ಶಿವಣ್ಣನ ಆಶೀರ್ವಾದ ಬೇಕು: ‘ಬಿಗ್ ಬಾಸ್, ಶಿವಣ್ಣ ನನ್ನ ಫೇವರೇಟ್ ಹೀರೊ. ಫಿನಾಲೆಗೆ ಮುನ್ನ ನನಗೆ ಅವರ ಆಶೀರ್ವಾದ ಬೇಕು. ದಯವಿಟ್ಟು ನನ್ನ ಆಸೆ ಪೂರೈಸಿ. ಅವರ ಎರಡು ಮಾತುಗಳ ಧ್ವನಿ ಕೇಳಿಸಿ’ ಎಂದು ಮನೆಯ ಟಾಪ್ ಸ್ಪರ್ಧಿಗಳಲ್ಲಿ ಒಬ್ಬರಾದ ಮಂಜು ಪಾವಗಡ ಕೇಳಿದ್ದಾರೆ. ಹೀಗಾಗಿ, ಬಿಗ್ ಬಾಸ್ ಮನೆಯ ಸ್ಪರ್ಧಿಯ ಈ ಆಸೆಯನ್ನು ಶಿವಣ್ಣ ಪೂರೈಸುತ್ತಾರಾ? ಎಂಬ ಕುತೂಹಲ ಮನೆ ಮಾಡಿದೆ. ನಿರೂಪಕರಾದ ಸುದೀಪ್ ಇದಕ್ಕಾಗಿ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.