ಪ್ರೀತಿಯ ಕಥೆ ಕೊಡುತ್ತಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರು ‘ಗರಡಿ’ ಪ್ರವೇಶಿಸಿ ಆ್ಯಕ್ಷನ್ ಕಥೆ ಹೆಣೆದಿದ್ದಾರೆ. ಇಲ್ಲಿ ಪ್ರೀತಿಗೆ, ಹಾಸ್ಯಕ್ಕೆ ಸ್ಥಳಾವಕಾಶ ಕಡಿಮೆ; ಕುಸ್ತಿಗೇ ಆದ್ಯತೆ. ಸಿದ್ಧ ಸೂತ್ರಗಳನ್ನು ಇಟ್ಟುಕೊಂಡು ಹೆಣೆದ ಈ ಸಿನಿಮಾ ಕಥೆಯ ‘ಪಟ್ಟು’ ಸಮಯ ಉರುಳಿದಂತೆ ಸಡಿಲವಾಗಿ, ಮತ್ತೆ ಗಟ್ಟಿಗೊಳ್ಳಲು ದರ್ಶನ್ ಪ್ರವೇಶದವರೆಗೆ ಕಾಯುತ್ತದೆ. ‘ಗಾಳಿಪಟ–2’ರಂತೆಯೇ ಬಿಗಿಯಾದ ಕಥೆ ಇಲ್ಲದೆ ನಿರ್ದೇಶಕರು ‘ಗರಡಿ’ ಪ್ರವೇಶಿಸಿದಂತೆ ತೋರುತ್ತದೆ.