ಫೆಬ್ರುವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಪರ ಹಾಜರಾಗಲಿದ್ದಾರೆ. ಎಂಎಸ್ ಧೋನಿ ಸೇರಿದಂತೆ ನಾಲ್ವರನ್ನು ಸಿಎಸ್ಕೆ ತಂಡದಲ್ಲಿ ಉಳಿಸಿಕೊಂಡಿದೆ. ರವೀಂದ್ರ ಜಡೇಜಾ ಅವರನ್ನು ₹ 16 ಕೋಟಿಗೆ, ಧೋನಿ ಅವರನ್ನು ₹ 12 ಕೋಟಿಗೆ, ಮೊಯೀನ್ ಅಲಿ ಅವರನ್ನು ₹ 8 ಕೋಟಿಗೆ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ₹ 6 ಕೋಟಿಗೆ ಸಿಎಸ್ಕೆ ಉಳಿಸಿಕೊಂಡಿದೆ.