ರಾಜೀವ್ ಗಾಂಧಿ ಅವರು ರಾಜ್ಘಾಟ್ಗೆ ತೆರಳಿದ್ದ ವೇಳೆ, ರಾಜ್ಘಾಟ್ನ ಗೋಡೆಯೊಂದರ ಹಿಂದೆ ಅಡಗಿದ್ದ ವ್ಯಕ್ತಿ ರಾಜೀವ್ ಅವರತ್ತ ಗುಂಡಿನ ದಾಳಿ ನಡೆಸಿದ್ದ. ಎಸ್ಪಿಜಿ ಸಿಬ್ಬಂದಿ ಆತನನ್ನು ವಶಕ್ಕೆ ತೆಗೆದುಕೊಂಡರು. ಆ ವ್ಯಕ್ತಿಯನ್ನು ಕೊಂದಿಲ್ಲ. ಈ ವೇಳೆ ಯಾರೂ ಮೃತಪಟ್ಟಿರಲಿಲ್ಲ. ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ರಾಜೀವ್ ಗಾಂಧಿ ಅವರನ್ನು ಹತ್ಯೆಗೈಯುವ ಉದ್ದೇಶದಿಂದ ಆತ ದಾಳಿ ನಡೆಸಿದ್ದ. ಆತನ ಹೆಸರು ಕರಮ್ಜಿತ್ ಸಿಂಗ್ ಎಂದು ವಿಚಾರಣೆ ಬಳಿಕ ಎಸ್ಪಿಜಿ ಹೇಳಿತ್ತು. ಈ ಕುರಿತು ಇಂಡಿಯಾ ಟುಡೆ ಸೇರಿ ಅಂದಿನ ಹಲವು ಪತ್ರಿಕೆಗಳು ವರದಿ ಮಾಡಿದ್ದವು ಎಂದು ಆಲ್ಟ್ನ್ಯೂಸ್ ಹೇಳಿದೆ.