ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK-10 | ಪ್ರತಾಪ್‌ ಮನೆಯಿಂದ ದೂರವಿದ್ದರೆ ಉತ್ತಮ: ಸ್ವಾಮೀಜಿ ಭವಿಷ್ಯ

Published 2 ಜನವರಿ 2024, 6:31 IST
Last Updated 2 ಜನವರಿ 2024, 6:31 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಅವರ ಆಗಮನವಾಗಿದೆ.

ಮನೆಗೆ ಬಂದಿರುವ ಸ್ವಾಮೀಜಿ ಪೂಜೆ ಮಾಡಿ ಬಿಗ್‌ಬಾಸ್‌ ಸದಸ್ಯರಿಗೆ ಮಂಗಳಾರತಿ, ಪ್ರಸಾದ ನೀಡಿ ಆಶೀರ್ವದಿಸಿದ್ದಾರೆ. ಇದರೊಂದಿಗೆ ಮನೆಯ ಎಲ್ಲ ಸ್ಪರ್ಧಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ಬದುಕಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ವರ್ತೂರ್ ಸಂತೋಷ್‌ ಅವರ ಬಗ್ಗೆ ಹೇಳಿರುವ ಸ್ವಾಮೀಜಿ, ‘ನೀವು ಕಾಲಿನ ಮೇಲೆ ಹಾಕಿಸಿಕೊಳ್ಳದ ಜಾಗದಲ್ಲಿ ಟ್ಯಾಟೂ ಒಂದಿದೆ. ಹಾಕಿಸಿಕೊಂಡು ಬಂದ ದಿನದಿಂದಲೇ ನೆಮ್ಮದಿ ಹೋಯ್ತು’ ಎಂದಿದ್ದಾರೆ. ಇದನ್ನು ವರ್ತೂರ್‌ ಅವರು ಕೂಡ ಒಪ್ಪಿಕೊಂಡಿದ್ದಾರೆ.

‘ನಿಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗುತ್ತಿದೆ’ ಎಂದು ನಮ್ರತಾ ಅವರಿಗೆ ಸ್ವಾಮೀಜಿ ಭವಿಷ್ಯ ನುಡಿದ್ದಾರೆ. ಇದನ್ನು ಕೇಳಿ ನಮ್ರತಾ ಅವರ ಮುಖದಲ್ಲಿ ನಗುವರಳಿದೆ.

ಪ್ರತಾಪ್‌ ಅವರಿಗೆ ಮಾತ್ರ ಸಂಕಟ ಪಡುವಂತಹ ಭವಿಷ್ಯವನ್ನು ಸ್ವಾಮೀಜಿ ನುಡಿದಿದ್ದಾರೆ. ‘ಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ, ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು’ ಎಂದು ಸ್ವಾಮೀಜಿ ಹೇಳಿದ್ದಾರೆ. ಅವರ ಮಾತುಗಳನ್ನು ಕೇಳಿ ಪ್ರತಾಪ್‌ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿದೆ.

ಮನೆಯ ಉಳಿದ ಸ್ಪರ್ಧಿಗಳ ಹಣೆಬರಹದಲ್ಲಿ ಏನು ಬರೆದಿದೆ? ಅವರ ಮಾತುಗಳು ಮನೆಯೊಳಗಿನ ಸಮತೋಲನವನ್ನು ಹದಗೆಡಿಸುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಬಿಗ್‌ಬಾಸ್‌ ಸಂಚಿಕೆಯನ್ನು ವೀಕ್ಷಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT