ಕಳೆದ ಬಾರಿಯಂತೆ ಈ ಬಾರಿಯೂ ಗುಳಿಕೆನ್ನೆ ಚೆಲುವೆ ನಟಿ ರಚಿತಾರಾಮ್ ಹಾಗೂ ಸಂಗೀತ ಸರದಾರ ಗುರುಕಿರಣ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಈ ಬಾರಿಯ ಮಜಾಭಾರತಕ್ಕೆ ಹೊಸ ಸೇಪರ್ಡೆ ಎಂದರೆ ನಟ, ಬಿಗ್ಬಾಸ್ ಖ್ಯಾತಿಯ ಹರೀಶ್ ರಾಜ್. ಅವರು ಪ್ರತಿ ಸೀಸನ್ನಲ್ಲೂ ಹೊಸ ಪಾತ್ರವಾಗಿ ಜನರ ಮುಂದೆ ಬಂದು ರಂಜಿಸಲಿದ್ದಾರೆ. ಕಿನ್ನರಿ ಧಾರಾವಾಹಿಯಿಂದ ಖ್ಯಾತಿ ಪಡೆದ ನಟಿ ಭೂಮಿ ಶೆಟ್ಟಿ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಕಷ್ಟಕಾಲದಲ್ಲಿ ನಮಗೆ ಬೇಕಾದದ್ದು ನಗುವೇ. ನೋವನ್ನು ಕಡಿಮೆ ಮಾಡೋದು ಅಳುವಿನಿಂದ ಆಗದು. ನಮ್ಮೆಲ್ಲ ನೋವುಗಳಿಗೂ ನಗುವೇ ದಿವ್ಯ ಔಷಧಿ. ಅಂಥ ನಗುವನ್ನು ಯಾವ ಮಾಸ್ಕ್ ಕೂಡ ಮರೆ ಮಾಡಲಾಗದು. ಇದೇ ನಂಬಿಕೆಯೊಂದಿಗೆ ಮಜಾಭಾರತ ತಂಡ ಸಜ್ಜಾಗಿದೆ. ಮಜಾಭಾರತ ನೋಡಿ ಆನಂದಿಸಿ’ ಎನ್ನುತ್ತಿದೆ ಮಜಾಭಾರತ ತಂಡ.