ದೀಪಾವಳಿ ಭಾರತದ ಪ್ರಮುಖ ಹಬ್ಬ. ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ಈ ಹಬ್ಬಕ್ಕೆ ಜಾಗತಿಕ ಮನ್ನಣೆ ದೊರಕಿದೆ. ದೀಪಾವಳಿಯನ್ನು ‘ಮಾನವಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದು ಯುನೆಸ್ಕೊ ಗುರುತಿಸಿದೆ. ಹಬ್ಬಕ್ಕೆ ಸಂಬಂಧಿಸಿದ ಆಚರಣೆಗಳನ್ನು ರಕ್ಷಿಸುವ ದಿಸೆಯಲ್ಲಿ ಮತ್ತು ಭವಿಷ್ಯದ ತಲೆಮಾರುಗಳಿಗೆ ಅದನ್ನು ದಾಟಿಸುವ ದೃಷ್ಟಿಯಿಂದ ಈ ಮನ್ನಣೆಯು ಮುಖ್ಯ ಪಾತ್ರ ವಹಿಸಲಿದೆ ಎನ್ನುವ ವಿಶ್ವಾಸ ವ್ಯಕ್ತವಾಗಿದೆ.