ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಕೋವಿಡ್ ರೋಗಿಗಳ ಹೆಚ್ಚಳದಿಂದ ಪರಿಸ್ಥಿತಿ ಕೈ ಮೀರುವ ಹಂತದಲ್ಲಿವೆ. ನಾವು ಪೂರ್ವದಲ್ಲೇ ಎಚ್ಚೆತ್ತುಕೊಂಡರೆ, ವೈರಸ್ ಹರಡುವಿಕೆಯನ್ನು ನಿಯಂತ್ರಿಸಬಹುದು. ನೆಗಡಿ, ಜ್ವರ, ಕೆಮ್ಮು ಇಂತಹ ರೋಗ ಲಕ್ಷಣ ಕಂಡಾಗ, ತಕ್ಷಣ ರೋಗಿಯನ್ನು ಪರೀಕ್ಷೆಗೆ ಒಳಪಡಿಸಬೇಕು, ಪ್ರತ್ಯೇಕವಾಗಿ ಉಳಿಸಬೇಕು, ಚಿಕಿತ್ಸೆಗೆ ಸಲಹೆ ನೀಡಬೇಕು. ಇದರಿಂದ ಕೋವಿಡ್ ನಿಯಂತ್ರಣಕ್ಕೆ ನಮ್ಮದೊಂದು ಕೊಡುಗೆ ನೀಡಿದಂತಾಗುತ್ತದೆ.