ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಭರಣ್ ಜತೆಗಿನ ಮದುವೆ ಮಾತುಕತೆ: ಬಿಗ್‌ಬಾಸ್ ಸ್ಪರ್ಧಿ ವೈಷ್ಣವಿ ಹೇಳಿದ್ದೇನು?

Last Updated 25 ನವೆಂಬರ್ 2022, 7:50 IST
ಅಕ್ಷರ ಗಾತ್ರ

ಬಿಗ್‌ಬಾಸ್‌ ಸ್ಪರ್ಧಿ ವೈಷ್ಣವಿ ಗೌಡ ಅವರ ವಿವಾಹ ಮುರಿದುಬಿದ್ದಿದೆ. ನವೆಂಬರ್‌ 11ರಂದು ವಿದ್ಯಾಭರಣ್‌ ಎಂಬ ಉದ್ಯಮಿ ಜೊತೆ ವೈಷ್ಣವಿ ಅವರ ಮದುವೆ ಮಾತುಕತೆ ನಡೆದಿತ್ತು. ಇಬ್ಬರೂ ಹಾರ ಹಾಕಿಕೊಂಡಿರುವ ಚಿತ್ರ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಮಾತುಕತೆ ಮುರಿದುಬಿದ್ದಿದೆ. ದಯವಿಟ್ಟು ನಮ್ಮ ಖಾಸಗಿತನಕ್ಕೆ ಗೌರವ ಕೊಡಿ. ಇಂಥ ವಿಚಾರಗಳನ್ನೆಲ್ಲಾ ಎಳೆದಾಡುವುದು ಬೇಡ ಎಂದು ವೈಷ್ಣವಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೈಷ್ಣವಿ ಅವರ ತಂದೆ ರವಿಕುಮಾರ್‌, ‘ಹಿರಿಯರೇ ನಿಶ್ಚಯಿಸಿದ ಮದುವೆ. ಈಗ ಈ ರೀತಿ ಆಗಿದೆ. ಇದಕ್ಕೆ ಯಾರು ಕಾರಣರು ಏನು ಎಂಬುದು ಗೊತ್ತಿಲ್ಲ. ಮಗಳ ನಿರ್ಧಾರವೇ ಅಂತಿಮ. ಸಹಜವಾಗಿ ನಮಗೆಲ್ಲರಿಗೂ ಬೇಸರವಾಗಿದೆ. ಸದ್ಯ ಯಾವುದೇ ನಿರ್ಧಾರ ಮಾಡಿಲ್ಲ. ಮಗಳ ಮನಸ್ಥಿತಿ ಸರಿಹೋದ ಮೇಲೆ ಮುಂದಿನ ವಿಚಾರ ಮಾಡುತ್ತೇವೆ ಎಂದು ಹೇಳಿದರು.

ವಿದ್ಯಾಭರಣ್‌ ಅವರ ಕುರಿತು ಹರಿದಾಡಿದ ಆಡಿಯೋವೊಂದು ಈ ಬೆಳವಣಿಗೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಆದರೆ, ಕುಟುಂಬದವರಾಗಲಿ ವೈಷ್ಣವಿ ಅವರಾಗಲಿ ಈ ವಿಚಾರ ದೃಢಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT