮಾ ಆಗಿ ಜನಮನ ಗೆದ್ದಿತ್ತು. ಎರಡು ತಾಸಿನ ಆ ಸಿನಿಮಾದ ಕಥೆಯನ್ನೇ ನಿರ್ದೇಶಕನಾಗಿ ತಮ್ಮ ರಂಗಪ್ರವೇಶಕ್ಕೆ ಮುಖೇಶ್ ಛಾಬ್ರಾ ಎತ್ತಿಕೊಂಡಿದ್ದಾರೆ. ಭಾರತೀಯ ಜಾಯಮಾನಕ್ಕೆ ಒಗ್ಗಿಸಿ ರೀಮೇಕ್ ಮಾಡಿದ್ದಾರೆ. ಚಿತ್ರದ ಅವಧಿಯನ್ನು ಮೂಲಸಿನಿಮಾಗಿಂತ ಕಾಲು ತಾಸಿನಷ್ಟು ತಗ್ಗಿಸಿಯೂ ಇದ್ದಾರೆ.</p>.<p>ಮೂಳೆ ಕ್ಯಾನ್ಸರ್ ತನಗೆ ಸೋಕಿಹೋಯಿತೆನ್ನುವ ನಾಯಕ ಮ್ಯಾನಿ. ಥೈರಾಯಿಡ್ ಕ್ಯಾನ್ಸರ್ಗೆ ಒಳಗಾಗಿ, ಹೆಗಲಚೀಲದಲ್ಲಿ ಆಮ್ಲಜನಕದ ಸಿಲಿಂಡರ್ ತಗಲಿಹಾಕಿಕೊಂಡು, ಮೂಗಿಗೆ ಪೈಪುಗಳನ್ನು ಸಿಕ್ಕಿಸಿಕೊಂಡ ಕಿಜಿ. ಈ ಇಬ್ಬರ ಜೀವಂತಿಕೆಯ ಹುಡುಕಾಟದ ಸಿನಿಮಾ ‘ದಿಲ್ ಬೇಚಾರಾ’. ಸಿನಿಮಾದ ಒಳಗೊಂದು ಸಿನಿಮಾ ಇದೆ. ಅದರಲ್ಲಿ ಅಪೂರ್ಣವಾದ ಹಾಡಿದೆ. ಅದು ಪೂರ್ಣವಾಗಬೇಕೆಂಬುದನ್ನು ರೂಪಕವಾಗಿ ಸ್ವೀಕರಿಸಿದರೂ ಕಾಡುವುದು ಸುಶಾಂತ್ ನೆನಪೇ.</p>.<p>ತುಂಟಮಾತುಗಳ ರಂಜನೆಯ ಪಯಣದಂತೆ ಸಾಗುವ ಸಿನಿಮಾದಲ್ಲಿ ‘ರಜನೀಕಾಂತ್’ ಹೆಸರೂ ಪಾತ್ರವೇ. ಎ.ಆರ್. ರೆಹಮಾನ್ ಸಂಗೀತ ಇನ್ನೊಂದು ಘನಪಾತ್ರ. ‘ತಾರೆ ಗಿನ್’ ಹಾಡಿನಲ್ಲಿ ಅವರ ಲಯಕೌಶಲ ಅರಿವಿಗೆ ಬಂದೀತು.</p>.<p>‘ಸೊಂಚಾರಿಯಾ’ ತರಹದ ಸಿನಿಮಾದ ಅಭಿನಯಕ್ಕೆ ಹೋಲಿಸಿದರೆ ಇದರಲ್ಲಿ ಸುಶಾಂತ್ ತುಸು ಡಲ್ಲೇ. ಆದರೆ, ಅವರಿಲ್ಲದ ಸಂದರ್ಭದಲ್ಲಿ ಅವರನ್ನು ಕಾಣುವ ಭಾವುಕ ಸ್ಥಿತಿ ಆ ಕೊರತೆಯನ್ನು ಮುಚ್ಚಿಹಾಕುತ್ತದೆ. ಸಂಜನಾ ಸಂಘಿ ಮುಗ್ಧ ಮುಖ ನೋಡಿಸಿಕೊಳ್ಳುತ್ತದೆ. ಸಾಹಿಲ್, ಸ್ವಸ್ತಿಕಾ ಮುಖರ್ಜಿ ಅಭಿನಯ ಔಚಿತ್ಯಪೂರ್ಣ.</p>.<p>1989ರಲ್ಲಿ ಮಣಿರತ್ನಂ ತೆಲುಗಿನಲ್ಲಿ ‘ಗೀತಾಂಜಲಿ’ ಸಿನಿಮಾ ನಿರ್ದೇಶಿಸಿದ್ದರು. ಅದರ ವಸ್ತುವೂ ನಾಯಕ–ನಾಯಕಿಯ ಸಾವಿನ ನೆರಳಲ್ಲಿನ ಪಯಣ. ಇಳಯರಾಜಾ ಸಂಗೀತ ಆ ಸಿನಿಮಾಗೆ ವಿಷಾದದ ಪರದೆಯೊಂದನ್ನು ಹಾಕಿತ್ತು. ಈ ಸಿನಿಮಾದಲ್ಲಿ ಅಂತಹ ಪರದೆಯೊಂದು ನಾಪತ್ತೆಯಾಗಿದೆ. ಇನ್ನಷ್ಟು ಭಾವವೀಣೆ ಮೀಟಬಹುದಿತ್ತು ಎನ್ನುವ ಕಡೆ ನಿರ್ದೇಶಕರದ್ದು ಧಾವಂತದ ನಡೆ.</p>.<p>ಅಗಲಿದ ನಾಯಕ ತೆರೆಮೇಲೆಯೂ ಉಸಿರುಗಟ್ಟುವುದನ್ನು ನೋಡುವುದು ಕಷ್ಟವೇ. ಆದರೂ ಕೊನೆಯಲ್ಲಿ ಹೊಮ್ಮುವ ಸಂಭಾಷಣೆ ನೆನಪಿನ್ನೂ ಜೀವಂತ ಎಂಬ ಆಶಾವಾದದ ಸಣ್ಣ ಮಿಂಚನ್ನು ಮೂಡಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರ:</strong> ದಿಲ್ ಬೇಚಾರಾ (ಹಿಂದಿ)<br /><strong>ನಿರ್ಮಾಣ:</strong> ಫಾಕ್ಸ್ ಸ್ಟಾರ್ ಸ್ಟುಡಿಯೋಸ್<br /><strong>ನಿರ್ದೇಶನ:</strong> ಮುಖೇಶ್ ಛಾಬ್ರಾ<br /><strong>ತಾರಾಗಣ:</strong> ಸುಶಾಂತ್ ಸಿಂಗ್ ರಜಪೂತ್, ಸಂಜನಾ ಸಂಘಿ, ಸಾಹಿಲ್, ಸ್ವಸ್ತಿಕಾ ಮುಖರ್ಜಿ, ಸುಬ್ಬಲಕ್ಷ್ಮಿ.</p>.<p>ಸಾವಿನ ನೆರಳಲ್ಲಿ ಬದುಕಿನ ಗಂಧ ಆಘ್ರಾಣಿಸುವ ಘನಮನಗಳ ಸಿನಿಮಾ ಭಾವುಕತೆಯದ್ದು. ‘ದಿಲ್ ಬೇಚಾರಾ’ ಈ ಕಾರಣಕ್ಕಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಅಗಲಿದ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಕೊನೆಯ ಹಿಂದಿ ಸಿನಿನೆನಪಾಗಿಯೂ ಭಾವುಕವಾದುದೇ.