ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಆರಂಭ ಆಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯಲ್ಲಿ ಯಾವ ಜಾತಿ/ಧರ್ಮದ ಹೆಸರನ್ನು ಹೇಗೆ ಬರೆಸಬೇಕು ಎನ್ನುವುದರ ಬಗ್ಗೆ ಸಮುದಾಯಗಳಲ್ಲಿ ಚರ್ಚೆ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ, ದಲಿತರೂ ಸೇರಿದಂತೆ ಯಾವುದೇ ಜಾತಿಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರೆಲ್ಲರೂ ಕ್ರೈಸ್ತರೇ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ. ದಶಕಗಳಿಂದಲೂ ಚಳವಳಿ, ಚರ್ಚೆ, ಕಾನೂನು ಹೋರಾಟಕ್ಕೆ ಕಾರಣವಾಗಿರುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸಿ.ಎಂ ಹೇಳಿಕೆಯನ್ನು ಹಲವರು ವಿರೋಧಿಸಿದ್ದಾರೆ. ಮತಾಂತರ ಆದರೂ ಸಾಮಾಜಿಕ–ಸ್ಥಿತಿಗತಿ ಬದಲಾಗಿಲ್ಲ. ಹೀಗಾಗಿ ತಮ್ಮನ್ನು ದಲಿತರು ಎಂದೇ ಪರಿಗಣಿಸಬೇಕು ಎನ್ನುವ ದಲಿತ ಕ್ರೈಸ್ತರ ಕೋರಿಕೆ ಬಗ್ಗೆ ಕೇಂದ್ರ ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ ...