<p>ಮಧುಮೇಹದಿಂದಾಗಿ ಪ್ರಪಂಚದಾದ್ಯಂತ ದೇಹದ ಅಂಗವನ್ನು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಕಾಲನ್ನೇ ಕಳೆದುಕೊಳ್ಳುತ್ತಾರೆ. ಕಾಲಿನಲ್ಲಿ ಉಂಟಾಗುವ ಹುಣ್ಣಿನಿಂದಾಗಿ ಈ ಕ್ರಮಕೈಗೊಳ್ಳಲಾಗುತ್ತದೆ. ಕಾಲಿಗೆ ಹುಣ್ಣಾಗದಂತೆ ಕಾಯ್ದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಾಲುಗಳ ಸ್ವಾಸ್ಥ್ಯವನ್ನು ಕಾಪಾಡಲು ಮತ್ತು ರಾಷ್ಟ್ರೀಯ ರಕ್ತನಾಳ ರೋಗ ಜಾಗೃತಿ ದಿನದ ನೆನಪಿಗಾಗಿ ಸಿಎಂಐ ಆಸ್ಪತ್ರೆಯು ಡಯಾಬಿಟಿಕ್ ಫೂಟ್ಕೇರ್ ಕ್ಲಿನಿಕ್ (ಡಿಎಫ್ಸಿ) ಅನ್ನು ಉದ್ಘಾಟಿಸಿದೆ.</p>.<p>'ಭಾರತದಲ್ಲಿ ಮಧುಮೇಹದಿಂದ ಇಅಂಗಚ್ಛೇದನಗಳಿಗೆ ಕಾರಣವಾಗುತ್ತಿದೆ. ಡಯಾಬಿಟಿಕ್ ಪಾದದ ಹುಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ಡಯಾಬಿಟಿಕ್ ಫೂಟ್ಕೇರ್ ಕ್ಲಿನಿಕ್ ಮಹತ್ವದ ಬೆಳವಣಿಗೆಯಾಗಿದೆ. ಸುಧಾರಿತ ತಂತ್ರಜ್ಞಾನವನ್ನು ತಜ್ಞರ ಮೇಲ್ವಿಚಾರಣೆಯೊಂದಿಗೆ ಮಧುಮೇಹಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ಮಧುಮೇಹ–ಸಂಬಂಧಿತ ಅಂಗಚ್ಛೇದನ- ಮುಕ್ತ ಭವಿಷ್ಯ ರೂಪಿಸುವುದು ನಮ್ಮ ಗುರಿಯಾಗಿದೆ’ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ರಕ್ತನಾಳ ಮತ್ತು ಎಂಡೋವಾಸ್ಕುಲರ್ ಶಸ್ತ್ರಚಿಕಿತ್ಸೆಯ ಪ್ರಮುಖ ಸಲಹಾತಜ್ಞ ಡಾ. ಕೃಷ್ಣ ಚೈತನ್ಯ ಹೇಳಿದ್ದಾರೆ.</p>.<p>ಮಧುಮೇಹ ಪೀಡಿತ ಪಾದದ ಆರೈಕೆ ಮಾಡುವ ಸಾಂಪ್ರದಾಯಿಕ ವಿಧಾನಗಳಲ್ಲಿ ಹಲವಾರು ಇತಿಮಿತಿಗಳಿವೆ. ಇದರಿಂದ ಸಾಮಾನ್ಯವಾಗಿ ಅತ್ಯುತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಕೃತಕ ಬುದ್ಧಿಮತ್ತೆ ಮತ್ತು 3ಡಿ ಸಿಎಡಿ ಅನ್ನು ಸದುಪಯೋಗಪಡಿಸಿ, ಅಂಗಚ್ಛೇದನದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಹಾಗೂ ರೋಗಿ-ಕೇಂದ್ರಿತ ಪರಿಹಾರವನ್ನು ನೀಡುವ ಮೂಲಕ ಈ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುವ ಗುರಿ ಈ ಕ್ಲಿನಿಕ್ ಹೊಂದಿದೆ.</p>.