<p><strong>ಮೈಸೂರು</strong>: ‘ಗರ್ಭಿಣಿಯಾಗಿದ್ದಾಗ ₹ 3 ಸಾವಿರ, ಹೆರಿಗೆ ಬಳಿಕ ₹ 2 ಸಾವಿರವನ್ನು ನನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಅಗತ್ಯ ಆಹಾರ ಖರೀದಿಸಿ ಹಣ ಸದ್ಬಳಕೆ ಮಾಡಿಕೊಂಡೆ....’</p>.<p>– ‘ಮಾತೃವಂದನಾ’ ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರಾದ ತಾಲ್ಲೂಕಿನ ಹಿನಕಲ್ನ ರಮ್ಯಾ ಅವರ ಮಾತಿದು.</p>.<p>‘ಹಣ್ಣು, ಸೊಪ್ಪು ಸೇರಿ ಪೌಷ್ಟಿಕ ಆಹಾರ ಖರೀದಿಸಿದೆ. ಹೆರಿಗೆಯ ಬಳಿಕ ಬಂದ ಹಣದಲ್ಲಿ ಶಿಶುವಿಗೆ ಪೂರಕ ಆಹಾರ, ಡೈಪರ್ ಖರೀದಿಸಿದೆ. ಪತಿ ಹಾಗೂ ತವರು ಮನೆಯವರನ್ನು ನೆಚ್ಚಿಕೊಳ್ಳ ಬೇಕಾದ ಅವಶ್ಯಕತೆಯೇ ಬರಲಿಲ್ಲ’ ಎಂದರು.</p>.<p>ತಾಯಂದಿರಲ್ಲಿರುವ ಅಪೌಷ್ಟಿಕತೆ ಹೋಗ ಲಾಡಿಸಲು ಆರಂಭಿಸಿರುವ ‘ಮಾತೃವಂದನಾ’ ಯೋಜನೆಯು ಜಿಲ್ಲೆಯಲ್ಲಿ ಇಂಥ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ಆರಂಭದಿಂದಲೇ ಅವರ ಆರೋಗ್ಯದ ಮೇಲೆ ನಿಗಾ ವಹಿಸಲು ಸಾಧ್ಯವಾಗಿದೆ.</p>.<p>‘ಫಲಾನುಭವಿಗಳ ನೋಂದಣಿ ವಿಚಾರದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಐದನೇ ಸ್ಥಾನದಲ್ಲಿದೆ. 2017 ರಿಂದ 2021ರ ಡಿಸೆಂಬರ್ವರೆಗೆ ಒಟ್ಟು 70,880 ಫಲಾನುಭವಿಗಳನ್ನು ಗುರುತಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಬಸವರಾಜು ತಿಳಿಸಿದರು.</p>.<p>ಮಾತೃವಂದನಾ, ಪೋಷಣ್ ಅಭಿಯಾನ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣವೂ ಇಳಿಮುಖವಾಗಿದೆ.</p>.<p>ಆರೋಗ್ಯ ಇಲಾಖೆ ಪ್ರಕಾರ, ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ (ಜನಿಸುವ ಸಾವಿರ ಮಕ್ಕಳಿಗೆ) 8.2 ರಷ್ಟಿದೆ. ದೇಶ ಮತ್ತು ರಾಜ್ಯದ ಒಟ್ಟಾರೆ ಸರಾಸರಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಸಾವಿರ ಮಕ್ಕಳಿಗೆ ಸರಾಸರಿ 23 ರಷ್ಟಿದೆ.</p>.<p>2021ರ ಏಪ್ರಿಲ್ನಿಂದ 2022ರ ಜನವರಿ ವರೆಗೆ ಒಟ್ಟು 25,976 ಮಕ್ಕಳು ಜನಿಸಿದ್ದಾರೆ. 212 ಶಿಶುಗಳು ಸಾವಿಗೀಡಾಗಿವೆ.</p>.<p>ತಾಯಿ ಮರಣ ಪ್ರಮಾಣವೂ ತಗ್ಗಿದೆ. ಕಳೆದ 10 ತಿಂಗಳಲ್ಲಿ ತಾಯಿ ಮರಣ ಪ್ರಮಾಣ (1 ಲಕ್ಷಕ್ಕೆ) 63 ರಷ್ಟಿದೆ.</p>.<p>‘ಮಾತೃವಂದನಾ ಯೋಜನೆಯು ಬಡ, ಮಧ್ಯಮ ವರ್ಗದ ಕುಟುಂಬದವರಿಗೆ ಹೆಚ್ಚಿನ ನೆರವು ನೀಡಿದೆ. ಈಗ ₹5 ಸಾವಿರ ನೀಡುತ್ತಿದ್ದು, ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕು’ ಎಂಬುದು ಇನ್ನೊಬ್ಬ ಫಲಾನುಭವಿ ರಾಧಿಕಾ ಅವರ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಗರ್ಭಿಣಿಯಾಗಿದ್ದಾಗ ₹ 3 ಸಾವಿರ, ಹೆರಿಗೆ ಬಳಿಕ ₹ 2 ಸಾವಿರವನ್ನು ನನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಅಗತ್ಯ ಆಹಾರ ಖರೀದಿಸಿ ಹಣ ಸದ್ಬಳಕೆ ಮಾಡಿಕೊಂಡೆ....’