ಸೋಮವಾರ, 1 ಡಿಸೆಂಬರ್ 2025
×
ADVERTISEMENT
ಆಳ–ಅಗಲ | ಅಂಜನಾದ್ರಿ: ಹನುಮನ ತವರಲ್ಲಿ ಅಭಿವೃದ್ಧಿಗೆ ಗರ
ಆಳ–ಅಗಲ | ಅಂಜನಾದ್ರಿ: ಹನುಮನ ತವರಲ್ಲಿ ಅಭಿವೃದ್ಧಿಗೆ ಗರ
ಅಂಜನಾದ್ರಿ: ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ತಾಣ; ಮೂಲಸೌಕರ್ಯಗಳು ಗೌಣ
ಫಾಲೋ ಮಾಡಿ
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
Comments
ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟವು ಹನುಮ ಜನಿಸಿದ ಸ್ಥಳ ಎಂದೇ ಪ್ರಸಿದ್ಧವಾಗಿದೆ. ಅಂಜನಾದ್ರಿಯಲ್ಲಿ ಮಂಗಳವಾರ (ಡಿ.2) ಹಾಗೂ ಬುಧವಾರ (ಡಿ.3) ಹನುಮಮಾಲೆ ವಿಸರ್ಜನೆ ನಡೆಯಲಿದೆ. ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತರು ಬೆಟ್ಟದ ಮೇಲಿನ ಆಂಜನೇಯನ ಸನ್ನಿಧಿಯಲ್ಲಿ ಮಾಲೆ ವಿಸರ್ಜನೆ ಮಾಡುತ್ತಾರೆ. ಉತ್ತರ ಭಾರತದಿಂದಲೂ ಅನೇಕ ಭಕ್ತರು ಬೆಟ್ಟಕ್ಕೆ ಬರುತ್ತಾರೆ. ಆದರೆ, ಐತಿಹಾಸಿಕ ಮಹತ್ವ ಇರುವ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಪ್ರಮುಖವಾಗಿರುವ ಅಂಜನಾದ್ರಿಯು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಸೂಕ್ತ ಸೌಕರ್ಯಗಳನ್ನು ಕಲ್ಪಿಸಿದರೆ, ಅಂಜನಾದ್ರಿಯು ಕಲ್ಯಾಣ ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳವಾಗಿ ಅಭಿವೃದ್ಧಿ ಹೊಂದುವ ಎಲ್ಲ ಸಾಧ್ಯತೆಗಳೂ ಇವೆ
ಅಂಜನಾದ್ರಿ ಮೂರ್ತಿ
ಅಂಜನಾದ್ರಿ ಮೂರ್ತಿ
ಹಣ ಇದ್ದರೂ, ಆಗಿಲ್ಲ ಪ್ರಗತಿ:
ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ 2022–23ರ ಬಜೆಟ್‌ನಲ್ಲಿ ₹100 ಕೋಟಿ ಘೋಷಣೆ ಮಾಡಿತ್ತು. ಕಾಂಗ್ರೆಸ್‌ ಸರ್ಕಾರವೂ ಕಳೆದ ವರ್ಷದ ಬಜೆಟ್‌ನಲ್ಲಿ ₹100 ಕೋಟಿ ಘೋಷಣೆ ಮಾಡಿದೆ. 2023ರ ಮಾರ್ಚ್‌ನಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಕಾರ್ಯಗಳಿಗೆ ಅಂಜನಾದ್ರಿಯಲ್ಲಿ ಚಾಲನೆ ಕೊಟ್ಟಿದ್ದರೂ ಪ್ರಸ್ತುತ ₹17.15 ಕೋಟಿ ವೆಚ್ಚದ ಕಾಮಗಾರಿಗಳು ಮಾತ್ರ ನಡೆಯುತ್ತಿದ್ದು, ಅವೂ ಮಂದಗತಿಯಲ್ಲಿ ಸಾಗಿವೆ. ಭಕ್ತರಿಂದ ಸಂಗ್ರಹವಾದ ದೇಣಿಗೆ ಮೊತ್ತವೇ ಪ್ರಸ್ತುತ ₹8.07 ಕೋಟಿ ಇದ್ದರೂ ಭಕ್ತರಿಗೆ ಮೂಲಸೌಲಭ್ಯದ ಕೊರತೆ ಕಾಡುತ್ತಿದೆ.
ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ನೋಟ

ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ನೋಟ

–ಪ್ರಜಾವಾಣಿ ಚಿತ್ರ/ಭರತ್ ಕಂದಕೂರ

ಅಲಂಕೃತ ಅಂಜನಾದ್ರಿ ಮೂರ್ತಿ
ಅಲಂಕೃತ ಅಂಜನಾದ್ರಿ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT