ಸೆಪ್ಟೆಂಬರ್ 27ರಂದು ಸಂಯುಕ್ತ ಕಿಸಾನ್ ಮೋರ್ಚಾವು ಭಾರತ್ ಬಂದ್ ನಡೆಸಿತು. ಬಂದ್ಗೆ ವಿರೋಧ ವ್ಯಕ್ತಪಡಿಸಿರುವ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ನಗರದಲ್ಲಿ ಬಂದ್ ನಡೆದಿಲ್ಲ ಎಂದು ಬಿಂಬಿಸಲು ಜನನಿಬಿಡ ರಸ್ತೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು, ದೆಹಲಿ, ಸೂರತ್, ಕೊಹಿಮಾ.. ಹೀಗೆ ಹಲವು ನಗರಗಳ ಜನ ಈ ಯತ್ನ ಮಾಡಿದ್ದಾರೆ. ಆದರೆ ಎಲ್ಲರೂ ಒಂದೇ ಚಿತ್ರವನ್ನು ಬಳಸಿರುವುದು ವಿಚಿತ್ರ. ಬಂದ್ ಪರವಾಗಿರುವವರು ಇದನ್ನು ಗೇಲಿ ಮಾಡಿದ್ದಾರೆ. ‘ಒಂದು ದೇಶ, ಒಂದು ನಗರ’ ಕಲ್ಪನೆ ಸಾಕಾರವಾಗಿದೆ ಎಂದು ಚುಚ್ಚಿದ್ದಾರೆ.