</p>.<p>– ‘ಮಾತೃವಂದನಾ’ ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರಾದ ತಾಲ್ಲೂಕಿನ ಹಿನಕಲ್ನ ರಮ್ಯಾ ಅವರ ಮಾತಿದು.</p>.<p>‘ಹಣ್ಣು, ಸೊಪ್ಪು ಸೇರಿ ಪೌಷ್ಟಿಕ ಆಹಾರ ಖರೀದಿಸಿದೆ. ಹೆರಿಗೆಯ ಬಳಿಕ ಬಂದ ಹಣದಲ್ಲಿ ಶಿಶುವಿಗೆ ಪೂರಕ ಆಹಾರ, ಡೈಪರ್ ಖರೀದಿಸಿದೆ. ಪತಿ ಹಾಗೂ ತವರು ಮನೆಯವರನ್ನು ನೆಚ್ಚಿಕೊಳ್ಳ ಬೇಕಾದ ಅವಶ್ಯಕತೆಯೇ ಬರಲಿಲ್ಲ’ ಎಂದರು.</p>.<p>ತಾಯಂದಿರಲ್ಲಿರುವ ಅಪೌಷ್ಟಿಕತೆ ಹೋಗ ಲಾಡಿಸಲು ಆರಂಭಿಸಿರುವ ‘ಮಾತೃವಂದನಾ’ ಯೋಜನೆಯು ಜಿಲ್ಲೆಯಲ್ಲಿ ಇಂಥ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ಆರಂಭದಿಂದಲೇ ಅವರ ಆರೋಗ್ಯದ ಮೇಲೆ ನಿಗಾ ವಹಿಸಲು ಸಾಧ್ಯವಾಗಿದೆ.</p>.<p>‘ಫಲಾನುಭವಿಗಳ ನೋಂದಣಿ ವಿಚಾರದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಐದನೇ ಸ್ಥಾನದಲ್ಲಿದೆ. 2017 ರಿಂದ 2021ರ ಡಿಸೆಂಬರ್ವರೆಗೆ ಒಟ್ಟು 70,880 ಫಲಾನುಭವಿಗಳನ್ನು ಗುರುತಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಬಸವರಾಜು ತಿಳಿಸಿದರು.</p>.<p>ಮಾತೃವಂದನಾ, ಪೋಷಣ್ ಅಭಿಯಾನ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣವೂ ಇಳಿಮುಖವಾಗಿದೆ.</p>.<p>ಆರೋಗ್ಯ ಇಲಾಖೆ ಪ್ರಕಾರ, ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ (ಜನಿಸುವ ಸಾವಿರ ಮಕ್ಕಳಿಗೆ) 8.2 ರಷ್ಟಿದೆ. ದೇಶ ಮತ್ತು ರಾಜ್ಯದ ಒಟ್ಟಾರೆ ಸರಾಸರಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಸಾವಿರ ಮಕ್ಕಳಿಗೆ ಸರಾಸರಿ 23 ರಷ್ಟಿದೆ.</p>.<p>2021ರ ಏಪ್ರಿಲ್ನಿಂದ 2022ರ ಜನವರಿ ವರೆಗೆ ಒಟ್ಟು 25,976 ಮಕ್ಕಳು ಜನಿಸಿದ್ದಾರೆ. 212 ಶಿಶುಗಳು ಸಾವಿಗೀಡಾಗಿವೆ.</p>.<p>ತಾಯಿ ಮರಣ ಪ್ರಮಾಣವೂ ತಗ್ಗಿದೆ. ಕಳೆದ 10 ತಿಂಗಳಲ್ಲಿ ತಾಯಿ ಮರಣ ಪ್ರಮಾಣ (1 ಲಕ್ಷಕ್ಕೆ) 63 ರಷ್ಟಿದೆ.</p>.<p>‘ಮಾತೃವಂದನಾ ಯೋಜನೆಯು ಬಡ, ಮಧ್ಯಮ ವರ್ಗದ ಕುಟುಂಬದವರಿಗೆ ಹೆಚ್ಚಿನ ನೆರವು ನೀಡಿದೆ. ಈಗ ₹5 ಸಾವಿರ ನೀಡುತ್ತಿದ್ದು, ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕು’ ಎಂಬುದು ಇನ್ನೊಬ್ಬ ಫಲಾನುಭವಿ ರಾಧಿಕಾ ಅವರ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>