<p>ರೋಗಿಗಳ ಪಾದಗಳನ್ನು ನಿಖರವಾಗಿ ಸ್ಕ್ಯಾನ್ ಮಾಡುವ ಹಾಗೂ ಎಐ ಲೆಕ್ಕಪದ್ಧತಿಯಲ್ಲಿ ಮಾಹಿತಿಯನ್ನು ವಿಶ್ಲೇಷಿಸಿ, ಕ್ಲಿನಿಕ್ ಅಗತ್ಯಕ್ಕೆ ಅನುಸಾರವಾಗಿ ಪಾದರಕ್ಷೆಗಳನ್ನು ರಚಿಸುತ್ತದೆ. ಅದು ದುರ್ಬಲ ಪ್ರದೇಶಗಳಿಗೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ, ಹುಣ್ಣಾಗುವುದನ್ನು ತಡೆಯುತ್ತದೆ. ಬೇಗ ಗುಣವಾಗಲು ಕಾರಣವಾಗುತ್ತದೆ. ಈ ವಿಧಾನ ಅಂಗಚ್ಛೇದನದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. </p>.<p>ಗಾಯದ ನಿರ್ವಹಣೆ, ರಕ್ತನಾಳದ ಮೌಲ್ಯಮಾಪನ ಮತ್ತು ರೋಗಿಗಳಿಗೆ ಶಿಕ್ಷಣ ಸೇರಿದಂತೆ ಸಮಗ್ರ ಮಧುಮೇಹ ಪೀಡಿತ ಪಾದದ ಆರೈಕೆ ಸೇವೆಗಳನ್ನೂ ನೀಡುತ್ತದೆ. </p>.<p>ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಆಸ್ಟರ್ ಡಿಎಂ ಹೆಲ್ತ್ಕೇರ್ ಇಂಡಿಯಾದ ಸಿಇಒ ಡಾ. ನಿತೀಶ್ ಶೆಟ್ಟಿ, "ಡಯಾಬಿಟಿಕ್ ಫೂಟ್ಕೇರ್ ಕ್ಲಿನಿಕ್ ಮಹತ್ವದ ಮೈಲಿಗಲ್ಲಾಗಿದೆ. ಮಧುಮೇಹ ಪೀಡಿತ ಕಾಲು ಸಮಸ್ಯೆಯ ನಿರ್ವಹಣೆಗೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತಿದ್ದೇವೆ ಮತ್ತು ಭಾರತದಲ್ಲಿ ರೋಗದ ವ್ಯಾಪಕ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ಷೇತ್ರದ ಮೇಲೆ ನಮ್ಮ ಕಾರ್ಯತಂತ್ರದಲ್ಲಿ ಹೆಚ್ಚಿನ ಗಮನಹರಿಸಿದ್ದೇವೆ. ಈ ಕ್ಲಿನಿಕ್ ಮಧುಮೇಹ ಪೀಡಿತ ಕಾಲುಗಳ ಆರೈಕೆಯಲ್ಲಿ ನಮ್ಮ ಆರೋಗ್ಯ ರಕ್ಷಣೆಯ ಗುಣಮಟ್ಟ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ" ಎಂದು ಹೇಳಿದರು.</p>.<p>’ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ನಮ್ಮದು. ಮಧುಮೇಹ ನಮ್ಮ ಓಡಾಟ ಅಥವಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಸುರಕ್ಷಿತ ಮತ್ತು ಸುಖಕರ ಭವಿಷ್ಯವನ್ನು ಸೃಷ್ಟಿಸುವುದು ಇದರ ಉದ್ದೇಶ’ ಎಂದು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳ ಸಿಇಒ ಎಸ್.ರಮೇಶ್ ಕುಮಾರ್ ಹೇಳಿದರು.</p>.<p>ಕೃತಕ ಬುದ್ಧಿಮತ್ತೆ(ಎಐ)ಯಂತಹ ಅತ್ಯಾಧುನಿಕ ಸಾಧನಗಳನ್ನು, ಸಹಾನುಭೂತಿಯ ಆರೈಕೆಯೊಂದಿಗೆ ಸಂಯೋಜಿಸುತ್ತದೆ. ನೈತಿಕತೆಯೊಂದಿಗೆ ವೈಯಕ್ತಿಕ ಪರಿಹಾರಗಳನ್ನು ಕಂಡುಕೊಂಡು ಭವಿಷ್ಯವನ್ನು ರೂಪಿಸಲಾಗುತ್ತಿದೆ. ಪ್ರತಿ ಹೊಸತರಲ್ಲಿ ನಂಬಿಕೆ, ರೋಗಿಗಳಿಗೆ ಮೊದಲು ಸೇವೆ ಸಲ್ಲಿಸಲು ಸಾಧ್ಯವಾಗುವ ಪ್ರಗತಿಯಲ್ಲಿ ಭರವಸೆ ಮೂಡಿಸುವ ಉದ್ದೇಶವನ್ನು ಆಸ್ಟರ್ ಸಿಎಂಐ ಆಸ್ಪತ್ರೆ ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಧುಮೇಹದಿಂದಾಗಿ ಪ್ರಪಂಚದಾದ್ಯಂತ ದೇಹದ ಅಂಗವನ್ನು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಕಾಲನ್ನೇ ಕಳೆದುಕೊಳ್ಳುತ್ತಾರೆ. ಕಾಲಿನಲ್ಲಿ ಉಂಟಾಗುವ ಹುಣ್ಣಿನಿಂದಾಗಿ ಈ ಕ್ರಮಕೈಗೊಳ್ಳಲಾಗುತ್ತದೆ. ಕಾಲಿಗೆ ಹುಣ್ಣಾಗದಂತೆ ಕಾಯ್ದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಾಲುಗಳ ಸ್ವಾಸ್ಥ್ಯವನ್ನು ಕಾಪಾಡಲು ಮತ್ತು ರಾಷ್ಟ್ರೀಯ ರಕ್ತನಾಳ ರೋಗ ಜಾಗೃತಿ ದಿನದ ನೆನಪಿಗಾಗಿ ಸಿಎಂಐ ಆಸ್ಪತ್ರೆಯು ಡಯಾಬಿಟಿಕ್ ಫೂಟ್ಕೇರ್ ಕ್ಲಿನಿಕ್ (ಡಿಎಫ್ಸಿ) ಅನ್ನು ಉದ್ಘಾಟಿಸಿದೆ.</p>.<p>'ಭಾರತದಲ್ಲಿ ಮಧುಮೇಹದಿಂದ ಇಅಂಗಚ್ಛೇದನಗಳಿಗೆ ಕಾರಣವಾಗುತ್ತಿದೆ. ಡಯಾಬಿಟಿಕ್ ಪಾದದ ಹುಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ಡಯಾಬಿಟಿಕ್ ಫೂಟ್ಕೇರ್ ಕ್ಲಿನಿಕ್ ಮಹತ್ವದ ಬೆಳವಣಿಗೆಯಾಗಿದೆ. ಸುಧಾರಿತ ತಂತ್ರಜ್ಞಾನವನ್ನು ತಜ್ಞರ ಮೇಲ್ವಿಚಾರಣೆಯೊಂದಿಗೆ ಮಧುಮೇಹಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ಮಧುಮೇಹ–ಸಂಬಂಧಿತ ಅಂಗಚ್ಛೇದನ- ಮುಕ್ತ ಭವಿಷ್ಯ ರೂಪಿಸುವುದು ನಮ್ಮ ಗುರಿಯಾಗಿದೆ’ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ರಕ್ತನಾಳ ಮತ್ತು ಎಂಡೋವಾಸ್ಕುಲರ್ ಶಸ್ತ್ರಚಿಕಿತ್ಸೆಯ ಪ್ರಮುಖ ಸಲಹಾತಜ್ಞ ಡಾ. ಕೃಷ್ಣ ಚೈತನ್ಯ ಹೇಳಿದ್ದಾರೆ.</p>.<p>ಮಧುಮೇಹ ಪೀಡಿತ ಪಾದದ ಆರೈಕೆ ಮಾಡುವ ಸಾಂಪ್ರದಾಯಿಕ ವಿಧಾನಗಳಲ್ಲಿ ಹಲವಾರು ಇತಿಮಿತಿಗಳಿವೆ. ಇದರಿಂದ ಸಾಮಾನ್ಯವಾಗಿ ಅತ್ಯುತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಕೃತಕ ಬುದ್ಧಿಮತ್ತೆ ಮತ್ತು 3ಡಿ ಸಿಎಡಿ ಅನ್ನು ಸದುಪಯೋಗಪಡಿಸಿ, ಅಂಗಚ್ಛೇದನದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಹಾಗೂ ರೋಗಿ-ಕೇಂದ್ರಿತ ಪರಿಹಾರವನ್ನು ನೀಡುವ ಮೂಲಕ ಈ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುವ ಗುರಿ ಈ ಕ್ಲಿನಿಕ್ ಹೊಂದಿದೆ.</p>.