‘ಒಂದೆಡೆ ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡು ಲಕ್ಷಾಂತರ ಕಾರ್ಮಿಕರು ಉಪವಾಸದಿಂದ ನರಳುತ್ತಿದ್ದಾರೆ. ಇನ್ನೊಂದೆಡೆ 2020ರ ಜನವರಿ– ಮೇ ತಿಂಗಳ ಅವಧಿಯಲ್ಲಿ ಸರ್ಕಾರವು 65 ಲಕ್ಷ ಟನ್ ಆಹಾರ ಧಾನ್ಯಗಳನ್ನು ನಾಶಪಡಿಸಿದೆ. ಉಪವಾಸದಿಂದ ನರಳುತ್ತಿದ್ದವರಿಗೆ ಆ ಧಾನ್ಯವನ್ನು ಹಂಚಿದ್ದರೆ ಆಗುತ್ತಿರಲಿಲ್ಲವೇ’ ಎಂದು ಮಾಧ್ಯಮ ಸಂಸ್ಥೆಯೊಂದು ಪ್ರಕಟಿಸಿದ್ದ ಲೇಖನದ ಲಿಂಕ್ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದೆ. ಭಾರತೀಯ ಆಹಾರ ನಿಗಮದ ವಿರುದ್ಧ ಸಾರ್ವಜನಿಕರ ಆಕ್ರೋಶ ತಿರುಗಲೂ ಈ ವರದಿ ಕಾರಣವಾಗಿದೆ.