ಬೇಲೂರು ಕೃಷ್ಣಮೂರ್ತಿ ರಚನೆಯ “ಹೆಂಡ್ತಿ ಬೇಕು ಹೆಂಡ್ತಿ” ನಾಟಕವನ್ನು ಚಕ್ಷುಶ್ರವ ತಂಡವು ರಂಗರೂಪಕ್ಕಿಳಿಸಿದೆ. ಜ್ಯೂತಿರ್ಮೇಘ ಸಂಸ್ಥೆಯ ಸಹಕಾರದೊಂದಿಗೆ ಈ ನಾಟಕದ ಪ್ರದರ್ಶನವು ನ.1ರಂದು ನಡೆಯಲಿದೆ.
“ಹೆಂಡ್ತಿ ಬೇಕು ಹೆಂಡ್ತಿ” ಹಾಸ್ಯ ಭರಿತ ನಾಟಕ. ಅಜ್ಜನ ಆಸ್ತಿಯನ್ನು ದೋಚಿಕೊಳ್ಳಲು ನಾಯಕನು ನಡೆಸುವ ಕಸರತ್ತುಗಳು ಹಾಗೂ ಅದರಿಂದ ಆಗುವ ಪರಿಣಾಮಗಳು ಈ ನಾಟಕದ ಕಥಾವಸ್ತು.
ನಾಟಕಕ್ಕೆ ಅರ್ಜುನ್ ಅರವಿಂದ್ ಅವರ ನಿರ್ದೇಶನವಿದೆ. ಸಂಗೀತ ನಿರ್ವಹಣೆ ರೋಹಿತ್ ಹಾಗೂ ಕಿರಣ್ ಪ್ರಭು. ತಂಡದ ನಿರ್ವಹಣೆ ಮಧು ಭಾರದ್ವಾಜ್ ಅವರದು.
ಸ್ತಳ– ಕೆ.ಎಚ್. ಕಲಾಸೌಧ, ಹನುಮಂತನಗರ, ಸಂಜೆ 4 ಹಾಗೂ ರಾತ್ರಿ 7.30. ಟಿಕೆಟ್ ದರ ₹100