ಇಂದಿನ ಯುಗದಲ್ಲಿ ಸಮತೋಲನ ಕಳೆದುಕೊಳ್ಳಲು ಕಾರಣಗಳು ಅನೇಕ. ತಂತ್ರಜ್ಞಾನದ ಅತಿಯಾದ ಅವಲಂಬನೆ, ಸಾಮಾಜಿಕಮಾಧ್ಯಮಗಳಲ್ಲಿ ತಪ್ಪು ಹೋಲಿಕೆಗಳು, ಭೌತಿಕ ಸಾಧನಗಳ ಮೇಲಿನ ಅತಿಯಾದ ಗಮನ, ಸದಾ ಬದಲಾಗುವ ಆರ್ಥಿಕ ಮತ್ತು ಸಾಮಾಜಿಕ ನಿಯಮಗಳು, ‘ಎಲ್ಲವನ್ನೂ ಸಾಧಿಸಬೇಕು’ ಎನ್ನುವ ಒತ್ತಡ ನಮ್ಮ ಮಾನಸಿಕ ಶಾಂತಿಯನ್ನು ಹದಗೆಡಿಸಿದೆ.
ಜೀವನದ ಸಮತೋಲನವೆಂಬುದು ಒಮ್ಮೆ ಸಾಧಿಸಿ ಮುಗಿಸುವ ಗುರಿಯಲ್ಲ, ಅದು ನಿತ್ಯದ ಅಭ್ಯಾಸ. ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಈ ಹಂತಗಳನ್ನು ಅನುಸರಿಸಿ, ತಪ್ಪಿದಾಗ ಮತ್ತೆ ಸರಿಪಡಿಸಿಕೊಂಡು ಹೋಗಬೇಕು. ಜೀವನದ ಎಲ್ಲ ಸೊಗಸನ್ನು ಸಮತೋಲನದಿಂದ ಅನುಭವಿಸುವುದೇ ಯಶಸ್ವಿ ಮತ್ತು ಸಂತೋಷಭರಿತ ಜೀವನದ ಗುಟ್ಟು.