ಚಂದನಾ ಎಂ. ರಾವ್ ಈ ಧಾರಾವಾಹಿಯಲ್ಲಿ ರಾಣಿಯ ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರ ಸವಾಲಿನದ್ದಾಗಿತ್ತಂತೆ. ಅವರಿಗೆ ಕುರಿಯ ಜೊತೆ ನಟಿಸಬೇಕು ಎಂದಾಗ ಭಯವೂ ಆಗಿತ್ತಂತೆ. ಆದರೆ, ತಂಡ ಬೆಂಬಲವಾಗಿ ನಿಂತಿತು ಎಂದು ಹೇಳಿದರು ಅವರು. ಪ್ರವೀಣ್ ಅಥರ್ವ ಈ ಧಾರಾವಾಹಿಯಲ್ಲಿ ‘ಅರ್ಜುನ’ ಹೆಸರಿನ ನಾಯಕ ಪಾತ್ರದಲ್ಲಿದ್ದಾರೆ. ಸ್ವಾತಿ ನಾಯಕನ ತಾಯಿ ಪಾತ್ರದಲ್ಲಿದ್ದಾರೆ. ಮಾನಸಾ ಕೂಡಾ ಮುಖ್ಯಪಾತ್ರವೊಂದರಲ್ಲಿದ್ದಾರೆ.