<br />ಎರಡೂ ತುಟಿಗಳನ್ನು ಹೊಲೆದಂತೆ ಮಾಡಿಕೊಂಡು, ಕಂಗಳಲ್ಲಿ ಆಡದೇ ಇರುವ ಮಾತುಗಳನ್ನು ಮಡಚಿಟ್ಟುಕೊಂಡಂತೆ ನಿಲ್ಲುವ ಸುಶಾಂತ್. ಎ.ಆರ್. ರೆಹಮಾನ್ ಲಯಸಂಗೀತಕ್ಕೆ ಲೀಲಾಜಾಲವಾಗಿ ಹೆಜ್ಜೆ ಹಾಕುವ ಸುಶಾಂತ್. ಆತ್ಮಹತ್ಯೆಯ ಕುರಿತ ಸಂಭಾಷಣೆಯೊಂದು ಹೊಮ್ಮುವಾಗ ಬಿಟ್ಟೂಬಿಡದೇ ಕಾಡುವ ಸುಶಾಂತ್... ಹೀಗೆ ಇಡೀ ಸಿನಿಮಾ ಒಂದು ಬಗೆಯಲ್ಲಿ ಈ ನಟನ ಸ್ಮರಣಾ ಕೃತಿಯ ಚೌಕಟ್ಟನ್ನು ಪಡೆದುಕೊಂಡುಬಿಡುತ್ತದೆ.</p>.<p>ಜಾನ್ ಗ್ರೀನ್ ಬರೆದ ‘ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ಕಾದಂಬರಿಯು ಅದೇ ಹೆಸರಿನಲ್ಲಿ ಇಂಗ್ಲಿಷ್ ಸಿನಿಮಾ ಆಗಿ ಜನಮನ ಗೆದ್ದಿತ್ತು. ಎರಡು ತಾಸಿನ ಆ ಸಿನಿಮಾದ ಕಥೆಯನ್ನೇ ನಿರ್ದೇಶಕನಾಗಿ ತಮ್ಮ ರಂಗಪ್ರವೇಶಕ್ಕೆ ಮುಖೇಶ್ ಛಾಬ್ರಾ ಎತ್ತಿಕೊಂಡಿದ್ದಾರೆ. ಭಾರತೀಯ ಜಾಯಮಾನಕ್ಕೆ ಒಗ್ಗಿಸಿ ರೀಮೇಕ್ ಮಾಡಿದ್ದಾರೆ. ಚಿತ್ರದ ಅವಧಿಯನ್ನು ಮೂಲಸಿನಿಮಾಗಿಂತ ಕಾಲು ತಾಸಿನಷ್ಟು ತಗ್ಗಿಸಿಯೂ ಇದ್ದಾರೆ.</p>.<p>ಮೂಳೆ ಕ್ಯಾನ್ಸರ್ ತನಗೆ ಸೋಕಿಹೋಯಿತೆನ್ನುವ ನಾಯಕ ಮ್ಯಾನಿ. ಥೈರಾಯಿಡ್ ಕ್ಯಾನ್ಸರ್ಗೆ ಒಳಗಾಗಿ, ಹೆಗಲಚೀಲದಲ್ಲಿ ಆಮ್ಲಜನಕದ ಸಿಲಿಂಡರ್ ತಗಲಿಹಾಕಿಕೊಂಡು, ಮೂಗಿಗೆ ಪೈಪುಗಳನ್ನು ಸಿಕ್ಕಿಸಿಕೊಂಡ ಕಿಜಿ. ಈ ಇಬ್ಬರ ಜೀವಂತಿಕೆಯ ಹುಡುಕಾಟದ ಸಿನಿಮಾ ‘ದಿಲ್ ಬೇಚಾರಾ’. ಸಿನಿಮಾದ ಒಳಗೊಂದು ಸಿನಿಮಾ ಇದೆ. ಅದರಲ್ಲಿ ಅಪೂರ್ಣವಾದ ಹಾಡಿದೆ. ಅದು ಪೂರ್ಣವಾಗಬೇಕೆಂಬುದನ್ನು ರೂಪಕವಾಗಿ ಸ್ವೀಕರಿಸಿದರೂ ಕಾಡುವುದು ಸುಶಾಂತ್ ನೆನಪೇ.</p>.<p>ತುಂಟಮಾತುಗಳ ರಂಜನೆಯ ಪಯಣದಂತೆ ಸಾಗುವ ಸಿನಿಮಾದಲ್ಲಿ ‘ರಜನೀಕಾಂತ್’ ಹೆಸರೂ ಪಾತ್ರವೇ. ಎ.ಆರ್. ರೆಹಮಾನ್ ಸಂಗೀತ ಇನ್ನೊಂದು ಘನಪಾತ್ರ. ‘ತಾರೆ ಗಿನ್’ ಹಾಡಿನಲ್ಲಿ ಅವರ ಲಯಕೌಶಲ ಅರಿವಿಗೆ ಬಂದೀತು.</p>.<p>‘ಸೊಂಚಾರಿಯಾ’ ತರಹದ ಸಿನಿಮಾದ ಅಭಿನಯಕ್ಕೆ ಹೋಲಿಸಿದರೆ ಇದರಲ್ಲಿ ಸುಶಾಂತ್ ತುಸು ಡಲ್ಲೇ. ಆದರೆ, ಅವರಿಲ್ಲದ ಸಂದರ್ಭದಲ್ಲಿ ಅವರನ್ನು ಕಾಣುವ ಭಾವುಕ ಸ್ಥಿತಿ ಆ ಕೊರತೆಯನ್ನು ಮುಚ್ಚಿಹಾಕುತ್ತದೆ. ಸಂಜನಾ ಸಂಘಿ ಮುಗ್ಧ ಮುಖ ನೋಡಿಸಿಕೊಳ್ಳುತ್ತದೆ. ಸಾಹಿಲ್, ಸ್ವಸ್ತಿಕಾ ಮುಖರ್ಜಿ ಅಭಿನಯ ಔಚಿತ್ಯಪೂರ್ಣ.</p>.<p>1989ರಲ್ಲಿ ಮಣಿರತ್ನಂ ತೆಲುಗಿನಲ್ಲಿ ‘ಗೀತಾಂಜಲಿ’ ಸಿನಿಮಾ ನಿರ್ದೇಶಿಸಿದ್ದರು. ಅದರ ವಸ್ತುವೂ ನಾಯಕ–ನಾಯಕಿಯ ಸಾವಿನ ನೆರಳಲ್ಲಿನ ಪಯಣ. ಇಳಯರಾಜಾ ಸಂಗೀತ ಆ ಸಿನಿಮಾಗೆ ವಿಷಾದದ ಪರದೆಯೊಂದನ್ನು ಹಾಕಿತ್ತು. ಈ ಸಿನಿಮಾದಲ್ಲಿ ಅಂತಹ ಪರದೆಯೊಂದು ನಾಪತ್ತೆಯಾಗಿದೆ. ಇನ್ನಷ್ಟು ಭಾವವೀಣೆ ಮೀಟಬಹುದಿತ್ತು ಎನ್ನುವ ಕಡೆ ನಿರ್ದೇಶಕರದ್ದು ಧಾವಂತದ ನಡೆ.</p>.<p>ಅಗಲಿದ ನಾಯಕ ತೆರೆಮೇಲೆಯೂ ಉಸಿರುಗಟ್ಟುವುದನ್ನು ನೋಡುವುದು ಕಷ್ಟವೇ. ಆದರೂ ಕೊನೆಯಲ್ಲಿ ಹೊಮ್ಮುವ ಸಂಭಾಷಣೆ ನೆನಪಿನ್ನೂ ಜೀವಂತ ಎಂಬ ಆಶಾವಾದದ ಸಣ್ಣ ಮಿಂಚನ್ನು ಮೂಡಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>