ಪ್ರತಿಭಟಿಸಲು ಅನೇಕ ಮಾರ್ಗಗಳು ಇರಬಹುದು. ನಮ್ಮ ಬರವಣಿಗೆ, ಸಂಗೀತ, ಕಲೆಯ ಮೂಲಕ ಪ್ರತಿಭಟಿಸುವ ಜೊತೆಗೆ ಬೀದಿಗಿಳಿದು ಪ್ರತಿಭಟಿಸುವ, ಹೋರಾಡುವ ಮತ್ತು ಪ್ರಶ್ನಿಸುವ ಅಗತ್ಯವಿದೆ. ದೇಶವನ್ನು ಜೀವಂತವಾಗಿಡಲು ಬೀದಿಗಿಳಿದು ಹೋರಾಡುವುದು ಅಗತ್ಯವಾಗಿದೆ. ಈಗ ಉಳಿದಿರುವುದು ಅದೊಂದೆ ಮಾರ್ಗ ಎನ್ನುವುದು ಸಂಗೀತಗಾರನ ಸ್ಪಷ್ಟ ಮಾತು.