<p>ಕೊರೊನಾ ಸೋಂಕು 400 ವರ್ಷ ಮೊದಲಿನಿಂದಲೂ ಇತ್ತು. ‘ಖಂಡಗುತ್ತಿಗೆ ಜ್ವರ’ ಎಂಬ ಹೆಸರಿನ ಕಾಯಿಲೆಯಾಗಿ ಇದನ್ನು ಗುರುತಿಸುತ್ತಿದ್ದರು ಎಂಬುದು ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ದಾಖಲಾಗಿದೆ.</p>.<p>ಜ್ವರ, ನೆಗಡಿ, ಕೆಮ್ಮು ಲಕ್ಷಣಗಳನ್ನೊಳಗೊಂಡಿರುವ ಈ ಕಾಯಿಲೆಗೆ ನಮ್ಮ ಸುತ್ತಮುತ್ತಲು ಸಿಗುವ ಔಷಧೀಯ ಸಸ್ಯಗಳನ್ನು ಬಳಸಿ ಔಷಧ ಸಿದ್ಧಪಡಿಸಿಕೊಳ್ಳಬಹುದಾಗಿದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಇವು ಅತ್ಯಂತ ಸಹಕಾರಿ ಮತ್ತು ಅಷ್ಟೇ ಪರಿಣಾಮಕಾರಿ ಎಂಬುದು ಅನೇಕರ ಅನುಭವದಿಂದ ದೃಢಪಟ್ಟಿದೆ.</p>.<p>ಪಾರಿಜಾತ ಸಸ್ಯದ ಎಲೆ,ಅಮೃತ ಬಳ್ಳಿ, ಕಟುಕಿ ಇವುಗಳನ್ನು ಬಳಸಿ ಸಿದ್ಧಪಡಿಸಿಕೊಳ್ಳುವ ಔಷಧ ಆರೋಗ್ಯ ರಕ್ಷಣೆಗೆ ಸಹಕಾರಿ. ಈ ಔಷಧಗಳ ತಯಾರಿಕೆ, ಬಳಕೆ ಕುರಿತು ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ವಿಸ್ತಾರ ಮಾಹಿತಿ ಇದೆ. </p>.<p>ಈ ಹಿಂದೆ ಡೆಂಗಿ ಜ್ವರ ಬಂದಾಗ ಔಷಧ ಇಲ್ಲದೇ ಪರದಾಡುವ ಸಂದರ್ಭದಲ್ಲಿ ಪಾರಂಪರಿಕ ವೈದ್ಯರ ಕೊಡುಗೆಯಾದ ಪಪ್ಪಾಯ ಎಲೆಯ ರಸದಿಂದ ಡೆಂಗಿ ಗುಣಮುಖಪಡಿಸಲು ಸಾಧ್ಯವಾದ ಉದಾಹರಣೆ ಕಣ್ಣೆದುರು ಇದೆ. ಪಪ್ಪಾಯ ಎಲೆಗಳಿಂದ ಸಿದ್ಧಪಡಿಸಿದ ಮಾತ್ರೆ, ಔಷಧಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.</p>.<p>ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಪಾರಂಪರಿಕ ವೈದ್ಯರನ್ನು ಸರ್ಕಾರ ಗಣನೆಗೆ ಪಡೆದರೆ ಮುಳುಗುವ ವ್ಯಕ್ತಿಗೆ ಹುಲ್ಲುಕಡ್ಡಿ ಆಸರೆಯಾದಂತೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.</p>.<p>ಉಸಿರಾಟದ ಸಮಸ್ಯೆ ಎದುರಾದಾಗ ಹಿಂದಿನ ಕಾಲದಲ್ಲಿ ಕೆಲವು ಗಿಡಮೂಲಿಕೆಗಳ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆ ದೂರವಾಗುತ್ತಿತ್ತು ಎಂಬ ನಂಬಿಕೆ ಇದೆ. ಅದನ್ನು ಈಗಲೂ ಕೆಲ ಪಾರಂಪರಿಕ ವೈದ್ಯರು ಮುಂದುವರೆಸಿದ್ದು ಚಿಕಿತ್ಸೆ ನೀಡುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಈ ಎಲ್ಲಾ ಅನುಭವವನ್ನು ಬಳಸಿ ಔಷಧ ನೀಡಿ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಪಾರಂಪರಿಕ ವೈದ್ಯ ಸಮೂಹ ಶ್ರಮಿಸುತ್ತಿದೆ.</p>.