ಸುದೀಪ್ ಹೇಳಿದ್ದೇನು?: ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಪೆಟ್ಟಿಗೆಗಳ ಕೀ ಬಳಸಿ ಬೀಗ ತೆಗೆಯುವ ಟಾಸ್ಕ್ ಕೊಡಲಾಗಿತ್ತು. ಆದರೆ, ಒಮ್ಮೆ ಬಳಸಿದ ಕೀ ಅನ್ನು ಮತ್ತೆ ಎಲ್ಲಿಂದ ತಂದರೋ ಅಲ್ಲಿಯೇ ಹಾಕಬೇಕೆಂಬ ನಿಯಮವಿದ್ದರೂ ಸಹ ಅರವಿಂದ್ ಮಾತ್ರ ತಾವು ಬಳಸಿದ ಕೀಗಳನ್ನು ಪೆಟ್ಟಿಗೆ ಮೇಲಿಟ್ಟು ಹೋಗುತ್ತಿದ್ದರು. ಇದನ್ನು ಗಮನಿಸಿದ್ದ ಪ್ರಶಾಂತ್ ಎಚ್ಚರಿಸಿದರೂ ದಿವ್ಯಾ, ಅರವಿಂದ್ ಅವರಿಗೆ ಸರಿಯಾಗಿ ಎಚ್ಚರಿಕೆ ಕೊಟ್ಟಿರಲಿಲ್ಲ. ಕೀ ವಾಪಸ್ ಇಟ್ಟು ಸುಮ್ಮನಾಗಿದ್ದರು. ಇದಕ್ಕೂ ಮುನ್ನ ಎರಡೆರಡು ಕೀ ತಂದಿದ್ದ ಶಮಂತ್ ಅವರನ್ನು ಗದರಿದ್ದ ಉರುಡುಗ, ಅರವಿಂದ್ ವಿಚಾರದಲ್ಲಿ ಮೃದು ಧೋರಣೆ ತಳೆದಿದ್ದರು. ಬಳಿಕ, ಈ ಟಾಸ್ಕ್ನಲ್ಲಿ ಗೆದ್ದ ಅರವಿಂದ್ ಅವರು ನಾಯಕರಾಗಿ ಆಯ್ಕೆಯಾಗಿದ್ದರು. ಈ ಬಗ್ಗೆ ಸುದೀಪ್ ಪ್ರಶ್ನೆ ಎತ್ತಿದರು. ಅದು ಸ್ಪಷ್ಟವಾಗಿ ಹಿತಾಸಕ್ತಿ ಸಂಘರ್ಷವಾಗಿತ್ತು ಎಂದು ತರಾಟೆಗೆ ತೆಗೆದುಕೊಂಡರು. ನಿಮ್ಮ ಹಿತಾಸಕ್ತಿ ಸಂಘರ್ಷದಿಂದ ಬೇರೊಬ್ಬರು ಕ್ಯಾಪ್ಟನ್ ಆಗುವ ಸಾಧ್ಯತೆ ಎಷ್ಟು ಕಡಿಮೆ ಆಯಿತು ಎಂದು ಕೇಳಿದರು. ನಾನು ಎಲ್ಲರಿಗೂ ಒಂದೇ ರೀತಿ ಇರಬೇಕೆಂದುಕೊಂಡಿದ್ದೆ ಹೇಗೋ ತಪ್ಪಾಗಿದೆ ಎಂದು ಹೇಳಿದರು.