ಪ್ರಜಾವಾಣಿಯ ಫೇಸ್ಬುಕ್ ಲೈವ್ ಸಂವಾದದಲ್ಲಿ ಪಾಲ್ಗೊಂಡ ಮಂಜು ಪಾವಗಡ ಅವರು, ಮಜಾಭಾರತ ತಂಡದಲ್ಲಿ ನಮ್ಮನ್ನು ಎಲ್ಲರೂ ತುಂಬಾ ಪ್ರೀತಿಸುತ್ತಾರೆ. ತೀರ್ಪುಗಾರರಾದ ರಚಿತಾ ರಾಮ್ ಅವರಿಗೆ ನನ್ನ ಬಗ್ಗೆ ಅತೀವ ಅಕ್ಕರೆ ಇದೆ. ತಮಾಷೆ ಮಾಡುವುದು, ಕಾಲೆಳೆಯುವುದು, ಸ್ಕಿಟ್ ಸರಿ ಇಲ್ಲದಿದ್ದಾಗ ಬುದ್ಧಿ ಹೇಳುತ್ತಾರೆ ಎಂದು ಹೇಳಿದರು. ಗುರುಕಿರಣ್ ಅವರೂ ಸಹ ನಮ್ಮ ತಂಡಕ್ಕೆ ಸಲಹೆ, ಸೂಚನೆಗಳನ್ನು ಕೊಡುತ್ತಾರೆ ಎಂದು ಹೇಳಿಕೊಂಡರು.