ವೈರಲ್ ಆಗಿರುವ ವಿಡಿಯೊ ತಿರುಚಲಾಗಿರುವ ವಿಡಿಯೊ ಎಂದು ದಿ ಲಾಜಿಕಲ್ ಇಂಡಿಯನ್ ವೇದಿಕೆ ವರದಿ ಮಾಡಿದೆ. ಈ ವಿಡಿಯೊ 2022ರ ಫೆ. 16ರಂದು ನ್ಯೂಸ್ 18 ಹಿಂದಿ ಸೇರಿ ಹಲವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದೆ. ಔರೈಯಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದ ಅಖಿಲೇಶ್ ಅವರು, ‘ಯಾರು ಕಾನೂನನ್ನು ಕೈಗೆತ್ತಿಕೊಳ್ಳಲು ಬಯಸುತ್ತೀರಿ, ಆದರೆ ಕಾನೂನು ಪಾಲಿಸುವುದಿಲ್ಲ ಅಂಥವರು ಎಸ್ಪಿಗೆ ಮತ ನೀಡಬೇಡಿ. ಯಾರು ಬಡವರಿಗೆ ಅನ್ಯಾಯ ಮಾಡಲು ಬಯಸುತ್ತೀರಿ ಅಂಥವರು ಎಸ್ಪಿಗೆ ಮತ ನೀಡಬೇಡಿ’ ಎಂದಿದ್ದರು. ಇದೇ ರೀತಿಯ ಹೇಳಿಕೆಯನ್ನು ಅವರು ಫೆ.12 ರಂದು ಬರೇಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡಾ ನೀಡಿದ್ದರು.