<p>ರೋಗಿಗಳ ಪಾದಗಳನ್ನು ನಿಖರವಾಗಿ ಸ್ಕ್ಯಾನ್ ಮಾಡುವ ಹಾಗೂ ಎಐ ಲೆಕ್ಕಪದ್ಧತಿಯಲ್ಲಿ ಮಾಹಿತಿಯನ್ನು ವಿಶ್ಲೇಷಿಸಿ, ಕ್ಲಿನಿಕ್ ಅಗತ್ಯಕ್ಕೆ ಅನುಸಾರವಾಗಿ ಪಾದರಕ್ಷೆಗಳನ್ನು ರಚಿಸುತ್ತದೆ. ಅದು ದುರ್ಬಲ ಪ್ರದೇಶಗಳಿಗೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ, ಹುಣ್ಣಾಗುವುದನ್ನು ತಡೆಯುತ್ತದೆ. ಬೇಗ ಗುಣವಾಗಲು ಕಾರಣವಾಗುತ್ತದೆ. ಈ ವಿಧಾನ ಅಂಗಚ್ಛೇದನದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. </p>.<p>ಗಾಯದ ನಿರ್ವಹಣೆ, ರಕ್ತನಾಳದ ಮೌಲ್ಯಮಾಪನ ಮತ್ತು ರೋಗಿಗಳಿಗೆ ಶಿಕ್ಷಣ ಸೇರಿದಂತೆ ಸಮಗ್ರ ಮಧುಮೇಹ ಪೀಡಿತ ಪಾದದ ಆರೈಕೆ ಸೇವೆಗಳನ್ನೂ ನೀಡುತ್ತದೆ. </p>.<p>ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಆಸ್ಟರ್ ಡಿಎಂ ಹೆಲ್ತ್ಕೇರ್ ಇಂಡಿಯಾದ ಸಿಇಒ ಡಾ. ನಿತೀಶ್ ಶೆಟ್ಟಿ, "ಡಯಾಬಿಟಿಕ್ ಫೂಟ್ಕೇರ್ ಕ್ಲಿನಿಕ್ ಮಹತ್ವದ ಮೈಲಿಗಲ್ಲಾಗಿದೆ. ಮಧುಮೇಹ ಪೀಡಿತ ಕಾಲು ಸಮಸ್ಯೆಯ ನಿರ್ವಹಣೆಗೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತಿದ್ದೇವೆ ಮತ್ತು ಭಾರತದಲ್ಲಿ ರೋಗದ ವ್ಯಾಪಕ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ಷೇತ್ರದ ಮೇಲೆ ನಮ್ಮ ಕಾರ್ಯತಂತ್ರದಲ್ಲಿ ಹೆಚ್ಚಿನ ಗಮನಹರಿಸಿದ್ದೇವೆ. ಈ ಕ್ಲಿನಿಕ್ ಮಧುಮೇಹ ಪೀಡಿತ ಕಾಲುಗಳ ಆರೈಕೆಯಲ್ಲಿ ನಮ್ಮ ಆರೋಗ್ಯ ರಕ್ಷಣೆಯ ಗುಣಮಟ್ಟ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ" ಎಂದು ಹೇಳಿದರು.</p>.<p>’ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ನಮ್ಮದು. ಮಧುಮೇಹ ನಮ್ಮ ಓಡಾಟ ಅಥವಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಸುರಕ್ಷಿತ ಮತ್ತು ಸುಖಕರ ಭವಿಷ್ಯವನ್ನು ಸೃಷ್ಟಿಸುವುದು ಇದರ ಉದ್ದೇಶ’ ಎಂದು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳ ಸಿಇಒ ಎಸ್.ರಮೇಶ್ ಕುಮಾರ್ ಹೇಳಿದರು.</p>.<p>ಕೃತಕ ಬುದ್ಧಿಮತ್ತೆ(ಎಐ)ಯಂತಹ ಅತ್ಯಾಧುನಿಕ ಸಾಧನಗಳನ್ನು, ಸಹಾನುಭೂತಿಯ ಆರೈಕೆಯೊಂದಿಗೆ ಸಂಯೋಜಿಸುತ್ತದೆ. ನೈತಿಕತೆಯೊಂದಿಗೆ ವೈಯಕ್ತಿಕ ಪರಿಹಾರಗಳನ್ನು ಕಂಡುಕೊಂಡು ಭವಿಷ್ಯವನ್ನು ರೂಪಿಸಲಾಗುತ್ತಿದೆ. ಪ್ರತಿ ಹೊಸತರಲ್ಲಿ ನಂಬಿಕೆ, ರೋಗಿಗಳಿಗೆ ಮೊದಲು ಸೇವೆ ಸಲ್ಲಿಸಲು ಸಾಧ್ಯವಾಗುವ ಪ್ರಗತಿಯಲ್ಲಿ ಭರವಸೆ ಮೂಡಿಸುವ ಉದ್ದೇಶವನ್ನು ಆಸ್ಟರ್ ಸಿಎಂಐ ಆಸ್ಪತ್ರೆ ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>