<p><strong>–ವಿಶ್ವನಾಥ ಹೆಗಡೆ,<span class="Designate">ಪಾರಂಪರಿಕ ವೈದ್ಯ ಶಿರಸಿ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರೊನಾ ಸೋಂಕು 400 ವರ್ಷ ಮೊದಲಿನಿಂದಲೂ ಇತ್ತು. ‘ಖಂಡಗುತ್ತಿಗೆ ಜ್ವರ’ ಎಂಬ ಹೆಸರಿನ ಕಾಯಿಲೆಯಾಗಿ ಇದನ್ನು ಗುರುತಿಸುತ್ತಿದ್ದರು ಎಂಬುದು ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ದಾಖಲಾಗಿದೆ.</p>.<p>ಜ್ವರ, ನೆಗಡಿ, ಕೆಮ್ಮು ಲಕ್ಷಣಗಳನ್ನೊಳಗೊಂಡಿರುವ ಈ ಕಾಯಿಲೆಗೆ ನಮ್ಮ ಸುತ್ತಮುತ್ತಲು ಸಿಗುವ ಔಷಧೀಯ ಸಸ್ಯಗಳನ್ನು ಬಳಸಿ ಔಷಧ ಸಿದ್ಧಪಡಿಸಿಕೊಳ್ಳಬಹುದಾಗಿದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಇವು ಅತ್ಯಂತ ಸಹಕಾರಿ ಮತ್ತು ಅಷ್ಟೇ ಪರಿಣಾಮಕಾರಿ ಎಂಬುದು ಅನೇಕರ ಅನುಭವದಿಂದ ದೃಢಪಟ್ಟಿದೆ.</p>.<p>ಪಾರಿಜಾತ ಸಸ್ಯದ ಎಲೆ,ಅಮೃತ ಬಳ್ಳಿ, ಕಟುಕಿ ಇವುಗಳನ್ನು ಬಳಸಿ ಸಿದ್ಧಪಡಿಸಿಕೊಳ್ಳುವ ಔಷಧ ಆರೋಗ್ಯ ರಕ್ಷಣೆಗೆ ಸಹಕಾರಿ. ಈ ಔಷಧಗಳ ತಯಾರಿಕೆ, ಬಳಕೆ ಕುರಿತು ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ವಿಸ್ತಾರ ಮಾಹಿತಿ ಇದೆ. </p>.<p>ಈ ಹಿಂದೆ ಡೆಂಗಿ ಜ್ವರ ಬಂದಾಗ ಔಷಧ ಇಲ್ಲದೇ ಪರದಾಡುವ ಸಂದರ್ಭದಲ್ಲಿ ಪಾರಂಪರಿಕ ವೈದ್ಯರ ಕೊಡುಗೆಯಾದ ಪಪ್ಪಾಯ ಎಲೆಯ ರಸದಿಂದ ಡೆಂಗಿ ಗುಣಮುಖಪಡಿಸಲು ಸಾಧ್ಯವಾದ ಉದಾಹರಣೆ ಕಣ್ಣೆದುರು ಇದೆ. ಪಪ್ಪಾಯ ಎಲೆಗಳಿಂದ ಸಿದ್ಧಪಡಿಸಿದ ಮಾತ್ರೆ, ಔಷಧಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.</p>.<p>ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಪಾರಂಪರಿಕ ವೈದ್ಯರನ್ನು ಸರ್ಕಾರ ಗಣನೆಗೆ ಪಡೆದರೆ ಮುಳುಗುವ ವ್ಯಕ್ತಿಗೆ ಹುಲ್ಲುಕಡ್ಡಿ ಆಸರೆಯಾದಂತೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.</p>.<p>ಉಸಿರಾಟದ ಸಮಸ್ಯೆ ಎದುರಾದಾಗ ಹಿಂದಿನ ಕಾಲದಲ್ಲಿ ಕೆಲವು ಗಿಡಮೂಲಿಕೆಗಳ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆ ದೂರವಾಗುತ್ತಿತ್ತು ಎಂಬ ನಂಬಿಕೆ ಇದೆ. ಅದನ್ನು ಈಗಲೂ ಕೆಲ ಪಾರಂಪರಿಕ ವೈದ್ಯರು ಮುಂದುವರೆಸಿದ್ದು ಚಿಕಿತ್ಸೆ ನೀಡುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಈ ಎಲ್ಲಾ ಅನುಭವವನ್ನು ಬಳಸಿ ಔಷಧ ನೀಡಿ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಪಾರಂಪರಿಕ ವೈದ್ಯ ಸಮೂಹ ಶ್ರಮಿಸುತ್ತಿದೆ.</p>.<p><strong>–ವಿಶ್ವನಾಥ ಹೆಗಡೆ,<span class="Designate">ಪಾರಂಪರಿಕ ವೈದ್ಯ ಶಿರಸಿ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>