<p>ಹೋರಾಟ–ಅರಿವು–ಸಂಭ್ರಮದ ಸಾಕ್ಷೀಪ್ರಜ್ಞೆಯೇ ಸಿಜಿಕೆ ಎನ್ನುವ ನಂಬಿಕೆಯೊಂದಿಗೆ ಸಮಾನ ಮನಸ್ಕ ಸಾಂಸ್ಕೃತಿಕ ಮನಸುಗಳು ಸೇರಿ ಜೂನ್ 27ರಂದು ‘ಸಿಜಿಕೆ ಬೀದಿ ರಂಗ ದಿನ’ಆಯೋಜಿಸುತ್ತಿವೆ. ‘ಮೌಲ್ಯ ಮತ್ತು ಸಿದ್ಧಾಂತಗಳು ಕ್ಲೀಷೆ ಎನ್ನಿಸುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ಚಿಂತನೆಗಳು ಹಾದಿ ತಪ್ಪುತ್ತಿವೆ. ಈ ಸಂದರ್ಭದಲ್ಲಿ ಜನಪರವಾದ ನಿಲುವುಗಳು ಮತ್ತೆ ಗರಿಗೆದರಬೇಕಿದೆ ಎನ್ನುವ ಆಶಯ ಈ ಕಾರ್ಯಕ್ರಮದ್ದು. ಜೂನ್ 27 ಸಿಜಿಕೆ ಹುಟ್ಟು ಹಬ್ಬ. ನಾಡಿನ ಮಹಾನ್ ರಂಗಚೇತನ, ಸಂಘಟಕ ಸಿಜಿಕೆ ನೆನಪಿಗೆ ಒಂದು ಹೊಸ ಬೀದಿನಾಟಕದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ ಮತ್ತು ಬೆಂಗಳೂರು ಆರ್ಟ್ ಫೌಂಡೇಶನ್ ಸಂಘಟಕರು ತಿಳಿಸಿದ್ದಾರ.</p>.<p>ಉದ್ಘಾಟನೆ: ರಂಗಕರ್ಮಿ ಸಿ.ಕೆ. ಗುಂಡಣ್ಣ, ಅಧ್ಯಕ್ಷತೆ: ಲಲಿತ ಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಮೂರ್ತಿ, ಅಭಿನಂದನಾ ನುಡಿ: ಲೇಖಕ ಎಲ್ ಎನ್ ಮುಕುಂದರಾಜ್, ಅತಿಥಿಗಳು: ಕತೆಗಾರ ಹನಮಂತ ಹಾಲಿಗೇರಿ.</p>.<p>ನಿರ್ವಹಣೆ: ಕಲಾವಿದ ಓ ವೆಂಕಟೇಶ್, ಪ್ರದೀಪ್ ತಿಪಟೂರು. ಉಪಸ್ಥಿತಿ: ಸಿಜಿಕೆ ರಂಗ ಪುರಸ್ಕಾರ ಪುರಸ್ಕೃತ ಕತೆಗಾರ ಕೇಶವರೆಡ್ಡಿ ಹಂದ್ರಾಳ.ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಅಭಿನಯಿಸುವ ಕುವೆಂಪು ರಚಿತ ‘ದಶಾನನ ಸ್ವಪ್ನಸಿದ್ದಿ’ ನಾಟಕ<br />(ನಿ: ಮಂಜುನಾಥ್ ಎಲ್ ಬಡಿಗೇರ್) ಪ್ರದರ್ಶನ.</p>.<p>ಸ್ಥಳ: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ ರಸ್ತೆ.<br />ಸಂಜೆ 6ಕ್ಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೋರಾಟ–ಅರಿವು–ಸಂಭ್ರಮದ ಸಾಕ್ಷೀಪ್ರಜ್ಞೆಯೇ ಸಿಜಿಕೆ ಎನ್ನುವ ನಂಬಿಕೆಯೊಂದಿಗೆ ಸಮಾನ ಮನಸ್ಕ ಸಾಂಸ್ಕೃತಿಕ ಮನಸುಗಳು ಸೇರಿ ಜೂನ್ 27ರಂದು ‘ಸಿಜಿಕೆ ಬೀದಿ ರಂಗ ದಿನ’ಆಯೋಜಿಸುತ್ತಿವೆ. ‘ಮೌಲ್ಯ ಮತ್ತು ಸಿದ್ಧಾಂತಗಳು ಕ್ಲೀಷೆ ಎನ್ನಿಸುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ಚಿಂತನೆಗಳು ಹಾದಿ ತಪ್ಪುತ್ತಿವೆ. ಈ ಸಂದರ್ಭದಲ್ಲಿ ಜನಪರವಾದ ನಿಲುವುಗಳು ಮತ್ತೆ ಗರಿಗೆದರಬೇಕಿದೆ ಎನ್ನುವ ಆಶಯ ಈ ಕಾರ್ಯಕ್ರಮದ್ದು. ಜೂನ್ 27 ಸಿಜಿಕೆ ಹುಟ್ಟು ಹಬ್ಬ. ನಾಡಿನ ಮಹಾನ್ ರಂಗಚೇತನ, ಸಂಘಟಕ ಸಿಜಿಕೆ ನೆನಪಿಗೆ ಒಂದು ಹೊಸ ಬೀದಿನಾಟಕದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ ಮತ್ತು ಬೆಂಗಳೂರು ಆರ್ಟ್ ಫೌಂಡೇಶನ್ ಸಂಘಟಕರು ತಿಳಿಸಿದ್ದಾರ.</p>.<p>ಉದ್ಘಾಟನೆ: ರಂಗಕರ್ಮಿ ಸಿ.ಕೆ. ಗುಂಡಣ್ಣ, ಅಧ್ಯಕ್ಷತೆ: ಲಲಿತ ಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಮೂರ್ತಿ, ಅಭಿನಂದನಾ ನುಡಿ: ಲೇಖಕ ಎಲ್ ಎನ್ ಮುಕುಂದರಾಜ್, ಅತಿಥಿಗಳು: ಕತೆಗಾರ ಹನಮಂತ ಹಾಲಿಗೇರಿ.</p>.<p>ನಿರ್ವಹಣೆ: ಕಲಾವಿದ ಓ ವೆಂಕಟೇಶ್, ಪ್ರದೀಪ್ ತಿಪಟೂರು. ಉಪಸ್ಥಿತಿ: ಸಿಜಿಕೆ ರಂಗ ಪುರಸ್ಕಾರ ಪುರಸ್ಕೃತ ಕತೆಗಾರ ಕೇಶವರೆಡ್ಡಿ ಹಂದ್ರಾಳ.ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಅಭಿನಯಿಸುವ ಕುವೆಂಪು ರಚಿತ ‘ದಶಾನನ ಸ್ವಪ್ನಸಿದ್ದಿ’ ನಾಟಕ<br />(ನಿ: ಮಂಜುನಾಥ್ ಎಲ್ ಬಡಿಗೇರ್) ಪ್ರದರ್ಶನ.</p>.<p>ಸ್ಥಳ: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ ರಸ್ತೆ.<br />ಸಂಜೆ 6ಕ್ಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>