ಲೋಕಸಭಾ ಚುನಾವಣೆಯ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ‘ಕಚ್ಚತೀವು’ ದ್ವೀಪದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್ ಬಿಟ್ಟುಕೊಟ್ಟಿದೆ’ ಎಂದು ಮೋದಿ ಅವರು ತಮ್ಮ ವೈಯಕ್ತಿಕ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಮೋದಿ ಅವರ ಈ ಆರೋಪ ಸುಳ್ಳು ಎನ್ನುತ್ತವೆ ಸರ್ಕಾರದ ದಾಖಲೆಗಳು. ಎಲ್ಲಕ್ಕಿಂತ ಮುಖ್ಯವಾಗಿ, ‘ಕಚ್ಚತೀವು ದ್ವೀಪವು ಎಂದಿಗೂ ಭಾರತಕ್ಕೆ ಸೇರಿರಲೇ ಇಲ್ಲ’ ಎಂದು ಮೋದಿ ಅವರ ಸರ್ಕಾರವೇ ಈ ಹಿಂದೆ ಆರ್ಟಿಐ ಪ್ರಶ್ನೆಯೊಂದಕ್ಕೆ ಉತ್ತರ ನೀಡಿತ್ತು. ತಮ್ಮದೇ ಸರ್ಕಾರ ನೀಡಿದ್ದ ಉತ್ತರಕ್ಕೆ ವ್ಯತಿರಿಕ್ತವಾದ ಆರೋಪವನ್ನು ಪ್ರಧಾನಿ ಈಗ ಮಾಡಿದ್ದಾರೆ