ಆಗಿದ್ದಿಷ್ಟು.. ಇಟ್ಟಿಗೆಗಳನ್ನು ಸಂಗ್ರಹಿಸಿ ಗೋಪುರ ಕಟ್ಟುವ ಟಾಸ್ಕ್ನ ಅಂತಿಮ ಹಂತದಲ್ಲಿ ಇಟ್ಟಿಗೆ ಸಂಗ್ರಹಿಸಲು ಬಿಗ್ ಬಾಸ್ ಎರಡೂ ತಂಡಕ್ಕೆ ಕೊನೆಯ ಅವಕಾಶ ನೀಡಿದ್ದರು. ಈ ಸಂದರ್ಭ, ಪೈಪೋಟಿಗೆ ಬಿದ್ದ ಸದಸ್ಯರು ಒಬ್ಬರ ಇಟ್ಟಿಗೆಗಳನ್ನು ಮತ್ತೊಬ್ಬರು ಕದಿಯುತ್ತಾ.. ಇಟ್ಟಿಗೆಗಳನ್ನು ಒಡೆಯುತ್ತಾ ಟಾಸ್ಕ್ನಲ್ಲಿ ಮುಳುಗಿದ್ದರು. ಈ ವೇಳೆ, ಪ್ರಶಾಂತ್ ತಳ್ಳಿದರೆಂದು ಆರೋಪ ಮಾಡಿದ ಅರವಿಂದ್ ಜಗಳ ಮಾಡಿದರು. ಇದಕ್ಕೆ ಕೋಪಗೊಂಡ ಸಂಬರಗಿ, ನಿನ್ನ ಗರ್ಲ್ ಫ್ರೆಂಡ್ ಕೈಹಿಡಿದಿದ್ದಕ್ಕೆ ಕೋಪ ಬಂತಾ? ಎಂದು ಕಾಮೆಂಟ್ ಮಾಡಿದರು. ಮಧ್ಯ ಪ್ರವೇಶಿಸಿದ ದಿವ್ಯಾ ಉರುಡುಗ, ಏಯ್ ನನ್ನ ಹೆಸರು ಯಾಕೆ ಹೇಳ್ತೀಯಾ.. ಎಂದು ಕೂಗಾಡಿದರು. ಬಳಿಕ, ರಾಜೀವ್ ಸಹ ಹೆಣ್ಣುಮಕ್ಕಳ ಹೆಸರು ತರುವುದು ಸರಿಯಲ್ಲ ಎಂದು ತಿಳಿ ಹೇಳಿದರು.