ಗುರುವಾರ, 16 ಅಕ್ಟೋಬರ್ 2025
×
ADVERTISEMENT
ಆಳ ಅಗಲ | ಸುರಂಗ ರಸ್ತೆ: ಜನರಿಗೆ ಆತಂಕ
ಆಳ ಅಗಲ | ಸುರಂಗ ರಸ್ತೆ: ಜನರಿಗೆ ಆತಂಕ
ಫಾಲೋ ಮಾಡಿ
Published 15 ಅಕ್ಟೋಬರ್ 2025, 22:52 IST
Last Updated 15 ಅಕ್ಟೋಬರ್ 2025, 22:52 IST
Comments
ಬೆಂಗಳೂರಿನ ಸಂಚಾರ ದಟ್ಟಣೆ ಉದ್ಯಮಿಗಳು ಮತ್ತು ರಾಜ್ಯ ಸರ್ಕಾರದ ನಡುವೆ ವಾಗ್ವಾದಕ್ಕೆ ಕಾರಣವಾಗಿ ವಿವಾದ ಸೃಷ್ಟಿಸಿರುವಂತೆಯೇ, ಸಂಚಾರ ದಟ್ಟಣೆಗೆ ಪರಿಹಾರವಾಗಿ ಸರ್ಕಾರವು ರೂಪಿಸಿರುವ ಸುರಂಗ ಮಾರ್ಗ ಯೋಜನೆಯೂ ವಿವಾದಕ್ಕೆ ಕಾರಣವಾಗಿದೆ. 16.7 ಕಿ.ಮೀ.ಉದ್ದದ ಉತ್ತರ– ದಕ್ಷಿಣ ಕಾರಿಡಾರ್‌ನ ವಿಸ್ತೃತ ಯೋಜನಾ ವರದಿಯಲ್ಲಿನ (ಡಿಪಿಆರ್) ವಿವರಗಳು ಸಾರ್ವಜನಿಕರು, ಜನಪ್ರತಿನಿಧಿಗಳ ಆತಂಕಕ್ಕೆ ಕಾರಣವಾಗಿದೆ. ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯು ಉದ್ದೇಶಿತ ಯೋಜನೆಯ ರೂಪುರೇಷೆಯಲ್ಲಿ ಅನೇಕ ಲೋಪಗಳಿರುವುದನ್ನು ಬೊಟ್ಟು ಮಾಡಿದೆ. ಮುಖ್ಯವಾಗಿ, ನಗರದ ಜೀವನಾಡಿಯಾದ ಲಾಲ್‌ಬಾಗ್‌ಗೆ ಯೋಜನೆಯಿಂದ ಕಂಟಕವಾಗುವ ಸಾಧ್ಯತೆ ಇದೆ ಎಂದು ಸಮಿತಿ ಹೇಳಿದೆ. ಆದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುರಂಗ ರಸ್ತೆ ಅಗತ್ಯ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT