ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, ಹೆಚ್ಚುವರಿ ಎಸ್ಪಿ ವಿಕಾಸ್ಚಂದ್ರ ತ್ರಿಪಾಠಿ ಅವರು 2018ರಲ್ಲಿ ಟ್ವಿಟರ್ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದರು ಎಂದು ತಿಳಿದುಬಂದಿದೆ. ನವರಾತ್ರಿ ಅಂಗವಾಗಿ ಲಖನೌದ ಠಾಣಾ ಚೌಕ್ ಪೊಲೀಸ್ ಠಾಣೆ ಸಿಬ್ಬಂದಿಗೆ ವಿಶೇಷ ಫಲಾಹಾರ ಕೂಟ ಆಯೋಜಿಸಿದ್ದಾಗಿ ಅವರು ಉಲ್ಲೇಖಿಸಿದ್ದರು. ಹೀಗಾಗಿ ಯೋಗಿ ಸರ್ಕಾರವು ಮೊಟ್ಟಮೊದಲ ಬಾರಿಗೆ ರಾಜ್ಯದ ಪೊಲೀಸರಿಗೆ ಫಲಾಹಾರ ಕೂಟ ಆಯೋಜಿಸಿದೆ ಎಂಬುದು ತಪ್ಪು ಮಾಹಿತಿ ಎಂದು ವೆಬ್ಸೈಟ್ ತಿಳಿಸಿದೆ.