ಹೋರಾಟ–ಅರಿವು–ಸಂಭ್ರಮದ ಸಾಕ್ಷೀಪ್ರಜ್ಞೆಯೇ ಸಿಜಿಕೆ ಎನ್ನುವ ನಂಬಿಕೆಯೊಂದಿಗೆ ಸಮಾನ ಮನಸ್ಕ ಸಾಂಸ್ಕೃತಿಕ ಮನಸುಗಳು ಸೇರಿ ಜೂನ್ 27ರಂದು ‘ಸಿಜಿಕೆ ಬೀದಿ ರಂಗ ದಿನ’ಆಯೋಜಿಸುತ್ತಿವೆ. ‘ಮೌಲ್ಯ ಮತ್ತು ಸಿದ್ಧಾಂತಗಳು ಕ್ಲೀಷೆ ಎನ್ನಿಸುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ಚಿಂತನೆಗಳು ಹಾದಿ ತಪ್ಪುತ್ತಿವೆ. ಈ ಸಂದರ್ಭದಲ್ಲಿ ಜನಪರವಾದ ನಿಲುವುಗಳು ಮತ್ತೆ ಗರಿಗೆದರಬೇಕಿದೆ ಎನ್ನುವ ಆಶಯ ಈ ಕಾರ್ಯಕ್ರಮದ್ದು. ಜೂನ್ 27 ಸಿಜಿಕೆ ಹುಟ್ಟು ಹಬ್ಬ. ನಾಡಿನ ಮಹಾನ್ ರಂಗಚೇತನ, ಸಂಘಟಕ ಸಿಜಿಕೆ ನೆನಪಿಗೆ ಒಂದು ಹೊಸ ಬೀದಿನಾಟಕದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ ಮತ್ತು ಬೆಂಗಳೂರು ಆರ್ಟ್ ಫೌಂಡೇಶನ್ ಸಂಘಟಕರು ತಿಳಿಸಿದ್ದಾರ.