ಭಾನುವಾರದ ಎಪಿಸೋಡ್ನಲ್ಲಿ ಎಲಿಮಿನೇಶನ್ ಅಂತಿಮ ಹಂತದಲ್ಲಿ ಅನುಪಮಾ ಗೌಡ ಮತ್ತು ವಿನೋದ್ ಗೊಬ್ಬರಬಾಲ ಬಂದಿದ್ದರು. ಅಂತಿಮವಾಗಿ ಸುದೀಪ್ ತಮ್ಮ ಹೆಸರು ಘೋಷಿಸುತ್ತಿದ್ದಂತೆ ವಿನೋದ್ ನಿಂತಲ್ಲಿಯೇ ಕಣ್ಣೀರು ಹಾಕಿದರು. ಅವಕಾಶ ಕೊಟ್ಟವರಿಗೂ ಧನ್ಯವಾದ. ಆದರೆ, ನಮ್ಮ ಅಮ್ಮನಿಗೆ ಕೊಟ್ಟ ಆಸೆ ಈಡೇರಿಸಲಾಗಲಿಲ್ಲ ಎಂದು ಮರುಗಿದರು. ಗೆದ್ದು ಮನೆ ಕಟ್ಟಿಸುವ ಆಸೆ ನನ್ನದಾಗಿತ್ತು. ಅಮ್ಮನಿಗೆ ಮಾತು ಕೊಟ್ಟಿದ್ದೆ ಎಂದು ವೇದಿಕೆ ಮೇಲೂ ಅಳಲು ಆರಂಭಿಸಿದರು. ಬಳಿಕ, ಕೆಳಗೆ ಓಡಿಬಂದು ಅಲ್ಲಿ ಕುಳಿತಿದ್ದ ಅಮ್ಮನನ್ನು ತಬ್ಬಿ ಗೋಳಾಡಿದರು. ಇದನ್ನು ಗಮನಿಸುತ್ತಿದ್ದ ಸುದೀಪ್ ಮತ್ತು ನೆರೆದಿದ್ದ ಜನರು ಸ್ತಬ್ಧರಾದರು. ಬಳಿಕ, ವಿನೋದ್ ಅವರನ್ನು ಸಂತೈಸಿದ ಸುದೀಪ್, ನೀವು ಹಾಸ್ಯ ಕಲಾವಿದರು. ಅದರಿಂದಲೇ ಇಲ್ಲಿಯವರೆಗೆ ಬಂದಿದ್ದೀರಿ. ಅದನ್ನೇ ಮುಂದುವರಿಸಿಕೊಂಡು ಹೋಗಿ ಮನೆ ಕಟ್ಟುತ್ತೀರಿ ಎಂದು ತಿಳಿ ಹೇಳಿದರು.
ಗದ್ಗದಿತರಾದ ಅರುಣ್, ಶೆಟ್ಟಿ